ಆ್ಯಪ್ನಗರ

ಸಿಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿರುವುದು ಸರಿ: ಸಂಸದ ಶ್ರೀನಿವಾಸಪ್ರಸಾದ್‌

ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಏಕೆ ಕೊಟ್ಟಿದ್ದೀರಿ ಎಂದು ಕೇಳಲು ಸಾಧ್ಯವಿಲ್ಲ ಹಾಗೂ ಕೇಳಲೂ ಬಾರದು. ವಿಶ್ವನಾಥ್‌ ಕೋಪದಲ್ಲಿದ್ದಾರೆ. ಅವರಿಗೆ ಈಗ ಸಲಹೆ ಕೊಡಲು ಸಾಧ್ಯವಿಲ್ಲ.

Vijaya Karnataka Web 15 Jan 2021, 8:12 pm
ಮೈಸೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಲು ಎಚ್‌.ವಿಶ್ವನಾಥ್‌ ರೀತಿಯಲ್ಲಿ ಸಿ.ಪಿ.ಯೋಗೇಶ್ವರ್‌ ಅವರೂ ಕಾರಣಕರ್ತರು. ಈ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಸರಿಯಾಗಿಯೇ ಇದೆ ಎಂದು ಸಂಸದ ಶ್ರೀನಿವಾಸ್‌ ಪ್ರಸಾದ್‌ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web ಶ್ರೀನಿವಾಸ ಪ್ರಸಾದ್‌
ಶ್ರೀನಿವಾಸ ಪ್ರಸಾದ್‌


ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೀನಿವಾಸ್ ಪ್ರಸಾದ್‌ ಮಾತನಾಡಿದರು.

''ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಏಕೆ ಕೊಟ್ಟಿದ್ದೀರಿ ಎಂದು ಕೇಳಲು ಸಾಧ್ಯವಿಲ್ಲ ಹಾಗೂ ಕೇಳಲೂ ಬಾರದು. ವಿಶ್ವನಾಥ್‌ ಕೋಪದಲ್ಲಿದ್ದಾರೆ. ಅವರಿಗೆ ಈಗ ಸಲಹೆ ಕೊಡಲು ಸಾಧ್ಯವಿಲ್ಲ. ಕೆಲ ದಿನಗಳಲ್ಲಿ ಅವರೊಂದಿಗೆ ಮಾತನಾಡುತ್ತೇನೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭ ಅಸಮಾಧಾನ ಸಹಜ. ಎಲ್ಲರಿಗೂ ಅವಕಾಶ ನೀಡಲು ಯಾರಿಗೂ ಸಾಧ್ಯವಿಲ್ಲ. ವಿಶ್ವನಾಥ್‌ ಎಡವಿರುವುದು ಕಂಡು ಬರುತ್ತಿದೆ. ಅವರು ಪಕ್ಷಕ್ಕೆ ಸೇರಬೇಕಾದರೆ ಬೇರೆಯದ್ದೇ ಮಾತುಕತೆಯಾಗಿದೆ. ಅವರಿಗೆ ಸ್ಥಾನ ತಪ್ಪಲು ಹಲವು ಕಾರಣಗಳಿವೆ. ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಮುನಿರತ್ನ ಅವರಿಗೆ ಅವಕಾಶ ನೀಡಬೇಕಿತ್ತು'' ಎಂದು ಹೇಳಿದರು.

''ಸಿದ್ದರಾಮಯ್ಯ ಅವರು ಗೋಹತ್ಯೆ, ಬೀಫ್‌ ತಿನ್ನುವ ವಿಚಾರದೊಂದಿಗೆ ಚುನಾವಣೆಗೆ ಹೋಗಲಿ. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಜನರು ತೀರ್ಮಾನಿಸುತ್ತಾರೆ. ಅವರು ಅಧಿಕಾರಕ್ಕೆ ಬಂದರೆ ಈ ಕಾನೂನು ತೆಗೆದುಹಾಕಬಹುದು. ನಿಗಮ ಹಾಗೂ ಮಂಡಳಿಗೆ ನೇಮಕಾತಿ ಸಂದರ್ಭ ಮುಖ್ಯಮಂತ್ರಿ ಅವರ ನಡೆಯ ಕುರಿತು ಈಗಲೂ ನನಗೆ ಅಸಮಾಧಾನವಿದೆ. ಅವರು ಈ ವಿಚಾರದಲ್ಲಿತಪ್ಪು ಮಾಡಿದ್ದಾರೆ. ನಾನು ಹೇಳಿದ ಯಾರಿಗೂ ಅವರು ಅವಕಾಶ ನೀಡಲಿಲ್ಲ. ಇದರಿಂದ ಕಾರ್ಯಕರ್ತರಿಗೆ ಹಾಗೂ ಚುನಾವಣೆಯಲ್ಲಿಕೆಲಸ ಮಾಡಿದವರಿಗೆ ಸಹಜವಾಗಿ ಬೇಸರವಾಗಿದೆ'' ಎಂದು ಸಂಸದ ವಿ ಶ್ರೀನಿವಾಸ ಪ್ರಸಾದ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ