ಆ್ಯಪ್ನಗರ

ನೀಲಾ ರಾಮ್‌ಗೋಪಾಲ್‌ಗೆ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿ ಪ್ರದಾನ

ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣವಾಗಿ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಐದು ದಿನಗಳ 26ನೇ ಸಂಗೀತ ಸಮ್ಮೇಳನ ಶುಕ್ರವಾರ ಸಂಪನ್ನವಾಯಿತು. ಸಮ್ಮೇಳನಾಧ್ಯಕ್ಷೆ, ಸಂಗೀತ ವಿದುಷಿ ನೀಲಾ ರಾಮ್ ಗೋಪಾಲ್ ಅವರಿಗೆ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಸಂಗೀತ ವಿದ್ಯಾನಿಧಿ ಪ್ರಶಸ್ತಿ ಪ್ರದಾನ ಮಾಡಿದರು.

Vijaya Karnataka 7 Dec 2019, 5:00 am
ಮೈಸೂರು: ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣವಾಗಿ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಐದು ದಿನಗಳ 26ನೇ ಸಂಗೀತ ಸಮ್ಮೇಳನ ಶುಕ್ರವಾರ ಸಂಪನ್ನವಾಯಿತು. ಸಮ್ಮೇಳನಾಧ್ಯಕ್ಷೆಘಿ, ಸಂಗೀತ ವಿದುಷಿ ನೀಲಾ ರಾಮ್ ಗೋಪಾಲ್ ಅವರಿಗೆ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಸಂಗೀತ ವಿದ್ಯಾನಿಧಿ ಪ್ರಶಸ್ತಿ ಪ್ರದಾನ ಮಾಡಿದರು.
Vijaya Karnataka Web JSS SANGITHA074322
ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ವಿದುಷಿ ನೀಲಾ ರಾಮ್‌ಗೋಪಾಲ್ ಅವರಿಗೆ ಸಂಗೀತ ವಿದ್ಯಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವ ಸಿ.ಟಿ.ರವಿ, ಸುತ್ತೂರು ಶ್ರೀ, ಸೋಸಲೆಯ ವ್ಯಾಸರಾಜಮಠದ ಶ್ರೀ ಇದ್ದರು.


ಈ ವೇಳೆ ಮಾತನಾಡಿದ ಸಚಿವರು, ಭಾರತಕ್ಕೆ ರಾಜಕೀಯ ದಾಳಿಗಳಿಂದ ಸಂಗೀತ, ಕಲೆ ಪ್ರಕಾರಗಳು ದಿಕ್ಕನ್ನು ಬದಲಾಯಿಸುವಂತಾಯಿತು.ಆದರೆ, ರಾಜ-ಮಹಾರಾಜರು ತಮ್ಮ ನಾಡಿನ ಅಭಿವೃದ್ಧಿಯೊಂದಿಗೆ ಕಲಾ ಕ್ಷೇತ್ರವೂ ವಿಶೇಷ ಆದ್ಯತೆ ಕೊಟ್ಟರು. ವಿಜಯನಗರ ಸಾಮ್ರಾಜ್ಯವನ್ನು ಕಟ್ಟುವಾಗ ಹಕ್ಕ-ಬುಕ್ಕರಿಗೆ ವಿದ್ಯಾರಣ್ಯರು ಸಂಗೀತ, ಕಲೆ, ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವಂತೆ ಸೂಚಿಸಿದ್ದರು. ಅದರಂತೆ ಅವರು ಸಾಮ್ರಾಜ್ಯದ ಜೊತೆ ಕಲಾ ಕ್ಷೇತ್ರವನ್ನು ಕಟ್ಟಿದರು ಎಂದರು.
ಇತ್ತೀಚಿನ ವೈಜ್ಞಾನಿಕ ಸಂಶೋಧೆನೆಗಳ ಪ್ರಕಾರ ಚಿಕಿತ್ಸೆಗೆ ಸಂಗೀತ ನೆರವಾಗುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ದೃಢ ಪಡಿಸಿವೆ. ಸಂಗೀತ ಕೇಳಿದಾಗ ಚಿಕ್ಕಮಕ್ಕಳಾದಿಯಾಗಿ ಎಲ್ಲರು ತಲೆದೂಗುವಂತೆ ಮಾಡುವ ಶಕ್ತಿ ಸಂಗೀತಕ್ಕೆ ಇದೆ ಎಂದರು.
ವಿದುಷಿ ಡಾ.ನಾಗಮಣಿ ಶ್ರೀನಾಥ್ , ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸೋಸಲೆಯ ವ್ಯಾಸರಾಜಮಠದ ವಿದ್ಯಾಶ್ರೀಶತೀರ್ಥ ಶ್ರೀಪಾದರು, ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್‌ನ ಅಧ್ಯಕ್ಷ ಕೆ.ವಿ.ಮೂರ್ತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ