ಆ್ಯಪ್ನಗರ

ನಿಮ್ಮ 'ಪ್ರಬುದ್ಧತೆ'ಯ ಪಾಠ ಬೇಕಿಲ್ಲ: ಸಿಎಂಗೆ ಸಂಸದ ಪ್ರತಾಪ್ ತಿರುಗೇಟು

ತಮ್ಮನ್ನು ಅಪ್ರಬುದ್ಧ ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಸದ ಪ್ರತಾಪ್‌ ಸಿಂಹ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಸಂಸದರು, ಕೇಂದ್ರದ ಯೋಜನೆಗಳಿಗೆ ನಿಮ್ಮ ಸ್ಟಿಕ್ಕರ್‌ ಹಾಕಿಕೊಂಡು ಪ್ರಚಾರ ತೆಗೆದುಕೊಳ್ಳುವಂತಹ ನಿಮ್ಮ ಪ್ರಬುದ್ಧತೆ ತಮಗೆ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಕ ಸುದ್ದಿಲೋಕ 14 Jul 2017, 5:06 pm
ಮೈಸೂರು: ತಮ್ಮನ್ನು ಅಪ್ರಬುದ್ಧ ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಸದ ಪ್ರತಾಪ್‌ ಸಿಂಹ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಸಂಸದರು, ಕೇಂದ್ರದ ಯೋಜನೆಗಳಿಗೆ ನಿಮ್ಮ ಸ್ಟಿಕ್ಕರ್‌ ಹಾಕಿಕೊಂಡು ಪ್ರಚಾರ ತೆಗೆದುಕೊಳ್ಳುವಂತಹ ನಿಮ್ಮ ಪ್ರಬುದ್ಧತೆ ತಮಗೆ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web mp pratap simha lashed out at cm siddaramaih
ನಿಮ್ಮ 'ಪ್ರಬುದ್ಧತೆ'ಯ ಪಾಠ ಬೇಕಿಲ್ಲ: ಸಿಎಂಗೆ ಸಂಸದ ಪ್ರತಾಪ್ ತಿರುಗೇಟು


ರಾಜಕೀಯದಲ್ಲಿ 35-40 ವರ್ಷ ಅನುಭವವಿರುವ ಮುಖ್ಯಮಂತ್ರಿಗಳು, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿಲ್ಲದ ತಮ್ಮ ಮಗನನ್ನು ತಮ್ಮ ಕುರ್ಚಿಯಲ್ಲೇ ಕೂರಿಸಿಕೊಂಡು ಅಧಿಕಾರಿಗಳ ಸಭೆ ನಡೆಸುವುದು ಪ್ರಬುದ್ಧತೆಯೇ? ನಿಮ್ಮ ಈ ಪ್ರಬುದ್ಧತೆಯನ್ನು ನಿಮ್ಮ ಮಗನಿಗೇ ಕಲಿಸಿ ಎಂದು ಪ್ರತಾಪ್‌ ಖಾರವಾಗಿ ನುಡಿದರು.

'ದೇಶದಲ್ಲಿ ವಿದ್ಯುತ್‌ ಉಳಿತಾಯದ ಜತೆಗೆ ಇಂಧನ ಸ್ವಾವಲಂಬನೆ ತರುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ 'ಪ್ರಕಾಶ ಪಥ' ಯೋಜನೆಗೆ 'ಹೊಸ ಬೆಳಕು' ಅಂತ ಹೆಸರಿಟ್ಟು ನಿಮ್ಮದೇ ಯೋಜನೆ ರೀತಿ ಬಿಂಬಿಸಿಕೊಂಡಿರಿ; ಗ್ರಾಮೀಣ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ವಿತರಿಸುವ ಉಜ್ವಲಾ ಯೋಜನೆಯಡಿ ಕರ್ನಾಟಕದಲ್ಲಿ 36 ಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವಿತರಿಸಬೇಕಿತ್ತು. ಆದರೆ ನೀವು ಸೀಮೆ ಎಣ್ಣೆ ಸಬ್ಡಿಯಲ್ಲಿ ಉಳಿದ ಹಣದಿಂದ 1 ಲಕ್ಷ ಕುಟುಂಬಗಳಿಗೆ ಮಾತ್ರ ಉಚಿತ ಗ್ಯಾಸ್ ಸ್ಟವ್‌ ನೀಡುವ ಯೋಜನೆ ಹಾಕಿಕೊಂಡು ಜನತೆಯ ಕಣ್ಣಿಗೆ ಮಣ್ಣೆರಚಿದಿರಿ. ಉಳಿದ 35 ಲಕ್ಷ ಕುಟುಂಬಗಳಿಗೆ ಕೊಡಬೇಕಾದ ಸವಲತ್ತು ಎಲ್ಲಿದೆ ಸ್ವಾಮೀ? ಈ ರೀತಿ ವಂಚಿಸುವ ನಿಮ್ಮ ಪ್ರಬುದ್ಧತೆ ನನಗೆ ಬೇಕಾಗಿಲ್ಲ' ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಚಾಮುಂಡೇಶ್ವರಿ ಕ್ಷೇತ್ರವನ್ನು 4 ಬಾರಿ ಪ್ರತಿನಿಧಿಸಿದ ನಿಮಗೆ ಇದುವರೆಗೂ ನಿಮ್ಮ ಕ್ಷೇತ್ರದ ಜನತೆಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ. ನೀವು ನಾಲ್ಕೂವರೆ ವರ್ಷ ಮುಖ್ಯಮಂತ್ರಿಯಾಗಿ ಕಳೆದರೂ ನಿಮ್ಮ ಕ್ಷೇತ್ರದ ಜನತೆಗೆ ಸೌಲಭ್ದಗಳನ್ನು ಕಲ್ಪಿಸುವಲ್ಲಿ ವಿಫಲರಾದಿರಿ. ನಿಮಗೆ ತಾಕತ್ತಿದ್ದರೆ ನಿಮ್ಮದೇ ಕ್ಷೇತ್ರದ ಜನತೆಯ ಮುಂದೆ ನಿಮ್ಮ ಕೊಡುಗೆಗಳ ಬಗ್ಗೆ ಜನತೆಯ ಮುಂದೆಯೇ ಸಾರ್ವಜನಿಕ ಚರ್ಚೆ ನಡೆಸೋಣ ಎಂದು ಸಂಸದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಸಂಸದರ ಪ್ರತಾಪ್ ಏನೇನು ಹೇಳಿದರು ಅಂತ ಪೂರ್ಣವಾಗಿ ತಿಳಿಯಲು ಈ ವೀಡಿಯೋ ನೋಡಿ:

:

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ