ಆ್ಯಪ್ನಗರ

'ಸದ್ಯಕ್ಕೆ ಜೆಡಿಎಸ್‌ ಪಕ್ಷ ಬಿಡುವ ಯೋಚನೆ ಇಲ್ಲ': ಶಾಸಕ ಜಿ. ಟಿ ದೇವೇಗೌಡ ಸ್ಪಷ್ಟನೆ

'ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳು ಗ್ರಾಪಂ ಚುನಾವಣೆಯಲ್ಲಿ ರಾಜಕಾರಣ ಮಾಡಬಾರದು. ಜನ ಸೇವೆ ಮಾಡುವವರು ಯಾರಿದ್ದಾರೆ ಎಂಬುದನ್ನು ಗುರುತಿಸಿ ಆಯ್ಕೆ ಮಾಡಿ ಕಳುಹಿಸಬೇಕು. ಜನರೂ ಕೂಡಾ ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಗುರ್ತಿಸಿ ಆಯ್ಕೆ ಮಾಡಬೇಕು' - ಜಿ. ಟಿ. ದೇವೇಗೌಡ ಆಶಯ

Vijaya Karnataka Web 23 Nov 2020, 5:20 pm
ಮೈಸೂರು: ಜೆಡಿಎಸ್‌ ಬಿಡುವ ಕುರಿತು ನಾನು ಯೋಚನೆ ಮಾಡಿಲ್ಲ. ನನ್ನ ಅವಧಿ ಮುಗಿಯುವವರೆಗೂ ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಿ ತೀರ್ಮಾನ ಮಾಡುತ್ತೇನೆ ಎಂದು ಶಾಸಕ ಜಿ. ಟಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
Vijaya Karnataka Web GT devegowda


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ನಾನು ಜಾತ್ಯತೀತ ಜನತಾದಳದ ಶಾಸಕನಾಗಿದ್ದೇನೆ. ಈಗ ಪಕ್ಷ ಬಿಡುವ ಮಾತೇ ಇಲ್ಲ. ಇನ್ನೆರಡು ವರ್ಷ ಜಾತ್ಯತೀತ ಜನತಾದಳದ ಶಾಸಕನಾಗಿಯೇ ಅವಧಿ ಮುಗಿಸುತ್ತೇನೆ. ಮುಂದಿನ ಚುನಾವಣೆಯ ವೇಳೆಗೆ ಜಾತ್ಯತೀತ ಜನತಾದಳ ಹೇಗಿರುತ್ತದೆ? ಬಿಜೆಪಿ ಹೇಗಿರುತ್ತದೆ? ಕಾಂಗ್ರೆಸ್ ಹೇಗಿರುತ್ತದೆ ಎಂಬುದನ್ನು ಗಮನಿಸುತ್ತೇನೆ. ಅಂತಿಮವಾಗಿ ಕ್ಷೇತ್ರದ ಜನರೊಂದಿಗೆ ಸಮಾಲೋಚನೆ ನಡೆಸಿ ರಾಜಕೀಯ ತೀರ್ಮಾನ ಮಾಡುತ್ತೇನೆ ಎಂದಿರುವ ಜಿಟಿ ದೇವೇಗೌಡ, ಈಗಲೇ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಪಕ್ಷ ಬದಲಾವಣೆಯ ಗುಸುಗುಸು ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಮೈಸೂರು ಟಿಎಪಿಎಂಸಿಎಸ್‌ ಎಲೆಕ್ಷನ್‌ನಲ್ಲಿ ಜಿಟಿಡಿ ಮೇಲುಗೈ..! ಶಾಸಕರ ಬೆಂಬಲಿತ 13 ಮಂದಿ ಅವಿರೋಧ ಆಯ್ಕೆ

ಗ್ರಾಪಂ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಜಿಟಿ ದೇವೇಗೌಡ, ಈ ಚುನಾವಣೆಯು ಪಕ್ಷಾತೀತವಾಗಿ ನಡೆಯಬೇಕು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳು ಗ್ರಾಪಂ ಚುನಾವಣೆಯಲ್ಲಿ ರಾಜಕಾರಣ ಮಾಡಬಾರದು. ಜನ ಸೇವೆ ಮಾಡುವವರು ಯಾರಿದ್ದಾರೆ ಎಂಬುದನ್ನು ಗುರುತಿಸಿ ಆಯ್ಕೆ ಮಾಡಿ ಕಳುಹಿಸಬೇಕು. ಜನರೂ ಕೂಡಾ ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಗುರ್ತಿಸಿ ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.

ಮೈಸೂರು ಪಾಲಿಕೆಯಲ್ಲಿ ಗ್ರಾಪಂ ಸೇರ್ಪಡೆ ಜಟಾಪಟಿ..! ಸಭೆಯಿಂದ ಹೊರನಡೆದ ಶಾಸಕ ಜಿ.ಟಿ.ದೇವೇಗೌಡ

ಗ್ರಾಪಂ ಚುನಾವಣೆಯಲ್ಲಿ 20 ಗುಂಟೆ ಜಮೀನು ಹೊಂದಿರುವ ವ್ಯಕ್ತಿಯು ಚುನಾವಣೆಗೆ ನಿಂತರೆ ಅದನ್ನು ಮಾರಿ ಮನೆ ಹಾಳು ಮಾಡಿಕೊಳ್ಳುವುದು ಬೇಡ. ಅಂತಹ ಕೆಲಸಕ್ಕೆ ಕೈ ಹಾಕದಂತೆ ಪಕ್ಷಾತೀತವಾಗಿ ಚುನಾವಣೆ ನಡೆಯಲು ರಾಜಕೀಯ ಪಕ್ಷಗಳು ಅವಕಾಶ ಮಾಡಿಕೊಡಬೇಕು ಎಂದು ಜಿಟಿ ದೇವೇಗೌಡ ಆಗ್ರಹಿಸಿದರು.

ಕಾಂಗ್ರೆಸ್ ಸೇರುತ್ತಾರಾ ಜೆಡಿಎಸ್ ನಾಯಕ? ಜಿಟಿಡಿ-ಡಿಕೆಶಿ ಭೇಟಿಯಿಂದ ವದಂತಿಗೆ ರೆಕ್ಕೆ ಪುಕ್ಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ