ಆ್ಯಪ್ನಗರ

ಮೈಸೂರು ವಿವಿ ಅಂಬೇಡ್ಕರ್ ಕೇಂದ್ರದ ಜಾಲತಾಣ ಲೋಕಾರ್ಪಣೆ ಮಾಡಿದ ಸಚಿವ ಶ್ರೀರಾಮುಲು

'ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಬಾಬಾ ಸಾಹೇಬರು ಬಯಸಿದ್ದ ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಜಾಪ್ರಭುತ್ವವನ್ನು ಎಲ್ಲರೂ ಸೇರಿ ಕಟ್ಟಿ ಬೆಳೆಸಬೇಕಿರುವುದು ನಮ್ಮ ಕರ್ತವ್ಯ' - ಸಚಿವ ಶ್ರೀರಾಮುಲು ಹೇಳಿಕೆ

Vijaya Karnataka Web 26 Nov 2020, 5:55 pm
ಮೈಸೂರು: ಮೈಸೂರು ವಿವಿಯ ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಸಾಕಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಶ್ರೀರಾಮುಲು ಶ್ಲಾಘಿಸಿದರು. ಮೈಸೂರು ವಿವಿ ಅಂಬೇಡ್ಕರ್ ಕೇಂದ್ರದ ವಿಶ್ವ ಜ್ಞಾನಿ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಕೇಂದ್ರದ ಜಾಲತಾಣ ಲೋಕಾರ್ಪಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Vijaya Karnataka Web mysuru
ಮೈಸೂರು ವಿವಿ ಅಂಬೇಡ್ಕರ್ ಕೇಂದ್ರದ ಜಾಲತಾಣ ಲೋಕಾರ್ಪಣೆ ಮಾಡಿದ ಸಚಿವ ಶ್ರೀರಾಮುಲು



ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರವು ಪಠ್ಯಕ್ರಮದಿಂದ ಹಿಡಿದು ಜನ ಸಾಮಾನ್ಯರಿಗೆ ಬಾಬಾ ಸಾಹೇಬರ ವಿಚಾರ ಧಾರೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಅಂಬೇಡ್ಕರ್ ಕೇಂದ್ರದ ಎಲ್ಲ ಕಾರ್ಯಕ್ರಮಗಳಿಗೆ ವಿವಿ ಬೆನ್ನೆಲುಬಾಗಿ ನಿಂತಿದೆ ಎಂದು ಶ್ರೀರಾಮುಲು ಶ್ಲಾಘಿಸಿದರು.

ನಮ್ಮ ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಆಚರಣೆ ಹಾಗೂ ನಡವಳಿಕೆಗಳು ಶ್ರೇಷ್ಠ ಸಂವಿಧಾನದ ಆಶಯಗಳಂತೆ ರೂಪುಗೊಳ್ಳಬೇಕಿದೆ. ಬಾಬಾ ಸಾಹೇಬರು ಬಯಸಿದ್ದ ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಜಾಪ್ರಭುತ್ವವನ್ನು ಎಲ್ಲರೂ ಸೇರಿ ಕಟ್ಟಿ ಬೆಳೆಸಬೇಕಿರುವುದು ನಮ್ಮ ಕರ್ತವ್ಯ ಎಂದು ರಾಮುಲು ಹೇಳಿದರು.

ವಿಜಯನಗರ ಜಿಲ್ಲೆ ರಚನೆ ವಿವಾದ: ಸೋಮಶೇಖರ ರೆಡ್ಡಿ ಮನವೊಲಿಸುತ್ತೇನೆ ಎಂದ ಶ್ರೀರಾಮುಲು

ಈ ವೇಳೆ ಮೈಸೂರು ವಿವಿ ಕುಲಪತಿ ಪ್ರೊ, ಹೇಮಂತ್‌ ಕುಮಾರ್‌ ಮಾತನಾಡಿ, ಸಚಿವರಾದ ಶ್ರೀರಾಮುಲು ಅವರು ವಿವಿಗೆ ಆಗಮಿಸಿರುವುದು ಇಲ್ಲಿನ ವಿವಿ, ಅಂಬೇಡ್ಕರ್ ಕೇಂದ್ರ ಸೇರಿದಂತೆ ವಿದ್ಯಾರ್ಥಿಗಳಿಗೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಶ್ರೀರಾಮುಲು ಅವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಶ್ರಮಿಸುತ್ತಿದ್ದಾರೆ. ಇಲಾಖೆ ಮೂಲಕ ಶೋಷಿತರ ಏಳಿಗೆಗೆ ಪೂರಕವಾದ ಕೆಲಸಗಳನ್ನು ಸಚಿವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮೈಸೂರು ಜನರಿಗೆ ಗುಡ್‌ ನ್ಯೂಸ್..! ದಸರಾ, ದೀಪಾವಳಿ ವಿಶೇಷ ರೈಲು ಸೇವೆ ಮುಂದುವರಿಕೆ

ಬುಡಕಟ್ಟು ಸಮುದಾಯದ ನಾಟಿ ಔಷಧಿ ಪದ್ಧತಿ ಕುರಿತ ಅಧ್ಯಯನ ಲೋಕಾರ್ಪಣೆ: ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಕೊರಗ ಮತ್ತು ಸೋಲಿಗ ಬುಡಕಟ್ಟು ಸಮುದಾಯಗಳ ಭಾಷೆಗಳಲ್ಲಿ ಪ್ರಾಥಮಿಕೆಗಳ ರಚನೆ ಕುರಿತಂತೆ ವಿಜ್ಞಾನ ಭವನದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರ ಉದ್ಘಾಟಿಸಿದ ಸಂಸದ ಶ್ರೀನಿವಾಸ್‌ ಪ್ರಸಾದ್‌, ಬುಡಕಟ್ಟು ಸಮುದಾಯದ ಭಾಷೆಯಲ್ಲಿ ತಯಾರಿಸಿರುವ ಪ್ರಾಥಮಿಕೆ, ಇರುಳಿಗ ಬುಡಕಟ್ಟು ಸಮುದಾಯದ ಭಾಷಾ ಶಬ್ದಕೋಶ, ಜೇನು ಕುರುಬ ನೈಜ ದುರ್ಬಲ ಬುಡಕಟ್ಟು ಸಮುದಾಯದ ಮದುವೆ ಸಂಪ್ರದಾಯ ಅಧ್ಯಯನ, ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ನಾಟಿ ಔಷಧಿ ಪದ್ಧತಿ ಕುರಿತ ಅಧ್ಯಯನವನ್ನು ಲೋಕಾರ್ಪಣೆಗೊಳಿಸಿದರು.

ಮೈಸೂರು ವಿವಿಯಲ್ಲಿ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ