ಆ್ಯಪ್ನಗರ

ಮೈಸೂರಿಗೆ ಬಂತು ಟಿಬೆಟಿಯನ್‌ ಸಾಂಪ್ರದಾಯಿಕ ಚಿಕಿತ್ಸೆ

ಮೈಸೂರು ಕೇಂದ್ರ ಆಯುಷ್‌ ಇಲಾಖೆಯಿಂದ ಅನುಮೋದನೆಗೊಂಡಿರುವ ಟಿಬೆಟಿಯನ್ನರ ಸಾಂಪ್ರದಾಯಿಕ ಚಿಕಿತ್ಸಾ ...

Vijaya Karnataka 8 Oct 2017, 5:00 am

ಮೈಸೂರು: ಕೇಂದ್ರ ಆಯುಷ್‌ ಇಲಾಖೆಯಿಂದ ಅನುಮೋದನೆಗೊಂಡಿರುವ ಟಿಬೆಟಿಯನ್ನರ ಸಾಂಪ್ರದಾಯಿಕ ಚಿಕಿತ್ಸಾ ವಿಧಾನವನ್ನು ಮೈಸೂರಿಗರಿಗೂ ಪರಿಚಯಿಸಲು ಟಿಬೆಟಿಯನ್‌ ವೈದ್ಯಕೀಯ ಕೇಂದ್ರ (ಮೆನ್‌ -ತ್ಸಿ -ಖಾಂಗ್‌) ಮುಂದಾಗಿದೆ. ಜಯಲಕ್ಷ್ಮೇಪುರಂನ ಕಾಳಿದಾಸ ರಸ್ತೆಯ ಮಹಾಜನ ವಿದ್ಯಾ ಸಂಸ್ಥೆಯ ಬಳಿ ಇರುವ ವೆಂಟ್ರಾನಿಕ್ಸ್‌ ನಲ್ಲಿ ತಿಂಗಳ ಮೊದಲ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ .4.30ರವರೆಗೆ ಔಷಧೋಪಚಾರ ಆರಂಭಿಸಲಾಗಿದೆ.

ಧರ್ಮಗುರು ದಲೈಲಾಮಾ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಟಿಬೇಟಿಯನ್‌ ವೈದ್ಯಕೀಯ ಕೇಂದ್ರವು ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಧರ್ಮಾರ್ಥ ಕೇಂದ್ರವಾಗಿದ್ದು, ಸಾಂಪ್ರದಾಯಿಕ ಟಿಬೇಟಿಯನ್‌ ಔಷಧಗಳ ರಕ್ಷಣೆ ಮತ್ತು ಪೋತ್ಸಾಹ ನೀಡುತ್ತಾ ಬಂದಿದೆ. ಈ ಚಿಕಿತ್ಸಾ ವಿಧಾನದ ಮೂಲಕ ರೋಗದ ಮೂಲ ಕಾರಣ ಪತ್ತೆ ಹಚ್ಚಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಡೋಲ್ಡಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾನ್ಯ ರೋಗಗಳ ಹೊರತಾಗಿ ಅಸ್ತಮಾ, ಸಂಧಿವಾತ, ಮಧುಮೇಹ, ಹೈಪರ್‌ ಟೆನ್‌ಷನ್‌, ರಕ್ತನಾಳಗಳ ತೊಂದರೆ, ನರಗಳ ದೌರ್ಬಲ್ಯ, ಮಾನಸಿಕ ತೊಂದರೆ, ಗರ್ಭಕೋಶದ ತೊಂದರೆ, ಕರುಳು ಬೇನೆ, ಕಾಮಾಲೆ ರೋಗ, ದೀರ್ಘಕಾಲದ ಶೀತ ಮತ್ತು ಅಲರ್ಜಿ ಹಾಗೂ ಇನ್ನೂ ನಾನಾ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಔಷಧ ನೀಡಲಾಗುತ್ತಿದೆ. ಗೋಲ್ಡನ್‌ ನೀಡಲ್‌ ಥೆರಪಿ, ಮೋಕ್ಷಾ ಭಶ್ಯನ್‌ ಬ್ರೋಂಝ್‌ ಕಪ್ಪಿಂಗ್‌ ಮತ್ತು ಇನ್ನಿತರೆ ಚಿಕಿತ್ಸೆಗಳು ಕೂಡ ಲಭ್ಯವಿದೆ. ರೋಗದ ಲಕ್ಷಣಗಳನ್ನು ನಾಡಿಬಡಿತ , ಮೂತ್ರಪರೀಕ್ಷೆ ಹಾಗೂ ಪ್ರಶ್ನೋತ್ತರ ವಿಧಾನಗಳಿಂದ ಕಂಡು ಹಿಡಿಯಲಾಗುತ್ತದೆ. ಯಾವುದೇ ವ್ಯತಿರಕ್ತ ಪರಿಣಾಮಗಳು ಆಗುವುದಿಲ್ಲ ಎಂದು ಅವರು ತಿಳಿಸಿದರು.

ಅಪರೂಪದ ಮತ್ತು ವಿರಳ ಔಷಧ ಸಸ್ಯಗಳನ್ನು ಹಿಮಾಲಯ ತಪ್ಪಲು, ಲಡಾಕ್‌, ಧರ್ಮಶಾಲಾಗಳಿಂದ ಸಂಗ್ರಹಿಸಿ ಉತ್ತಮ ಚಿಕಿತ್ಸೆ ನೀಡಲಾಗುವುದು.

ಜಿಎಸ್‌ಟಿ, ಅಮಾನ್ಯೀಕರಣದ ಪರಿಣಾಮ ಭೀಕರ

ವಿಕ ಸುದ್ದಿಲೋಕ ಮೈಸೂರು

ಕೇಂದ್ರ ಸರಕಾರದ ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣ ನೀತಿಯಿಂದಾಗಿ ಸಣ್ಣ ಕೈಗಾರಿಕೆಗಳು ಮತ್ತು ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ಮೈಸೂರು ತಾಲೂಕಿನ ಉಸ್ತುವಾರಿ ಸೀತಾರಾಮ್‌ ಆರೋಪಿಸಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಕುಸಿದಿದ್ದರೂ ನರೇಂದ್ರ ಮೋದಿ ನೇತೃತ್ವದ ಸರಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತಿದೆ. ಇದರಿಂದ ಜನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆ ಏರಿಸುವ ಉದ್ದೇಶದಿಂದಲೇ ಅವುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ಮಧ್ಯೆ ಜಿಎಸ್‌ಟಿಯಿಂದ ವಿನಾಯಿತಿ ಪಡೆದ ವಸ್ತುಗಳ ಬೆಲೆಯೂ ಸಹ ನಿರಂತರವಾಗಿ ಏರುತ್ತಿದೆ. ಈ ಮೂಲಕ ಎನ್‌ಡಿಎ ಸರಕಾರದ ಎಲ್ಲ ಭರವಸೆಗಳು ಹುಸಿಯೆಂದು ಸಾಬೀತುಪಡಿಸಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಎಸ್‌ಟಿ ಒಂದು ದೊಡ್ಡ ಸುಳ್ಳು. ಇದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಇದರಿಂದಾಗಿ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಉದ್ಯೋಗಿಗಳು, ಸಣ್ಣ ಕೈಗಾರಿಕೆಗಳು ಆಡಿಟರ್‌ ಮೂಲಕ ಜಿಎಸ್‌ಟಿ ರಿಟರ್ನ್‌ ಫೈಲ್‌ ಮಾಡಲು ದೊಡ್ಡ ಸಾಹಸ ಮಾಡಬೇಕಾಗಿದೆ. ಕೇಂದ್ರ ಸರಕಾರದ ಜನವಿರೋಧಿ ನೀತಿಗೆ ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರಕಾರದ ಮಾರಕ ನೀತಿ ಬಗ್ಗೆ ಅಧ್ಯಯನ ನಡೆಸಿ ಅದರ ಪರಿಣಾಮಗಳನ್ನು ಆಮ್‌ ಆದಿ ಪಕ್ಷವು ಮನೆ ಮನೆಗೆ ತೆರಳಿ ಜನರಿಗೆ ಮನದಟ್ಟು ಮಾಡುತ್ತಿದೆ. ಮುಂದಿನ ದಿನದಲ್ಲಿ ಮೈಸೂರಿನಲ್ಲಿ ಕೇಂದ್ರ ಸರಕಾರದ ಜನವಿರೋಧಿ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಎನ್‌.ಆರ್‌. ಕ್ಷೇತ್ರದ ಸಂಚಾಲಕ ಅಬ್ದುಲ್‌ ಖಾದರ್‌, ವರುಣಾ ಕ್ಷೇತ್ರದ ಉಸ್ತುವಾರಿ ಪ್ರಕಾಶ್‌ ಹಾಜರಿದ್ದರು.

Vijaya Karnataka Web mysore came to tibetan traditional therapy
ಮೈಸೂರಿಗೆ ಬಂತು ಟಿಬೆಟಿಯನ್‌ ಸಾಂಪ್ರದಾಯಿಕ ಚಿಕಿತ್ಸೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ