ಆ್ಯಪ್ನಗರ

ದೇವರಾಜ ಅರಸ್‌ ಹಾದಿಯಲ್ಲಿ ಮೋದಿ

ಬಿಜೆಪಿ ಸೇರಿ ಅಭ್ಯರ್ಥಿಯಾಗಿರುವ ಎಚ್‌.ವಿಶ್ವನಾಥ್‌ ಅವರು ಅಧಿಕೃತವಾಗಿ ಹುಣಸೂರು ಬಿಜೆಪಿ ಕಚೇರಿಯನ್ನು ಪ್ರವೇಶಿಸಿ ಮೂಲ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.

Vijaya Karnataka 17 Nov 2019, 5:00 am
ಹುಣಸೂರು: ಬಿಜೆಪಿ ಸೇರಿ ಅಭ್ಯರ್ಥಿಯಾಗಿರುವ ಎಚ್‌.ವಿಶ್ವನಾಥ್‌ ಅವರು ಅಧಿಕೃತವಾಗಿ ಹುಣಸೂರು ಬಿಜೆಪಿ ಕಚೇರಿಯನ್ನು ಪ್ರವೇಶಿಸಿ ಮೂಲ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.
Vijaya Karnataka Web MYS16HUN5_45
ಹುಣಸೂರಿನಲ್ಲಿಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಅವರಿಗೆ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಬಿ ಫಾರಂ ನೀಡಿದರು.


ಈ ವೇಳೆ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಸಂಸದ ಪ್ರತಾಪ ಸಿಂಹ, ಮಾಜಿ ಸಚಿವ ವಿಜಯಶಂಕರ್‌, ಮಾಜಿ ಶಾಸಕ ಸಿದ್ದರಾಜು, ತಾಲೂಕು ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್‌, ನಗರ ಅಧ್ಯಕ್ಷ ರಾಜೇಂದ್ರ, ಎಸ್‌ಸಿ ಘಟಕದ ಅಧ್ಯಕ್ಷ ಅಪ್ಪಣ್ಣ ಸೇರಿದಂತೆ ಪದಾಧಿಕಾರಿಗಳು ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು.

ಅಭಿವೃದ್ಧಿ-ವಿಶ್ವಾಸದ ರಾಜಕಾರಣ ಮಾಡುವೆ: ಆನಂತರ ರುಕ್ಮಿಣಿ ವಿಠಲ ಕಲ್ಯಾಣ ಮಂಟಪದಲ್ಲಿಆಯೋಜಿಸಿದ್ದ ಬಿಜೆಪಿ ಸಮ್ಮಿಲನ ಕಾರ್ಯಕ್ರಮದಲ್ಲಿಭಾಗವಹಿಸಿ ಮಾತನಾಡಿದ ವಿಶ್ವನಾಥ್‌ ಅವರು ಪ್ರಧಾನಿ ಮೋದಿ ದೇವರಾಜ ಅರಸರ ಹಾದಿಯಲ್ಲೇ ಸಾಗುತ್ತಿದ್ದು, ಅವರ ಎಲ್ಲಕಾರ್ಯಕ್ರಮಗಳು ಸಮೀಕರಣಗೊಂಡು ದೇಶದ ಎಲ್ಲಧರ್ಮ, ಭಾಷಿಕರ ಅಭಿವೃದ್ಧಿಗೆ ಪೂರಕವಾಗಿದೆ. ಪಕ್ಷದ ರಾಷ್ಟಾ್ಧ್ಯಕ್ಷ ಅಮಿತ್‌ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಸೇರಿದಂತೆ ಎಲ್ಲನಾಯಕರ ಪ್ರೀತಿ ವಿಶ್ವಾಸದೊಂದಿಗೆ ಪಕ್ಷ ಸೇರಿದ್ದೇನೆ. ನನ್ನ 40 ವರ್ಷಗಳ ಅನುಭವವನ್ನು ಪಕ್ಷ ಬಳಸಿಕೊಳ್ಳುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧ್ದಿಗೆ ಶ್ರಮಿಸುತ್ತೇನೆ ಎಂದರು.

ತಾಲೂಕಿನಲ್ಲಿಕಳೆದ 10 ವರ್ಷಗಳ ಕಾಲ ಅಮಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲೆ, ಅಟ್ರಾಸಿಟಿ, ಎತ್ತಿಕಟ್ಟಿ ಹೊಡೆದಾಡಿಸುವ ಆಡಳಿತವಿತ್ತು. ತಾವು ಶಾಸಕರಾಗಿದ್ದ ವೇಳೆ ಇಂತಹ ಯಾವುದೇ ಘಟನೆಗಳನ್ನು ನಡೆಯಲು ಬಿಡಲಿಲ್ಲಎಂದರು.

ಮೋದಿ ನೇತೃತ್ವದ ಸರಕಾರ ಭಾರತದಲ್ಲಿ ಬದಲಾವಣೆಯ ಬೆಳಕನ್ನು ನೀಡಿದೆ. ಮೋದಿ ಆಡಳಿತದ ಈ 5 ವರ್ಷಗಳಲ್ಲಿದೇಶದ ಅಲ್ಪಸಂಖ್ಯಾತರಿಗೆ ತೊಂದರೆಯೇನೂ ಆಗಿಲ್ಲವಲ್ಲ. ವಿಪಕ್ಷಗಳು ದಲಿತರ ಕಾಲನಿಗೆ ಹೋಗಿ ಬಿಜೆಪಿ ಸಂವಿಧಾನಕ್ಕೆ ದ್ರೋಹ ಬಗೆಯುತ್ತದೆ, ಅಲ್ಪಸಂಖ್ಯಾತರ ಕಾಲನಿಗೆ ತೆರಳಿ ನಿಮ್ಮನ್ನು ಬದುಕಲು ಬಿಡುವುದಿಲ್ಲವೆಂದು ಬೊಬ್ಬೆ ಹಾಕುತ್ತವೆ. ತಾಲೂಕಿನ ಅಲ್ಪಸಂಖ್ಯಾತರ ರಕ್ಷಣೆ ನಮ್ಮೆಲ್ಲರ ಹೊಣೆ. ಅಂಜಬೇಡಿ, ನನ್ನೊಂದಿಗೆ ಕೈಜೋಡಿಸಿ, ನಾನು ನಿಮ್ಮೊಂದಿಗಿ ರುತ್ತೇನೆ ಎಂದು ಭರವಸೆ ನೀಡಿದರು. ಸಂಸದ ಪ್ರತಾಪಸಿಂಹ, ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ವಿಶ್ವನಾಥ್‌ ಆಯ್ಕೆಯಾಗಬೇಕಿದೆ. ತಾಲೂಕಿನ ಮತದಾರರು ವಿಶ್ವನಾಥ್‌ರನ್ನು ಗೆಲ್ಲಿಸಿಕೊಟ್ಟಲ್ಲಿಮುಖ್ಯಮಂತ್ರಿ ಯಡಿಯೂರಪ್ಪ ಇವರನ್ನು ಸಚಿವರನ್ನಾಗಿಸುತ್ತಾರೆ ಎಂದರು. ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಕಾರ್ಯಕರ್ತರ ಸಮ್ಮುಖದಲ್ಲಿವಿಶ್ವನಾಥರಿಗೆ ಬಿ.ಪಾರಂ ಹಸ್ತಾಂತರಿಸಿ ಮಾತನಾಡಿ, ವಿಶ್ವನಾಥ್‌ ಬಿಜೆಪಿ ಸೇರಿರುವುದು ನನಗೆ ಸಂತಸ ಮೂಡಿಸಿದೆ ಎಂದರು.

ಮಾಜಿ ಶಾಸಕ ಸಿ.ಎಚ್‌.ವಿಜಯಶಂಕರ್‌, ವಿಧಾನಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ಮುಖಂಡ ನಾಗರಾಜಮಲ್ಲಾಡಿ ಮಾತನಾಡಿದರು. ನಗರಾಧ್ಯಕ್ಷ ರಾಜೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ವೆಂಕಟಮ್ಮ, ಜಿಲ್ಲಾಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ಕೆ.ಟಿ.ಗೋಪಾಲ್‌, ಹನಗೋಡು ಮಂಜು ನಾಥ್‌, ಜಿಲ್ಲಾರೈತಮೋರ್ಚಾ ಉಪಾಧ್ಯಕ್ಷ ಬಿ.ಎನ್‌.ನಾಗರಾಜಪ್ಪ, ಚಂದ್ರು, ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ