ಆ್ಯಪ್ನಗರ

ನಾಡಹಬ್ಬ ದಸರಾ 2019 ಪೋಸ್ಟರ್ ಬಿಡುಗಡೆ, ವೆಬ್‌ಸೈಟ್‌ಗೆ ಚಾಲನೆ

ನಾಡಹಬ್ಬ ದಸರಾದ ಅಧಿಕೃತ ಪೋಸ್ಟರ್‌ ಮತ್ತು ವೆಬ್‌ಸೈಟ್‌ಗೆ ಉಸ್ತುವಾರಿ ಸಚಿವ ವಿ ಸೋಮಣ್ಣ ಮತ್ತು ಶಾಸಕ ರಾಮದಾಸ್‌ ಶನಿವಾರ ಚಾಲನೆ ನೀಡಿದರು.

Vijaya Karnataka Web 31 Aug 2019, 2:07 pm
ಮೈಸೂರು: ನಾಡಹಬ್ಬ ದಸರಾ 2019ರ ಪೋಸ್ಟರ್‌ ಮತ್ತು ಅಧಿಕೃತ ವೆಬ್‌ಸೈಟ್‌ಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಶಾಸಕ ರಾಮದಾಸ್‌ ಚಾಲನೆ ನೀಡಿದರು. ದಸರಾ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದ ಕೆಆರ್‌ ನಗರ ಶಾಸಕ ರಾಮದಾಸ್ ದಸರಾ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದರು.
Vijaya Karnataka Web Mysore Dasara poster


ಮೈಸೂರಿನ ಜಲದರ್ಶಿನಿಯಲ್ಲಿ ದಸರಾ ಪೋಸ್ಟರ್ಅನ್ನು ವಿ. ಸೋಮಣ್ಣ ಬಿಡುಗಡೆ ಮಾಡಿದರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ ಭಾಗಿಯಾಗಿದ್ದರು. ಪೋಸ್ಟರ್‌ಗೆ ಚಾಲನೆ ನೀಡಿದ ಬಳಿಕ ದಸರಾ ವೆಬ್‌ಸೈಟ್‌ಗೆ ಶಾಸಕ ರಾಮದಾಸ್‌ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ದಸರಾ ಕಾರ್ಯಕ್ರಮದಲ್ಲಿ ಮುನಿಸು ಮರೆತು ಶಾಸಕ ರಾಮದಾಸ್‌ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಂತರ ಸಚಿವ ವಿ.ಸೋಮಣ್ಣ ಪಕ್ಕದಲ್ಲಿ ಕುಳಿತು ಸುದ್ದಿಗೋಷ್ಠಿಯಲ್ಲಿ ರಾಮದಾಸ್‌ ಭಾಗಿಯಾಗಿದ್ದರು.


ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ್‌. ನಾಗೇಂದ್ರ, ಮೇಯರ್‌ ಪುಷ್ಪಾ ಜಗನ್ನಾಥ್‌ ಮತ್ತಿತರರು ಭಾಗಿಯಾಗಿದ್ದರು. ದಸರಾ ಕಾರ್ಯಕ್ರಮಗಳಿಂದ ರಾಮದಾಸ್‌ ದೂರ ಉಳಿದಿದ್ದರೂ ಗಣನೆಗೆ ತೆಗೆದುಕೊಳ್ಳದೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಕೆಲಸ ಆರಂಭಿಸಿದ್ದರು.

ಮೈಸೂರು ದಸರಾ 2019ರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.mysoredasara.gov.in/

ಸಚಿವರಿಂದ ಜಂಬುಸವಾರಿ ಮಾರ್ಗದಲ್ಲಿ 4 ಕಿ.ಮೀ ನಡಿಗೆ
ರಾಜಮಾರ್ಗದಲ್ಲಿ ಜಂಬುಸವಾರಿ ತೆರಳುವ ಕಾರಣ ರಾಜಮಾರ್ಗದಲ್ಲಿರುವ ಸಮಸ್ಯೆಗಳನ್ನು ಅರಿಯಲು ಸಚಿವ ಸೋಮಣ್ಣ ಕಾಲ್ನಡಿಗಲ್ಲಿ ತೆರಳಿದರು. ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಬನ್ನಿಮಂಟಪದ ವರೆಗೂ ನಡೆದು ಸಮಸ್ಯೆಗಳನ್ನು ಆಲಿಸಿದರು. ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದಾಗ ಇರುವ ಸಮಸ್ಯೆ ಗೊತ್ತಾಗಲಿದೆ, ಹೀಗಾಗಿ ನಾಲ್ಕು ಕಿ.ಮೀ ದೂರ ನಡಿಗೆ ಮಾಡುತ್ತಿದ್ದೇವೆ. ನಾಡ ಹಬ್ಬ ದಸರಾಗೆ ಕಪ್ಪು ಚುಕ್ಕೆ ಬಾರದ ಹಾಗೆ ನಡೆದುಕೊಳ್ಳಲಾಗುವುದು ಎಂದು ಸಚಿವ ವಿ. ಸೋಮಣ್ಣ ಹೇಳಿದರು

ರಾಜಮಾರ್ಗದಲ್ಲಿ ಜಂಬುಸವಾರಿ ಸುಗಮವಾಗಿ ತೆರಳಲು ಫುಟ್ಪಾತ್, ರಸ್ತೆ ಸಂಚಾರ, ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗಮನಹರಿಸಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ವಿ. ಸೋಮಣ್ಣ ಸೂಚನೆ ನೀಡಿದರು.

ಸಚಿವ ವಿ. ಸೋಮಣ್ಣ ಜತೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಅಹಮ್ಮದ್ ಶಫಿ. ವಿವಿಧ ಇಲಾಖೆಗಳ ಅಧಿಕಾರಿಗಳು ಸಾತ್‌ ನೀಡದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ