ಆ್ಯಪ್ನಗರ

ಮೈಸೂರು: ಚೀಲದಲ್ಲಿ ಪತ್ತೆಯಾದ ಗೃಹಿಣಿ ಶವ; ಮದುವೆಗೂ ಮುಂಚಿನ ಪ್ರೀತಿ ಸಾವಿಗೆ ಕಾರಣವಾಯ್ತಾ..?

ನಂಜನಗೂಡು ತಾಲೂಕಿನಲ್ಲಿ ಕಾಣೆಯಾಗಿದ್ದ ಗೃಹಿಣಿಯ ಶವ ಮಾರ್ಬಳ್ಳಿ ಸಮೀಪದ ಕೆರೆ ಬಳಿ ಚೀಲದಲ್ಲಿ ಪತ್ತೆಯಾಗಿದೆ. ಮದುವೆಗೂ ಮುಂಚಿನ ಪ್ರೀತಿ ಸಾವಿಗೆ ಕಾರಣವಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದು, ಯುವಕನ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾರೆ.

Vijaya Karnataka Web 1 Dec 2020, 12:23 pm
ನಂಜನಗೂಡು (ಮೈಸೂರು): ತಾಲೂಕಿನ ಕೆಂಬಾಳು ಗ್ರಾಮದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ಸಾವಿಗೆ ಅನ್ಯಕೋಮಿನ ಯುವಕನೇ ಕಾರಣ ಎಂದು ಮೃತಳ ಸಂಬಂಧಿಕರು ಮನೆಗೆ ನುಗ್ಗಿ ದಾಂದಲೆ ನಡೆಸಿ, ಎರಡು ಬೈಕ್‌ಗಳನ್ನು ಸುಟ್ಟು ಹಾಕಿದ್ದಾರೆ.
Vijaya Karnataka Web Crime


ಗ್ರಾಮದ ಶಶಿಕುಮಾರ್‌ ಪತ್ನಿ ಶ್ವೇತಾ (20) ಮೃತಳು. ಈಕೆಯ ಶವ ಮಾರ್ಬಳ್ಳಿ ಸಮೀಪದ ಕೆರೆ ಬಳಿ ಭಾನುವಾರ ಚೀಲದಲ್ಲಿ ಪತ್ತೆಯಾಗಿದ್ದು, ಈಕೆಯನ್ನು ಶಿವು ಎಂಬಾತನೇ ಕೊಲೆ ಎಸಗಿದ್ದಾನೆ ಎಂದು ಆರೋಪಿಸಿ ಮೃತಳ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?
ಗ್ರಾಮದ ಶಿವಮ್ಮ ಪುತ್ರಿ ಶ್ವೇತಾಳನ್ನು ಸೋದರ ಸಂಬಂಧಿ ಶಶಿಕುಮಾರ್‌ ಜತೆ ಇತ್ತೀಚೆಗೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಶಶಿಕುಮಾರ್‌ ಕಾಸರಗೋಡಿನ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಈತನೊಂದಿಗೆ ತಾಯಿ ಶಿವಮ್ಮ ಜತೆಗೂಡಿ ಕೆಲ ದಿನಗಳ ಕಾಲ ಶ್ವೇತಾ ಅಲ್ಲೇ ನೆಲೆಸಿದ್ದಳು.

ಶಿವಮ್ಮಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಹಿಂದೆ ಕೆಂಬಾಳು ಗ್ರಾಮಕ್ಕೆ ಮರಳಿದ್ದಾರೆ. ನ.26ರಂದು ತಡರಾತ್ರಿಯಲ್ಲಿ ಶ್ವೇತಾ ಮನೆಯಿಂದ ಕಾಣೆಯಾಗಿದ್ದಳು.ಇದೇ ಗ್ರಾಮದ ಅನ್ಯ ಕೋಮಿನ ಯುವಕ ಶಿವು ಜತೆ ಮದುವೆಗೂ ಮುಂಚೆ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಈತನೊಂದಿಗೆ ಶ್ವೇತಾ ಕಾಣೆಯಾಗಿರುವ ಶಂಕೆ ವ್ಯಕ್ತವಾಗಿತ್ತು.

ಮೈಸೂರು: ಜಾತಿಗೆ ತೋರುವ ಕಾಳಜಿ ಭಾಷೆಗೇಕಿಲ್ಲ..? ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ರಘು ಬೇಸರ

ಭಾನುವಾರ ಶ್ವೇತಾಳ ಮೃತದೇಹ ಚೀಲದಲ್ಲಿ ಹಾಕಿ ಕೆರೆ ಸಮೀಪ ಪತ್ತೆಯಾಗುತ್ತಿದ್ದಂತೆ ಆಕ್ರೋಶಗೊಂಡ ಶ್ವೇತಾ ಕುಟುಂಬದವರು ಶಿವು ಕೊಲೆ ಎಸಗಿರುವುದಾಗಿ ಶಂಕಿಸಿ ಆತನ ಮನೆಗೆ ನುಗ್ಗಿ ಕುಟುಂಬದವರ ಮೇಲೆ ಹಲ್ಲೆನಡೆಸಿದ್ದಾರೆ. ಮನೆಯ ಕಿಟಕಿಯ ಗಾಜು, ಹೆಂಚುಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಒಂದು ಬೈಕ್‌ ಹಾಗೂ ಸ್ಕೂಟರ್‌ ಸುಟ್ಟು ದಾಂಧಲೆ ನಡೆಸಿದ್ದಾರೆ. ಈ ಕುರಿತು ಹುಲ್ಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಶಿವು ತಾಯಿ ಲಕ್ಷ್ಮಮ್ಮ ದೂರು ದಾಖಲಿಸಿದ್ದಾರೆ.

ಮೈಸೂರು: 250 ಗ್ರಾಮ ಪಂಚಾಯಿತಿಗಳಿಗೆ ಎಲೆಕ್ಷನ್‌..! ಡಿ.22ಕ್ಕೆ 5, ಡಿ.27ಕ್ಕೆ 3 ತಾಲೂಕಲ್ಲಿ ವೋಟಿಂಗ್‌

ಕೊಲೆ ಶಂಕೆ?
ಇನ್ನು, ತಡರಾತ್ರಿಯಲ್ಲಿ ಮನೆ ಬಿಟ್ಟು ಹೋಗಿದ್ದ ಶ್ವೇತಾ, ಶಿವು ಜತೆಗೆ ಹೋಗಿರುವುದಾಗಿ ಆಕೆಯ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆಯು ಮದುವೆಯಾಗುವಂತೆ ಪೀಡಿಸುತ್ತಿದ್ದರಿಂದ ಕೊಲೆ ಎಸಗಿರಬಹುದು ಎಂಬ ಮಾತುಗಳು ಪ್ರಕರಣ ಸುತ್ತ ಗಿರಿಕಿ ಹೊಡೆಯುತ್ತಿವೆ. ಮೃತದೇಹ ಪತ್ತೆಯಾದ ಸ್ಥಳಕ್ಕೆ ಜಯಪುರ ಠಾಣೆಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದರು.

ಮೈಸೂರು: ಜಿಲ್ಲೆಯಲ್ಲಿ 12 ಭತ್ತ ಖರೀದಿ ಕೇಂದ್ರ ಸ್ಥಾಪನೆ | ಡಿ.20 ರಿಂದ ಮಾ.20 ರವರೆಗೆ ಮಾರಾಟಕ್ಕೆ ಅವಕಾಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ