ಆ್ಯಪ್ನಗರ

ಟೀ ಮಾರಿದ ಶಾಸಕ ಜಮೀರ್ ಅಹಮದ್ !

ನಗರದ ಸಯ್ಯಾಜಿರಾವ್ ರಸ್ತೆ ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಸರ್ಕಲ್ ಬಳಿಯ ರಸ್ತೆ ಬದಿಯ ಟೀ ಅಂಗಡಿ ಯೊಂದರಲ್ಲಿ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಟೀ ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

Vijaya Karnataka 23 Mar 2018, 5:10 am
ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆ ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಸರ್ಕಲ್ ಬಳಿಯ ರಸ್ತೆ ಬದಿಯ ಟೀ ಅಂಗಡಿ ಯೊಂದರಲ್ಲಿ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಟೀ ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
Vijaya Karnataka Web mla jameer ahamed tea sale
ಟೀ ಮಾರಿದ ಶಾಸಕ ಜಮೀರ್ ಅಹಮದ್ !


ಗುರುವಾರ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಶಾಸಕ ಜಮೀರ್ ಅಹಮದ್ ನಗರದ ಸಯ್ಯಾಜಿ ರಾವ್ ರಸ್ತೆಯಿಂದ ಯೂಸ್‌ು ಚೌಕದವರೆಗೆ ಸಾಡೇ ರಸ್ತೆಯ ಅಭಿವೃದ್ಧಿ ಪಡಿಸುವ ಕಾಮಗಾರಿಯ ಚಾಲನೆ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಕಾಮಗಾರಿ ಉದ್ಘಾಟನೆಗೊಂಡ ಸಮೀಪದ ಟೀ ಅಂಗಡಿಯೊಂದರಲ್ಲಿ ಮಾರಾಟ ಮಾಡಲು ಮುಂದಾದ ಶಾಸಕರನ್ನು ಕಂಡು ಟೀ ಕೊಳ್ಳಲು ಜನಪ್ರತಿನಿಧಿಗಳೂ ಮುಗಿಬಿದ್ದರು. ಸಾರ್ವಜನಿಕರು ಹಾಗೂ ಬೆಂಬಲಿಗರು ಕೈಗೆ ಸಿಕ್ಕಷ್ಟು ಹಣವನ್ನು ನೀಡಿ ಟೀ ಕೊಂಡುಕೊಳ್ಳಲು ಮುಂದಾದರು. 10 ನಿಮಿಷದಲ್ಲಿ ಬರೋಬ್ಬರಿ 5 ಸಾವಿರಕ್ಕೂ ಹೆಚ್ಚು ರೂ.ಗಳ ಟೀ ಮಾರಾಟ ಮಾಡಿದ ಜಮೀರ್ ಅಹಮದ್ ಬಳಿಕ ತಮ್ಮ ಬಳಿ ಇದ್ದ 10 ಸಾವಿರ ರೂ.ಗಳನ್ನು ಟೀ ಅಂಗಡಿ ಮಾಲೀಕನಿಗೆ ನೀಡಿದರು.

ಇದಕ್ಕೂ ಮುನ್ನ 120 ಲಕ್ಷ ರೂ. ವೆಚ್ಚದಲ್ಲಿ ನಗರದ ಸಯ್ಯಾಜಿರಾವ್ ರಸ್ತೆ ಯಿಂದ ಯೂಸ್‌ು ಚೌಕದವರೆಗೆ ಸಾಡೇ ರಸ್ತೆಯ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಶಾಸಕ ವಾಸು ಅವರು ಚಾಲನೆ ನೀಡಿ ದರು. ಇದೇ ವೇಳೆ ವಿವಿಧ ನಿಗಮದಡಿ ಆಯ್ಕೆಗೊಂಡ 29 ಮಂದಿ ಲಾನು ಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ದರು. ನಗರಪಾಲಿಕೆ ಸದಸ್ಯ ಸುಹೆಲ್ ಬೇಗ್, ಎಂ.ರಮೇಶ್, ಎಸಿ ನಾಗರಾಜು, ಆರ್‌ಐ ಅನಿಲ್‌ಕುಮಾರ್, ಸಿದ್ಧರಾಜು ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ