ಆ್ಯಪ್ನಗರ

ವಿಶ್ವ ವಿಖ್ಯಾತ ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ ನೀಡಿದ ಡಾ. ಮಂಜುನಾಥ್‌, ಸಿಎಂ ಬಿಎಸ್‌ವೈ ಮತ್ತಿತರು ಸಾಥ್‌!

ಮೈಸೂರು ಬೆಟ್ಟದಲ್ಲಿ ನಾಡಹಬ್ಬಗೆ ಬ್ರಾಹ್ಮಿ ಮುಹೂರ್ತದಲ್ಲಿ ಚಾಲನೆ ನೀಡಲಾಗಿದೆ. . ಇನ್ನು ಉದ್ಘಾಟನೆ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ಸಿಕ್ಕಿದಂತೆ ಆಗಿದೆ. ಇನ್ನು ಹನ್ನೊಂದು ದಿನಗಳ ಕಾಲ ಸರಳವಾಗಿ ಮೈಸೂರು ದಸರಾ ನಡೆಯಲಿದೆ.

Vijaya Karnataka Web 17 Oct 2020, 2:48 pm
ಮೈಸೂರು: ಐತಿಹಾಸಿಕ, ನಾಡಹಬ್ಬ, ಮೈಸೂರಿನ 410ನೇ ದಸರೆ ಮಹೋತ್ಸವಕ್ಕೆ ಚಾಲನೆ ದೊರಕಿದೆ. 7.55ರ ಬ್ರಾಹ್ಮಿ ಶುಭ ಲಗ್ನದಲ್ಲಿ ಕೊರೊನಾ ವಾರಿಯರ್‌ ಆದ ಡಾ.ಸಿಎನ್‌ ಮಂಜುನಾಥ್‌ ರವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚೆನೆಗೈಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
Vijaya Karnataka Web EkgD4DVU0AAaBbJ


ಇನ್ನು ಉದ್ಘಾಟನೆಗೂ ಮುನ್ನ ಇಂದು ಬೆಳಗಿನ ಜಾವದಿಂದಲೇ ಚಾಮುಂಡೇಶ್ವರಿ ತಾಯಿಗೆ ಗೆ ರುದ್ರಾಭಿಷೇಕ, ಪಂಚಾಮೃತಭಿಷೇಕ, ಮಹಾನ್ಯಾಸ ಸೇರಿದಂತೆ ವಿವಿಧ ಪೂಜೆಗಳು ನಡೆದವು.. ಈ ಬಾರಿ ತಾಯಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಅಲಂಕಾರ ಸಹ ನಡೆದಿದೆ. ದೇಗುಲದಿಂದ ಹೊರಗಿರುವ ಬೆಳ್ಳಿಯ ರಥದಲ್ಲಿ ನಾಡ ಅಧಿದೇವತೆಯನ್ನು ಪ್ರತಿಷ್ಠಾಪಿಸಿ ನೆರದಿದ್ದ‌ ಮುಖ್ಯಮಂತ್ರಿ ಯಡಿಯೂರಪ್ಪನವರು ಸೇರಿದಂತೆ ಎಲ್ಲಾ ಗಣ್ಯರು ಪಷ್ಪಾರ್ಚನೆಗೈದ್ಯರು.

ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಿಯೇ ಕಾರ್ಯಕ್ರಮ ರೂಪಿಸಲಾಗಿತ್ತು. ಅಲ್ಲದೇ 200 ಆಸನ ವ್ಯವಸ್ಥೆಗಳನ್ನು ಮಾತ್ರವೇ ಹಾಕಲಾಗಿತ್ತು. ಇನ್ನು ವೇದಿಕೆ ಕಾರ್ಯಕ್ರಮದಲ್ಲಿಯೂ ಸಹ ಐವರು ಕೊರೊನಾ ವಾರಿಯರ್ಸ್‌ ಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಸಹ ಕೆಲವೇ ಕ್ಷಣದಲ್ಲಿ ನಡೆಯಲಿದೆ.

ಕೊರೊನಾದ ವಿರುದ್ಧ ಹೋರಾಡಿ ಮಡಿದವರನ್ನು ಕೊರೊನಾ ಹುತಾತ್ಮರೆಂದು ಕರೆಯಿರಿ: ಡಾ. ಮಂಜುನಾಥ್‌

ಪೌರಕಾರ್ಮಿಕರಾದ ಮರಗಮ್ಮ, ವೈದ್ಯಕೀಯ ಅಧಿಕಾರಿ ಡಾ. ನವೀನ್ ಕುಮಾರ್, ಸ್ಟಾಫ್ ನರ್ಸ್ ರುಕ್ಮಿಣಿ, ಆಶಾ ಕಾರ್ಯಕರ್ತೆಯಾದ ನೂರ್ ಜಾನ್, ಪೊಲೀಸ್ ಕಾನ್ ಸ್ಟೆಬಲ್ ಕುಮಾರ್ ಪಿ., ಸಾಮಾಜಿಕ ಕಾರ್ಯಕರ್ತರಾದ ಆಯೂಬ್ ಅಹಮದ್ ಗೆ ಸನ್ಮಾನ ನಡೆಯಲಿದೆ.

ಇನ್ನು ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಶಾಸಕ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ,ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮುಂತಾದವರು ಉದ್ಘಾಟಕ ಡಾ. ಮಂಜುನಾಥ್‌ ಅವರಿಗೆ ಸಾಥ್‌ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ