ಆ್ಯಪ್ನಗರ

ಮೈಸೂರು-ಬೆಂಗಳೂರು ನಡುವಿನ E-ಬಸ್ ಗಳಿಗೆ ಜನ ಫಿದಾ; ಬಸ್ ಗಳ ಸಂಖ್ಯೆ 8ಕ್ಕೇರಿಕೆ

E bus service between Mysuru - Bengaluru: ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ ನಲ್ಲಿ ಇ - ಬಸ್ ಗಳ ಸೇವೆಯನ್ನು ಇದೇ ಜನವರಿಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ) ಆರಂಭಿಸಿತ್ತು. ಮೊದಲಿಗೆ, ಒಂದು ಬಸ್ ಮೂಲಕ ಶುರುವಾಗಿದ್ದ ಸೇವೆಗೆ ಸಾರ್ವಜನಿಕರಿಂದ ಭಾರೀ ಜನಸ್ಪಂದನೆ ಸಿಕ್ಕಿದ್ದರಿಂದಾಗಿ ಹಂತಹಂತವಾಗಿ ಬಸ್ ಗಳ ಸಂಖ್ಯೆಯನ್ನು ಏರಿಸಲಾಗಿದೆ. ಈಗ ಮೈಸೂರು- ಬೆಂಗಳೂರು ನಡುವೆ ಒಟ್ಟು ಎಂಟು ಇ- ಬಸ್ ಗಳು ಸಂಚರಿಸುತ್ತಿದ್ದು, ದಿನಕ್ಕೆ 1,030 ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

Authored byಚೇತನ್ ಓ.ಆರ್. | Vijaya Karnataka Web 22 May 2023, 10:09 am

ಹೈಲೈಟ್ಸ್‌:

  • ಇ - ಬಸ್ ಗಳ ಸೇವೆಯನ್ನು ಇದೇ ಜನವರಿಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ) ಆರಂಭಿಸಿತ್ತು.
  • ಒಂದು ಬಸ್ ಮೂಲಕ ಶುರುವಾಗಿದ್ದ ಸೇವೆಗೆ ಸಾರ್ವಜನಿಕರಿಂದ ಭಾರೀ ಜನಸ್ಪಂದನೆ ಸಿಕ್ಕಿದೆ.
  • ಈಗ ಮೈಸೂರು- ಬೆಂಗಳೂರು ನಡುವೆ ಒಟ್ಟು ಎಂಟು ಇ- ಬಸ್ ಗಳು ಸಂಚರಿಸುತ್ತಿದ್ದು, ದಿನಕ್ಕೆ 1,030 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web E Bus inaugurated by Basavaraj Bommai
ಇದೇ ಜನವರಿಯಲ್ಲಿ, ಮೈಸೂರು ಬೆಂಗಳೂರು ನಡುವೆ ಇ- ಬಸ್ ಸೇವೆಯನ್ನು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು.
ಮೈಸೂರು: ಬೆಂಗಳೂರು - ಮೈಸೂರು ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ ಆರ್ ಟಿಸಿ) ಹೊಸದಾಗಿ ಶುರು ಮಾಡಿದ್ದ ವಿದ್ಯುತ್ ಚಾಲಿತ ಬಸ್ ಗಳ ಸೇವೆಗೆ ಭಾರೀ ಡಿಮ್ಯಾಂಡ್ ಬಂದಿದೆ. ಫೇಮ್ ಯೋಜನೆಯಡಿ, ಜಾರಿಗೊಳಿಸಲಾಗಿದ್ದ ಈ ಸೇವೆಯನ್ನು ಹೈದರಾಬಾದ್ ಮೂಲದ ಸೇವೆಗೆ ಗುತ್ತಿಗೆ ನೀಡಲಾಗಿತ್ತು. ಜನರ ಡಿಮ್ಯಾಂಡ್ ಮೇರೆಗೆ ಆರಂಭದಲ್ಲಿ ಇದ್ದ ಒಂದು ಬಸ್ ಸೇವೆಯನ್ನು ಈಗ ಎಂಟು ಬಸ್ಸುಗಳಿಗೆ ವಿಸ್ತರಿಸಲಾಗಿದೆ.
ಜ. 16ರಂದು ಎರಡೂ ನಗರಗಳ ನಡುವಿನ ಎಕ್ಸ್ ಪ್ರೆಸ್ ಹೈವೇಯಲ್ಲಿ ಒಂದು ವಿದ್ಯುತ್ ಚಾಲಿತ ಬಸ್ಸನ್ನು ಪ್ರಾಯೋಗಿಕವಾಗಿ ಬಿಡಲಾಗಿತ್ತು. ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದಿಂದ ಹೊರಡುತ್ತಿದ್ದ ಬಸ್ಸು, ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಒಂದು ನಿಲುಗಡೆ ಕೊಟ್ಟು ಆನಂತರ, ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಅಂತ್ಯಗೊಳಿಸುತ್ತದೆ.


ಮೊದಲಿಗೆ ಒಂದು ಬಸ್ಸನ್ನು ಪ್ರಾಯೋಗಿಕವಾಗಿ ಬಿಟ್ಟಾಗ ಆರಂಭದಿಂದಲೇ ಈ ಬಸ್ಸುಗಳಲ್ಲಿ ಸಂಚರಿಸಲು ಪ್ರಯಾಣಿಕರು ಒಲವು ತೋರಿದರು. ಪ್ರತಿ ಟ್ರಿಪ್ ನಲ್ಲಿ ಎಲ್ಲಾ ಆಸನಗಳೂ ಭರ್ತಿಯಾಗುತ್ತಿದ್ದವು. ಪ್ರಯಾಣಿಕರು ಸೀಟುಗಳಲಿಲ್ಲದೆ ಅನಿವಾರ್ಯವಾಗಿ ಅನ್ಯ ಎಕ್ಸ್ ಪ್ರೆಸ್ ಬಸ್ಸುಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದರು.

ಇದನ್ನು ಗಮನಿಸಿದ ಸಂಸ್ಥೆಯು, ಡಿಮ್ಯಾಂಡಿಗೆ ತಕ್ಕಂತೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಾ ಬಂದಿದ್ದು, ಮೇ 21ರ ಹೊತ್ತಿಗೆ ಈ ರೂಟ್ ನಲ್ಲಿ ಒಟ್ಟು 8 ವಿದ್ಯುತ್ ಚಾಲಿತ ಬಸ್ಸುಗಳು ಸಂಚರಿಸುತ್ತಿವೆ. ಪ್ರತಿ ಬಸ್ ಪ್ರತಿ ಟ್ರಿಪ್ ನಲ್ಲಿ ಎಲ್ಲಾ ಬಸ್ಸುಗಳಲ್ಲಿಯೂ ಶೇ. 100ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಪ್ರತಿದಿನ 1,032ಕ್ಕೂ ಹೆಚ್ಚು ಪ್ರಯಾಣಿಕರು, ಎರಡೂ ನಗರಗಳ ನಡುವೆ ಸಂಚರಿಸುತ್ತಿದ್ದಾರೆ. ತಿಂಗಳಿಗೆ ಸರಾಸರಿ 31 ಸಾವಿರ ಪ್ರಯಾಣಿಕರು ಈ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

ರಸ್ತೆ ಗುಂಡಿ ಮುಚ್ಚಲು ಇನ್ನೆಷ್ಟು ವರ್ಷ ಬೇಕು ಹೇಳಿ? ಮೈಸೂರು ಪಾಲಿಕೆಗೆ ಜನರ ಪ್ರಶ್ನೆ

ಟಿಕೆಟ್ ದರ ಹಾಗೂ ಟೈಮಿಂಗ್

ಸದ್ಯಕ್ಕೆ ಈ ಬಸ್ಸುಗಳಲ್ಲಿ ಒಂದು ಟ್ರಿಪ್ ಗೆ ಗರಿಷ್ಠ 340 ರೂ.ಗಳನ್ನು ನಿಗದಿಪಡಿಸಲಾಗಿದೆ. ಮೈಸೂರಿನಿಂದ ಸ್ಯಾಟಲೈಟ್ ಬಸ್ ನಿಲ್ದಾಣದವರೆಗೆ ಪ್ರಯಾಣಿಸುವವರಿಗೆ 320 ರೂ. ದರವಿದೆ. ಮೈಸೂರಿನಿಂದ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಿಲ್ಲಿಸುವವರಿಗೆ 340 ರೂ. ಇದೆ. ಪ್ರತಿದಿನ ಮೈಸೂರಿನಿಂದ ಬೆಳಗ್ಗೆ 6 ಗಂಟೆಗೆ ಮೊದಲ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭವಾಗುತ್ತದೆ. ಸಂಜೆ, 7 ಗಂಟೆಯವರೆಗೆ ಬಸ್ ಸೇವೆ ಇರುತ್ತದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ