ಆ್ಯಪ್ನಗರ

ಟ್ರೇಡ್‌ ಲೈಸನ್ಸ್‌ ಇಲ್ಲದ ಅಂಗಡಿಗಳಿಗೆ ಬೀಗ..! ಮೈಸೂರು ಪಾಲಿಕೆ ಆಯುಕ್ತರಿಂದ ಎಚ್ಚರಿಕೆ

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಬಹಳಷ್ಟು ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದರೂ ಅನೇಕರು ಟ್ರೇಡ್‌ ಲೈಸನ್ಸ್‌ ಪಡೆಯುದಿರುವುದರಿಂದ ಪಾಲಿಕೆಗೆ ನಷ್ಟವುಂಟಾಗುತ್ತಿದೆ. ಈ ಕಾರಣದಿಂದ ಟ್ರೇಡ್‌ ಲೈಸನ್ಸ್‌ ಪಡೆಯಿರಿ ಅಥವಾ ನವೀಕರಿಸಿಕೊಳ್ಳಿ ಎಂದು ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ತಿಳಿಸಿದ್ದು, ಇಲ್ಲದಿದ್ದರೆ ಕ್ರಮ ಎದುರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 10 Dec 2020, 4:49 pm
ಮೈಸೂರು: ಅಧಿಕಾರಿಗಳು ನಿಮ್ಮ ಅಂಗಡಿಗಳಿಗೆ ಬೀಗ ಜಡಿಯುವ ಮುಂಚೆ ಟ್ರೇಡ್ ಲೈಸನ್ಸ್ ಪಡೆದುಕೊಳ್ಳಿ ಎಂದು ವ್ಯಾಪಾರಿಗಳಿಗೆ, ಮಳಿಗೆದಾರರಿಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web MYSURU CITY CORPORATION
ಮೈಸೂರು ಮಹಾನಗರ ಪಾಲಿಕೆ (ಸಂಗ್ರಹ ಚಿತ್ರ)


ಅಂಗಡಿಯ ಉದ್ಯಮ ಪರವಾನಗೆಯನ್ನು ನವೀಕರಣ ಮಾಡಿಸಿಕೊಳ್ಳುವಂತೆ ವ್ಯಾಪಾರಸ್ಥರಲ್ಲಿ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ 30,000ಕ್ಕೂ ಹೆಚ್ಚು ಅಂಗಡಿ ಮಳಿಗೆಗಳಿವೆ. ಕೆಲವು ಕಡೆ ಈಗಾಗಲೇ ಉದ್ಯಮ ಪರವಾನಗಿ ಪಡೆಯದ ಅಂಗಡಿಗಳಿಗೆ ಬೀಗ ಜಡಿಯಲಾಗಿದೆ ಎಂದರು.

ಅಂಗಡಿಗಳನ್ನು ಮುಚ್ಚಿದ ಬಳಿಕ ಅವರು ಟ್ರೇಡ್ ಲೈಸನ್ಸ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ನಾವು ಕ್ರಮಕೈಗೊಳ್ಳುವ ಮುಂಚೆಯೇ ನೀವೇ ನೇರವಾಗಿ ಬಂದು ಪರವಾನಗಿ ಪಡೆದುಕೊಳ್ಳಿ, ನವೀಕಕರಿಸಿಕೊಳ್ಳಿ. ಆಗ ಯಾವುದೇ ತೊಂದರೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಪರವಾನಗಿ ಪಡೆದುಕೊಳ್ಳುವಂತೆ ಹಲವು ಸಲ‌ ಮನವಿ ಮಾಡಲಾಗಿದೆ. ಆದರೂ ಕೆಲ ವ್ಯಾಪಾರಸ್ಥರು ಲೈಸನ್ಸ್ ಪಡೆದುಕೊಂಡಿಲ್ಲ. ಪರವಾನಗಿ ಪಡೆಯಲು ತೊಡಕುಗಳಿದ್ದಲ್ಲಿ ಪತ್ರದ ಮೂಲಕ ನೇರವಾಗಿ ಗಮನಕ್ಕೆ ತನ್ನಿ ಎಂದು ಗುರುದತ್ ಹೆಗಡೆ ವ್ಯಾಪಾರಸ್ಥರಿಗೆ, ಮಳಿಗೆದಾರರಿಗೆ ಹೇಳಿದ್ದಾರೆ.

ಮೈಸೂರು: ತೆರಿಗೆ ಕಟ್ಟದವರಿಗೆ ಬಿಸಿ ಮುಟ್ಟಿಸಿದ ಪಾಲಿಕೆ..! ಮಳಿಗೆಗೆ ಬೀಗ ಜಡಿದ ಅಧಿಕಾರಿಗಳು

ಡಿಸೆಂಬರ್‌ 2 ರಂದು ಪಾಲಿಕೆ ವಲಯ ಕಚೇರಿ 6ರ ಸಹಾಯಕ ಆಯುಕ್ತ ಎ.ಎಸ್‌.ರಂಜಿತ್‌ ಕುಮಾರ್‌ ನೇತೃತ್ವದಲ್ಲಿ ಕೆ.ಆರ್‌.ವೃತ್ತದಿಂದ ದೇವರಾಜ ಅರಸ್‌ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ, ತೆರಿಗೆ ಕಟ್ಟದೇ ಇರುವವರು ಹಾಗೂ ಟ್ರೇಡ್‌ ಲೈಸನ್ಸ್‌ ನವೀಕರಿಸದಿರುವವರಿಗೆ ಎಚ್ಚರಿಕೆ ನೀಡಿದ್ದರು.

ಮೈಸೂರು: ಕಟ್ಟಡ ತ್ಯಾಜ್ಯ ವಿಲೇವಾರಿ ಪ್ಲಾಂಟ್‌ಗೆ ಅನುಮತಿ | ಸುದೀರ್ಘ ಚರ್ಚೆ ಬಳಿಕ ಪಾಲಿಕೆಯಿಂದ ಒಪ್ಪಿಗೆ

ಅದಲ್ಲದೇ ಕೆ.ಆರ್‌.ವೃತ್ತದಲ್ಲಿರುವ ಎಸ್‌ಎಲ್‌ಎನ್‌ ಲ್ಯಾಂಡ್ರಿ ಮಾಲೀಕರು ಕೆಲ ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ 4 ಲಕ್ಷ ರೂ. ತೆರಿಗೆ ಪಾವತಿಸದ ಕಾರಣ ಬೀಗ ಹಾಕಲಾಗಿತ್ತು. ತೆರಿಗೆ ಕಟ್ಟದ ಹಾಗೂ ಟ್ರೇಡ್‌ ಲೈಸನ್ಸ್‌ ನವೀಕರಿಸದ ಮಳಿಗೆಗಳಿಗೆ ಬೀಗ ಜಡಿಯಲು ಪಾಲಿಕೆ ಮುಂದಾಗಿದೆ.

ಮೈಸೂರಲ್ಲಿ ಕೊರೊನಾ ಲಸಿಕೆ ನೀಡಲು ಲಿಸ್ಟ್ ರೆಡಿ‌..! 32,000 ಹೆಲ್ತ್‌ ವಾರಿಯರ್ಸ್‌ಗೆ ವ್ಯಾಕ್ಸಿನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ