ಆ್ಯಪ್ನಗರ

ಮೈಸೂರಿನಲ್ಲಿ ಹಾಲು ಖರೀದಿ ದರ ಇಳಿಕೆ, ರೈತರಿಗೆ ಲೀ.ಗೆ 1.50 ರೂ. ನಷ್ಟ

ಹಾಲು ಉತ್ಪನ್ನ ಹೆಚ್ಚಿ, ಮಾರಾಟ ಕುಸಿದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ ಮೈಮುಲ್‌ 1.50 ರೂ. ಕಡಿತ ಮಾಡಿದ್ದು, ಬುಧವಾರದಿಂದ ಹೊಸ ದರ ಜಾರಿಗೆ ಬರಲಿದೆ.

Vijaya Karnataka Web 8 Jul 2020, 12:45 pm
ಮೈಸೂರು: ಹಾಲು ಉತ್ಪನ್ನ ಹೆಚ್ಚಿ, ಮಾರಾಟ ಕುಸಿದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ ಮೈಮುಲ್‌ 1.50 ರೂ. ಕಡಿತ ಮಾಡಿದೆ. ಹೊಸ ದರ ಬುಧವಾರದಿಂದ ಜಾರಿಗೆ ಬರಲಿದ್ದು, ಲೀಟರ್‌ಗೆ ಇದೀಗ 25 ರೂ. ಮಾತ್ರ ಲಭ್ಯವಾಗಲಿದೆ.
Vijaya Karnataka Web mysuru


ಹೆಚ್ಚು ಹಾಲು ಉತ್ಪಾದನೆಯಾಗಿ ಕಡಿಮೆ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಖರೀದಿ ದರವನ್ನು ಇಳಿಸುವುದು ಅನಿವಾರ್ಯವಾಗಿದೆ ಎಂದು ಮೈಮುಲ್‌ ಅಧ್ಯಕ್ಷ ಸಿದ್ದೇಗೌಡ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ನಿತ್ಯ 5.50 ಲಕ್ಷ ಲೀಟರ್‌ ಹಾಲನ್ನು ಮೈಮುಲ್‌ ಖರೀದಿಸುತ್ತಿತ್ತು. ಆದರೆ, ಇದೀಗ 7.10 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ತಿಂಗಳಾಂತ್ಯಕ್ಕೆ 7.50 ಲಕ್ಷ ಲೀಟರ್‌ ತಲುಪಲಿದೆ.

ಕಳೆದ ಕೆಲವು ತಿಂಗಳನಿಂದ ಹೋಟೆಲ್‌, ರೆಸಾರ್ಟ್‌, ಶೈಕ್ಷಣಿಕ ಸಂಸ್ಥೆ, ಹಾಸ್ಟೆಲ್‌ಗಳು ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಮಾರಾಟ ಕುಸಿದಿದೆ. ಈಗ ಕೇವಲ 2.5 ಲಕ್ಷ ಲೀಟರ್‌ ಹಾಲು ಮಾತ್ರ ಮಾರಾಟವಾಗುತ್ತಿದೆ. ಇದರಲ್ಲಿ 50 ಸಾವಿರ ಲೀಟರ್‌ ಹಾಲನ್ನು ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಉಳಿದಂತೆ 4.5 ಲಕ್ಷ ಲೀಟರ್‌ ಹಾಲು ಉಳಿಕೆಯಾಗುತ್ತಿದೆ. ಈಗ ಮೈಮುಲ್‌ನಲ್ಲಿ 1,500 ಟನ್‌ ಹಾಲಿನ ಪುಡಿ ಹಾಗೂ 400 ಟನ್‌ ಬೆಣ್ಣೆ ದಾಸ್ತಾನಿದೆ. ಇದರ ಮೌಲ್ಯ ಸುಮಾರು 30 ಕೋಟಿ ರೂ. ಈ ಹಿನ್ನೆಲೆಯಲ್ಲಿ ಉಳಿಕೆ ಹಾಲನ್ನು ಪುಡಿಯಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕ ಡಿ. ಅಶೋಕ್‌ ಹೇಳಿದ್ದಾರೆ.

ಜಾನುವಾರುಗಳಿಗೆ ವಿಮಾ ಯೋಜನೆ:ಅರಬಗೊಂಡ

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.10ರಷ್ಟು ಹೆಚ್ಚು ಹಾಲು ಉತ್ಪಾದನೆ ಯಾಗುತ್ತಿದೆ. ಕೊರೊನಾದಿಂದಾಗಿ ಶೇ.15ರಷ್ಟು ಹಾಲು ಮಾರಾಟ ಕುಂಠಿತಗೊಂಡಿದೆ. ಸುಮಾರು 30 ಲಕ್ಷ ಲೀಟರ್‌ ನಿತ್ಯ ಕಡಿಮೆ ಮಾರಾಟ ವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲಿನ ಖರೀದಿ ದರವನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ