ಆ್ಯಪ್ನಗರ

ಬಿಜೆಪಿಯಿಂದ ಹಣದ ಆಮಿಷ ಆರೋಪ

ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ 'ಬಾಡಿ ಶಾಪಿಂಗ್‌' ನಡಿತಾ ಇದೆ. ಬರೀ ವೋಟ್‌ ಅಲ್ಲ, ದುಡ್ಡಿನಿಂದ ಮನುಷ್ಯರನ್ನೇ ಖರೀದಿ ಮಾಡುತ್ತಿದ್ದಾರೆಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌ ನೇರ ಆರೋಪ ಮಾಡಿದರು.

Vijaya Karnataka 2 Dec 2019, 5:00 am
ಹುಣಸೂರು: ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ 'ಬಾಡಿ ಶಾಪಿಂಗ್‌' ನಡಿತಾ ಇದೆ. ಬರೀ ವೋಟ್‌ ಅಲ್ಲ, ದುಡ್ಡಿನಿಂದ ಮನುಷ್ಯರನ್ನೇ ಖರೀದಿ ಮಾಡುತ್ತಿದ್ದಾರೆಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌ ನೇರ ಆರೋಪ ಮಾಡಿದರು.
Vijaya Karnataka Web manjunath H.P.-MLA


ಹುಣಸೂರು ನಗರದ ವಿವಿಧೆಡೆ ಪ್ರಚಾರದ ನಡುವೆ ಪತ್ರಕರ್ತರೊಂದಿಗೆ ಮಾತನಾಡಿ, ''ವಿಶ್ವನಾಥ್‌ ಮತ್ತವರ ಕಡೆಯವರು ನಮಗೆ ಮತ ಕೊಡಿಸಿ ಎಂದು ಒಬ್ಬೊಬ್ಬ ಮುಖಂಡರಿಗೆ 5 ರಿಂದ 10 ಲಕ್ಷ ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ. ಮೈಸೂರು ಮುಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮಾರಾಟ ಮಾಡಿ ಆ ಹಣ ಇಲ್ಲಿಗೆ ತಂದಿದ್ದಾರೆ. ಆಯೋಗ ಹಂಚಬೇಕಿದ್ದ ಮತದಾರರ ಪಟ್ಟಿಯನ್ನು ಅಧಿಕಾರಿಗಳಿಂದ ಖರೀದಿ ಮಾಡಿದ್ದಾರೆ. ಅಧಿಕಾರಿಗಳನ್ನು ಬಳಸಿಕೊಂಡು ಮತದಾರರ ಮನೆಗೆ ಕೈ ಹಾಕಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು,'' ಎಂದು ಒತ್ತಾಯಿಸಿದರು. ''ವಿಶ್ವನಾಥರು ಹುಣಸೂರು ತಾಲೂಕನ್ನೇ ಪಾತಾಳಕ್ಕೆ ತಳ್ಳಿದ್ದಾರೆ. ಕಳೆದ ಚುನಾವಣೆ ಯಲ್ಲಿಅವರ ಅನುಭವ, ಜ್ಞಾನ ನೋಡಿ ಜನ ಮತ ಹಾಕಿದ್ದರು. ಈ ಚುನಾವಣೆಯಲ್ಲಿ ಅದೆಲ್ಲಾ ಮಾಯವಾಗಿದೆ, ''ಎಂದು ಮಂಜುನಾಥ್‌ ಛೇಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ