ಮೈಸೂರು: ಮೈಸೂರಿನ ಚಾಮರಾಜ ಮೃಗಾಲಯ ನಿರ್ವಹಣೆಗೆ ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಕ್ಷೇತ್ರದ ದಾನಿಗಳಿಂದ ಒಂದೇ ದಿನ 73.16 ಲಕ್ಷ ರೂ. ಸಂಗ್ರಹಿಸಿಕೊಟ್ಟಿದ್ದಾರೆ.
ಮೈಸೂರು ಮೃಗಾಲಯಕ್ಕೆ ಚೆಕ್ ಹಸ್ತಾಂತರಿಸಿ ಮಾತನಾಡಿದ ಅವರು, ''ಮೃಗಾಲಯ ನಿರ್ವಹಣೆಗೆ ತಿಂಗಳಿಗೆ ಎರಡು ಕೋಟಿ ರೂ. ಬೇಕಾಗುತ್ತದೆ. ಮೃಗಾಲಯಕ್ಕೆ ಭೇಟಿ ನೀಡುವ ಜನರು ಪ್ರವೇಶ ಶುಲ್ಕದಿಂದ ಬರುವ ಹಣದಿಂದಲೆ ಪ್ರಾಣಿ ಪಾಲನೆ ನಡೆಯುತ್ತಿತ್ತು. ಆದರೆ ಸದ್ಯ ಲಾಕ್ಡೌನ್ ಇರುವ ಕಾರಣ ಮೈಸೂರಿನ ಮೃಗಾ ಲಯಕ್ಕೆ ಜನರು ಬರುತ್ತಿಲ್ಲ. ಹಾಗಾಗಿ ಶುಲ್ಕ ರೂಪದಲ್ಲಿ ಬರುತ್ತಿದ್ದ ಹಣ ಸಂಪೂರ್ಣ ವಾಗಿ ಸ್ಥಗಿತಗೊಂಡಿದೆ. ಹಾಗಾಗಿ ದಾನಿಗಳು ಮುಕ್ತವಾಗಿ ಧನ ಸಹಾಯ ಮಾಡುವ ಮುಖಾಂತರ ಪ್ರಾಣಿಗಳ ಪಾಲನೆಗೆ ಸಹಕರಿಸುವಂತೆ ವಾಟ್ಸಾಪ್ ಗ್ರೂಪ್ನಲ್ಲಿ ಮನವಿ ಮಾಡಲಾಗಿತ್ತು. ಈ ಕರೆಗೆ ಓಗೊಟ್ಟ ಕ್ಷೇತ್ರದ ಜನತೆ ಒಂದೇ ದಿನದಲ್ಲಿ 73.16 ಲಕ್ಷ ರೂ. ದಾನ ಮಾಡಿದ್ದಾರೆ. ಇನ್ನಷ್ಟು ಜನರು ದಾನ ನೀಡಲು ಮುಂದೆ ಬಂದಿದ್ದು, ಆ ಹಣ ವನ್ನೂ ಮೃಗಾಲಯಕ್ಕೆ ಹಸ್ತಾಂತರಿಸಲಾಗುವುದು. ಇದಲ್ಲದೆ ಎಲ್ಲಾ ಶಾಸಕರು, ಸಚಿವರೂ ಸಹ ಈ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದೇನೆ,'' ಎಂದರು.
ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಮಾತನಾಡಿ, ''ಏಪ್ರಿಲ್ 22ರಂದು ಮೃಗಾಲಯಕ್ಕೆ ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿಇಲ್ಲಿನ ಪ್ರಾಣಿಗಳ ಪರಿಸ್ಥಿತಿಯನ್ನು ಮನಗಂಡು, 1.75 ಲಕ್ಷ ರೂ. ನೀಡಿ ಆನೆ ಮರಿ ಚಾಮುಂಡಿಯನ್ನು ದತ್ತು ಪಡೆದಿದ್ದರು. 16 ಹುಲಿಗಳ ಒಂದು ದಿನದ ಮಾಂಸದ ಊಟದ ಖರ್ಚಾದ 25 ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದರು. ಇದೇ ವೇಳೆ ಮೃಗಾಲಯಕ್ಕೆ ಇನ್ನಷ್ಟು ಸಹಕಾರ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಷ್ಟು ಬೇಗ ಇಷ್ಟು ದೊಡ್ಡ ಪ್ರಮಾಣದಲ್ಲಿಸಹಾಯ ಮಾಡುತ್ತಾರೆ ಎಂದು ಊಹಿಸಿರಲಿಲ್ಲ.
ಮೃಗಾಲಯದಲ್ಲಿ 1,450 ಪ್ರಾಣಿಗಳಿದ್ದು ಇವುಗಳ ಆಹಾರಕ್ಕೆ ತಿಂಗಳಿಗೆ ಎರಡು ಕೋಟಿ ರೂ. ಬೇಕಾಗುತ್ತದೆ. ಈ ವರೆಗೆ ಮೃಗಾಲಯ ಖರ್ಚಿಗೆ ಸರಕಾರದಿಂದ ಹಣ ಕೇಳಿಲ್ಲ. ಈ ಬಾರಿ ಲಾಕ್ಡೌನ್ನಿಂದ ಜನರು ಬರುತ್ತಿಲ್ಲ. ಆದಾಯ ನಿಂತು ಹೋಗಿದೆ. ಹಾಗಾಗಿ 2002ರಿಂದ ಸ್ವಂತ ಖರ್ಚಿನಲ್ಲಿ ನಡೆಯುತ್ತಿರುವ ಮೃಗಾಲಯ ನಿರ್ವಹಣೆಗೆ ಹಣ ನೀಡುವಂತೆ ಇದೇ ಮೊದಲ ಬಾರಿಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಇದಲ್ಲದೆ ಎಲ್ಲರೂ ಮೃಗಾಲಯ ನಿರ್ವಹಣೆಗೆ ಕೈಲಾದಷ್ಟು ಸಹಾಯ ಮಾಡಿ,'' ಎಂದು ಮನವಿ ಮಾಡಿದರು.
ಮೈಸೂರು ಮೃಗಾಲಯಕ್ಕೆ ಚೆಕ್ ಹಸ್ತಾಂತರಿಸಿ ಮಾತನಾಡಿದ ಅವರು, ''ಮೃಗಾಲಯ ನಿರ್ವಹಣೆಗೆ ತಿಂಗಳಿಗೆ ಎರಡು ಕೋಟಿ ರೂ. ಬೇಕಾಗುತ್ತದೆ. ಮೃಗಾಲಯಕ್ಕೆ ಭೇಟಿ ನೀಡುವ ಜನರು ಪ್ರವೇಶ ಶುಲ್ಕದಿಂದ ಬರುವ ಹಣದಿಂದಲೆ ಪ್ರಾಣಿ ಪಾಲನೆ ನಡೆಯುತ್ತಿತ್ತು. ಆದರೆ ಸದ್ಯ ಲಾಕ್ಡೌನ್ ಇರುವ ಕಾರಣ ಮೈಸೂರಿನ ಮೃಗಾ ಲಯಕ್ಕೆ ಜನರು ಬರುತ್ತಿಲ್ಲ. ಹಾಗಾಗಿ ಶುಲ್ಕ ರೂಪದಲ್ಲಿ ಬರುತ್ತಿದ್ದ ಹಣ ಸಂಪೂರ್ಣ ವಾಗಿ ಸ್ಥಗಿತಗೊಂಡಿದೆ. ಹಾಗಾಗಿ ದಾನಿಗಳು ಮುಕ್ತವಾಗಿ ಧನ ಸಹಾಯ ಮಾಡುವ ಮುಖಾಂತರ ಪ್ರಾಣಿಗಳ ಪಾಲನೆಗೆ ಸಹಕರಿಸುವಂತೆ ವಾಟ್ಸಾಪ್ ಗ್ರೂಪ್ನಲ್ಲಿ ಮನವಿ ಮಾಡಲಾಗಿತ್ತು. ಈ ಕರೆಗೆ ಓಗೊಟ್ಟ ಕ್ಷೇತ್ರದ ಜನತೆ ಒಂದೇ ದಿನದಲ್ಲಿ 73.16 ಲಕ್ಷ ರೂ. ದಾನ ಮಾಡಿದ್ದಾರೆ. ಇನ್ನಷ್ಟು ಜನರು ದಾನ ನೀಡಲು ಮುಂದೆ ಬಂದಿದ್ದು, ಆ ಹಣ ವನ್ನೂ ಮೃಗಾಲಯಕ್ಕೆ ಹಸ್ತಾಂತರಿಸಲಾಗುವುದು. ಇದಲ್ಲದೆ ಎಲ್ಲಾ ಶಾಸಕರು, ಸಚಿವರೂ ಸಹ ಈ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದೇನೆ,'' ಎಂದರು.
ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಮಾತನಾಡಿ, ''ಏಪ್ರಿಲ್ 22ರಂದು ಮೃಗಾಲಯಕ್ಕೆ ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿಇಲ್ಲಿನ ಪ್ರಾಣಿಗಳ ಪರಿಸ್ಥಿತಿಯನ್ನು ಮನಗಂಡು, 1.75 ಲಕ್ಷ ರೂ. ನೀಡಿ ಆನೆ ಮರಿ ಚಾಮುಂಡಿಯನ್ನು ದತ್ತು ಪಡೆದಿದ್ದರು. 16 ಹುಲಿಗಳ ಒಂದು ದಿನದ ಮಾಂಸದ ಊಟದ ಖರ್ಚಾದ 25 ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದರು. ಇದೇ ವೇಳೆ ಮೃಗಾಲಯಕ್ಕೆ ಇನ್ನಷ್ಟು ಸಹಕಾರ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಷ್ಟು ಬೇಗ ಇಷ್ಟು ದೊಡ್ಡ ಪ್ರಮಾಣದಲ್ಲಿಸಹಾಯ ಮಾಡುತ್ತಾರೆ ಎಂದು ಊಹಿಸಿರಲಿಲ್ಲ.
ಮೃಗಾಲಯದಲ್ಲಿ 1,450 ಪ್ರಾಣಿಗಳಿದ್ದು ಇವುಗಳ ಆಹಾರಕ್ಕೆ ತಿಂಗಳಿಗೆ ಎರಡು ಕೋಟಿ ರೂ. ಬೇಕಾಗುತ್ತದೆ. ಈ ವರೆಗೆ ಮೃಗಾಲಯ ಖರ್ಚಿಗೆ ಸರಕಾರದಿಂದ ಹಣ ಕೇಳಿಲ್ಲ. ಈ ಬಾರಿ ಲಾಕ್ಡೌನ್ನಿಂದ ಜನರು ಬರುತ್ತಿಲ್ಲ. ಆದಾಯ ನಿಂತು ಹೋಗಿದೆ. ಹಾಗಾಗಿ 2002ರಿಂದ ಸ್ವಂತ ಖರ್ಚಿನಲ್ಲಿ ನಡೆಯುತ್ತಿರುವ ಮೃಗಾಲಯ ನಿರ್ವಹಣೆಗೆ ಹಣ ನೀಡುವಂತೆ ಇದೇ ಮೊದಲ ಬಾರಿಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಇದಲ್ಲದೆ ಎಲ್ಲರೂ ಮೃಗಾಲಯ ನಿರ್ವಹಣೆಗೆ ಕೈಲಾದಷ್ಟು ಸಹಾಯ ಮಾಡಿ,'' ಎಂದು ಮನವಿ ಮಾಡಿದರು.