ಆ್ಯಪ್ನಗರ

10ನೇ ತರಗತಿ ಬಡ ವಿದ್ಯಾರ್ಥಿನಿಗೆ ನೆರವಾದ ಶಾಸಕ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬವೊಂದರ 10ನೇ ತರಗತಿ ವಿದ್ಯಾರ್ಥಿನಿಯ ಶಿಕ್ಷಣ ಶುಲ್ಕ ಪಾವತಿಸುವ ಮೂಲಕ ಶಾಸಕ ಎಸ್‌.ಎ.ರಾಮದಾಸ್‌ ಅವರು ನೆರವಾಗಿದ್ದಾರೆ.

Vijaya Karnataka 20 Mar 2019, 5:00 am
ಮೈಸೂರು : ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬವೊಂದರ 10ನೇ ತರಗತಿ ವಿದ್ಯಾರ್ಥಿನಿಯ ಶಿಕ್ಷಣ ಶುಲ್ಕ ಪಾವತಿಸುವ ಮೂಲಕ ಶಾಸಕ ಎಸ್‌.ಎ.ರಾಮದಾಸ್‌ ಅವರು ನೆರವಾಗಿದ್ದಾರೆ.
Vijaya Karnataka Web mla who helped the 10th class poor student
10ನೇ ತರಗತಿ ಬಡ ವಿದ್ಯಾರ್ಥಿನಿಗೆ ನೆರವಾದ ಶಾಸಕ


ವಿಶ್ವೇಶ್ವರ ನಗರದಲ್ಲಿರುವ ಸಂತ ಥಾಮಸ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಆರ್‌. ಪಲ್ಲವಿ ಅವರ ತಂದೆ ರಾಘವೇಂದ್ರ ಅವರು ತಾವು ಮಾಡುತ್ತಿದ್ದ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದಲ್ಲದೆ ಅನಾರೋಗ್ಯದಿಂದ ಕೆಲವು ತಿಂಗಳಿನಿಂದ ಹಾಸಿಗೆ ಹಿಡಿದಿದ್ದಾರೆ.

ಹೀಗಾಗಿ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ. ವಿಷಯ ತಿಳಿದ ರಾಮದಾಸ್‌ ಅವರು ವಿದ್ಯಾರ್ಥಿನಿಯ ಪೋಷಕರಿಗೆ ಮಂಗಳವಾರ ಆರ್ಥಿಕ ನೆರವು ನೀಡಿ ಸಂತೈಸಿದರು.

ವಿಷಯ ತಿಳಿದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡುರಂಗ ಅವರು ಶಾಲಾ ಮುಖ್ಯೋಪಾಧ್ಯಾಯರ ಜತೆ ಮಾತನಾಡಿ ವಿದ್ಯಾರ್ಥಿನಿಗೆ ನೆರವಾದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ