ಆ್ಯಪ್ನಗರ

ಪ್ರಯಾಣಿಕನ ಸುಲಿಗೆ: ವ್ಯಕ್ತಿ ಬಂಧನ

ಪ್ರಯಾಣಿಕನನ್ನು ಸುಲಿಗೆ ಮಾಡಿದ್ದ ಆಟೋ ರಿಕ್ಷಾ ಚಾಲಕನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 20 Jul 2018, 5:00 am
ಮೈಸೂರು: ಪ್ರಯಾಣಿಕನನ್ನು ಸುಲಿಗೆ ಮಾಡಿದ್ದ ಆಟೋ ರಿಕ್ಷಾ ಚಾಲಕನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web mysore auto rickshaw driver detention
ಪ್ರಯಾಣಿಕನ ಸುಲಿಗೆ: ವ್ಯಕ್ತಿ ಬಂಧನ


ಕುಂಬಾರ ಕೊಪ್ಪಲಿನ ಮಹದೇಶ್ವರ ಬಡಾವಣೆಯ ನಿವಾಸಿ ಮಂಜುನಾಥ್‌(40) ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತನಿಂದ 15 ಸಾವಿರ ರೂ. ಮೌಲ್ಯದ ಮೊಬೈಲ್‌ ಪೋನ್‌ ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾ ವಶಪಡಿಸಿಕೊಂಡಿದ್ದಾರೆ.

ಜೂನ್‌ 4 ರಂದು ರಾತ್ರಿ ವ್ಯಕ್ತಿಯೊಬ್ಬರು ಬೆಂಗಳೂರಿನಿಂದ ರೈಲಿನಲ್ಲಿ ಮೈಸೂರಿಗೆ ಬಂದು ಮೇಟಗಳ್ಳಿಯ ತಮ್ಮ ಮನೆಗೆ ಹೋಗಲು ದಾಸಪ್ಪ ಸರ್ಕಲ್‌ ಬಳಿ ಆಟೋ ರಿಕ್ಷಾ ತೆರಳಲು ಮುಂದಾಗಿದ್ದಾರೆ. ಈ ವೇಳೆ ಆಟೋ ಚಾಲಕ ಮಂಜುನಾಥ್‌ 300 ರೂ. ಕೇಳಿದ್ದು, ಅಷ್ಟು ಹಣ ಕೊಡಲು ಒಪ್ಪದೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಚಾಲಕ ಸರಿ ಬಾ ಎಂದು ಆಟೋ ಹತ್ತಿಸಿಕೊಂಡು ಸ್ವಲ್ಪ ದೂರ ಹೋಗಿ ನಂತರ ಮತ್ತೆ 300 ರೂ. ಹಣವನ್ನು ನೀಡುವಂತೆ ಪೀಡಿಸಿದ್ದಾನೆ. ಅದಕ್ಕೆ ಒಪ್ಪದಿದ್ದಾಗ ಅವರ ಬಳಿ ಇದ್ದ ಮೊಬೈಲ್‌ ಕಿತ್ತು ಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಯಾಣಿಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೇವರಾಜ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಪತ್ತೆ ಕಾರ್ಯದಲ್ಲಿ ದೇವರಾಜ ಭಾಗದ ಎಸಿಪಿ ಗಜೇಂದ್ರಪ್ರಸಾದ್‌, ಇನ್ಸ್‌ಪೆಕ್ಟರ್‌ ಸಿ.ತಿಮ್ಮರಾಜು, ಪಿಎಸ್‌ಐ ಮಹದೇವನಾಯಕ.ಕೆ ಮತ್ತು ಸಿಬ್ಬಂದಿ ಸೋಮಶೆಟ್ಟಿ, ವೇಣುಗೋಪಾಲ, ನಂದೀಶ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ