ಮೈಸೂರು: ಗಣೇಶನೊಂದಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ವೀರ ಯೋಧ ಅಭಿನಂದನ್ ವರ್ಧಮಾನ್, ವಿಶ್ವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು....
ನಗರದ ಕುಂಬಾರಗೇರಿಯ ಕಲಾವಿದ ರೇವಣ್ಣ ಪ್ರತಿ ಬಾರಿಯೂ ಗೌರಿ ಗಣೇಶ ಹಬ್ಬಕ್ಕೆ ವಿಶೇಷ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಪ್ರಸ್ತುತ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಗಣೇಶ ಮೂರ್ತಿಗೆ ರೂಪ ನೀಡುತ್ತಾರೆ. ಅದರಂತೆ ಈ ಬಾರಿಯೂ ವಿಶಿಷ್ಟವಾಗಿ ಮೂರ್ತಿಗಳನ್ನು ತಯಾರಿಸಿದ್ದು ಎಲ್ಲರ ಗಮನ ಸೆಳೆಯುತ್ತಿವೆ.
ಇತ್ತೀಚೆಗೆ ನಿಧನರಾದ, ಕೇಂದ್ರದ ಮಾಜಿ ಸಚಿವರಾದ ಅನಂತಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತಿತರ ಗಣ್ಯರೂ ರೇವಣ್ಣ ಅವರ ಕೈನಲ್ಲಿ ಆಕೃತಿಯಾಗಿ ರೂಪಪಡೆದುಕೊಂಡಿದ್ದು, ಗಮನಸೆಳೆಯುತ್ತಿವೆ.
ಗಣೇಶನೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಏರ್ ಸ್ಟ್ರೈಕ್ ವೇಳೆ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವೀರ ಯೋಧ ಅಭಿನಂದನ್ ವರ್ಧಮಾನ್, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದ ಪಿ.ವಿ.ಸಿಂಧು ಮೂರ್ತಿಗಳು ಗಮನ ಸೆಳೆಯುತ್ತವೆ.
ಅಲ್ಲದೆ ಗಣೇಶನೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಈ ಬಾರಿಯ ದಸರಾ ಉದ್ಘಾಟಕರಾದ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಮೂರ್ತಿಗಳೂ ಗಮನಸೆಳೆಯುತ್ತಿವೆ. ಶಿವನ ರೂಪ ತಾಳಿರುವ ಗಣೇಶನ ಕೈಗಳಲ್ಲಿನ ಕಮಲದ ಮೇಲೆ ಪ್ರಧಾನಿ ಮೋದಿ ಕುಳಿತು ಧ್ಯಾನ ಮಾಡುತ್ತಿರುವ ಮೂರ್ತಿ ಆಕರ್ಷಕವಾಗಿದೆ.
''ಪ್ರತಿ ಬಾರಿಯೂ ಒಂದಲ್ಲಾ ಒಂದು ವಿಶೇಷತೆಗಳೊಂದಿಗೆ ಗಣೇಶ ಮೂರ್ತಿಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಬಾರಿ ಮೋದಿ, ಅಮಿತ್ ಶಾ, ಸಿಂಧು ಮತ್ತಿತರ ಪ್ರಮುಖರು ಗಣೇಶನೊಂದಿಗೆ ಇರುವ ಮೂರ್ತಿಗಳನ್ನು ತಯಾರಿಸಿದ್ದೇನೆ. ವಿಭಿನ್ನವಾಗಿ ಮೂರ್ತಿಗಳನ್ನು ತಯಾರಿಸುವುದು ನನ್ನ ಉದ್ದೇಶ,''ಎಂದು ಕಲಾವಿದ ರೇವಣ್ಣ ತಿಳಿಸಿದರು.
ನಗರದ ಕುಂಬಾರಗೇರಿಯ ಕಲಾವಿದ ರೇವಣ್ಣ ಪ್ರತಿ ಬಾರಿಯೂ ಗೌರಿ ಗಣೇಶ ಹಬ್ಬಕ್ಕೆ ವಿಶೇಷ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಪ್ರಸ್ತುತ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಗಣೇಶ ಮೂರ್ತಿಗೆ ರೂಪ ನೀಡುತ್ತಾರೆ. ಅದರಂತೆ ಈ ಬಾರಿಯೂ ವಿಶಿಷ್ಟವಾಗಿ ಮೂರ್ತಿಗಳನ್ನು ತಯಾರಿಸಿದ್ದು ಎಲ್ಲರ ಗಮನ ಸೆಳೆಯುತ್ತಿವೆ.
ಇತ್ತೀಚೆಗೆ ನಿಧನರಾದ, ಕೇಂದ್ರದ ಮಾಜಿ ಸಚಿವರಾದ ಅನಂತಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತಿತರ ಗಣ್ಯರೂ ರೇವಣ್ಣ ಅವರ ಕೈನಲ್ಲಿ ಆಕೃತಿಯಾಗಿ ರೂಪಪಡೆದುಕೊಂಡಿದ್ದು, ಗಮನಸೆಳೆಯುತ್ತಿವೆ.
ಗಣೇಶನೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಏರ್ ಸ್ಟ್ರೈಕ್ ವೇಳೆ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವೀರ ಯೋಧ ಅಭಿನಂದನ್ ವರ್ಧಮಾನ್, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದ ಪಿ.ವಿ.ಸಿಂಧು ಮೂರ್ತಿಗಳು ಗಮನ ಸೆಳೆಯುತ್ತವೆ.
ಅಲ್ಲದೆ ಗಣೇಶನೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಈ ಬಾರಿಯ ದಸರಾ ಉದ್ಘಾಟಕರಾದ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಮೂರ್ತಿಗಳೂ ಗಮನಸೆಳೆಯುತ್ತಿವೆ. ಶಿವನ ರೂಪ ತಾಳಿರುವ ಗಣೇಶನ ಕೈಗಳಲ್ಲಿನ ಕಮಲದ ಮೇಲೆ ಪ್ರಧಾನಿ ಮೋದಿ ಕುಳಿತು ಧ್ಯಾನ ಮಾಡುತ್ತಿರುವ ಮೂರ್ತಿ ಆಕರ್ಷಕವಾಗಿದೆ.
''ಪ್ರತಿ ಬಾರಿಯೂ ಒಂದಲ್ಲಾ ಒಂದು ವಿಶೇಷತೆಗಳೊಂದಿಗೆ ಗಣೇಶ ಮೂರ್ತಿಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಬಾರಿ ಮೋದಿ, ಅಮಿತ್ ಶಾ, ಸಿಂಧು ಮತ್ತಿತರ ಪ್ರಮುಖರು ಗಣೇಶನೊಂದಿಗೆ ಇರುವ ಮೂರ್ತಿಗಳನ್ನು ತಯಾರಿಸಿದ್ದೇನೆ. ವಿಭಿನ್ನವಾಗಿ ಮೂರ್ತಿಗಳನ್ನು ತಯಾರಿಸುವುದು ನನ್ನ ಉದ್ದೇಶ,''ಎಂದು ಕಲಾವಿದ ರೇವಣ್ಣ ತಿಳಿಸಿದರು.