ಆ್ಯಪ್ನಗರ

'ಜ್ಯೋತಿಷಿಗಳ ಮಾತು ಕೇಳಿದರೆ ಮಾನಸಿಕ ರೋಗ ಹೆಚ್ಚಳ': ನ್ಯಾಯಾಧೀಶರ ಕಳವಳ

ಪ್ರತಿದಿನವೂ ದಿನಭವಿಷ್ಯ, ವಾರಭವಿಷ್ಯ, ರಾಶಿ ಭವಿಷ್ಯ, ರಾಶಿ ಫಲದಂಥಾ ಕಾರ್ಯಕ್ರಮಗಳನ್ನು ನೋಡುವುದು ಜನರಿಗೆ ಚಟವಾಗಿ ಪರಿಣಮಿಸಿದೆ. ಬೆಳಗ್ಗೆ ಎದ್ದರೆ ಸಾಕು ಜ್ಯೋತಿಷ್ಯ ಕಾರ್ಯಕ್ರಮ ನೋಡಬೇಕು ಅನ್ನೋ ಹವ್ಯಾಸ ಕೆಟ್ಟದು ಅಂತಾರೆ ನ್ಯಾಯಾಧೀಶರು!

Vijaya Karnataka 10 Oct 2019, 8:23 pm
ಮೈಸೂರು: 'ಸಂವಿಧಾನದಲ್ಲಿ ಹೇಳಿರುವಂತೆ ಯಾವುದೇ ವಿಚಾರವನ್ನು ವೈಜ್ಞಾನಿಕವಾಗಿ ವಿಚಾರ ಮಾಡಿದರೆ ಮಾನಸಿಕ ರೋಗ ಬರುವುದಿಲ್ಲ. ಆದರೆ, ಟಿವಿಯಲ್ಲಿ ಬರುವ ಜ್ಯೋತಿಷಿಗಳ ಮಾತು ಕೇಳುವುರಿಂದಲೇ ಮಾನಸಿಕ ರೋಗ ಹೆಚ್ಚಾಗುತ್ತಿದೆ' ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ‍್ಯದರ್ಶಿ ಬಿ. ಪಿ. ದೇವಮಾನೆ ಕಳವಳ ವ್ಯಕ್ತಪಡಿಸಿದ್ದಾರೆ.
Vijaya Karnataka Web poojari cartoon


ಮೈಸೂರು ಜಿಲ್ಲಾಡಳಿತ ಕೆ.ಆರ್‌.ಆಸ್ಪತ್ರೆಯ ಪೆಥಾಲಜಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ ದೇವಮಾನೆ, 'ವಿಶ್ವ ಸಂಸ್ಥೆಯ ಪ್ರಕಾರ ಒಬ್ಬ ಮನುಷ್ಯನಿಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸ್ವಾತಂತ್ರ್ಯ ಹಾಗೂ ಅವರ ಹಕ್ಕುಗಳು ಸಿಗದಿದ್ದರೆ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುತ್ತಾನೆ ಎಂದು ಹೇಳಿದೆ. ನಮ್ಮ ನ್ಯಾಯಾಲಯಕ್ಕೆ ವ್ಯಾಜ್ಯಗಳನ್ನು ಹೊತ್ತು ತರುವ ಹಾಗೂ ಅಪರಾಧ ಮಾಡಿ ಬರುವವರೆಲ್ಲಸ್ವಲ್ಪ ಮಾನಸಿಕ ರೋಗಿಗಳೇ ಆಗಿದ್ದಾರೆ' ಎಂದು ಅಭಿಪ್ರಾಯಪಟ್ಟರು.

ರಸ್ತೆ ಹೊಂಡಕ್ಕೆಲ್ಲಾ ಮಳೆಯೇ ಕಾರಣ! ಹೆದ್ದಾರಿ ಪ್ರಾಧಿಕಾರದ ಉತ್ತರಕ್ಕೆ ಸಿಟ್ಟಿಗೆದ್ದ ಜನ!

'ನಂಬಿಕೆ ಮತ್ತು ವಾಸ್ತವತೆ ನಡುವೆ ಹೆಚ್ಚು ಅಂತರ ಉಂಟಾದರೆ, ಮಾನಸಿಕ ಸಮಸ್ಯೆ ಆಗುತ್ತದೆ. ಭಾರತದಲ್ಲಿ ರಸ್ತೆ ಅಪಘಾತ ಮತ್ತು ಆತ್ಮಹತ್ಯೆಯಿಂದಲೇ ಹೆಚ್ಚು ಸಾವು ಸಂಭವಿಸುತ್ತಿದೆ. ಆತ್ಮಹತ್ಯೆಗೆ ಪ್ರಮುಖ ಕಾರಣ ಮಾನಸಿಕ ರೋಗ. ಸದೃಢ ದೇಹದೊಂದಿಗೆ ಮನಸ್ಸು ಗಟ್ಟಿಯಾಗಿರಬೇಕು' ಎಂದು ದೇವಮಾನೆ ಸಲಹೆ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಪ್ರಧಾನ ಜಿಲ್ಲಾಸತ್ರ ನ್ಯಾಯಾಧೀಶ ಎಸ್‌.ಕೆ.ಒಂಟಿಗೋಡಿ, 'ಒತ್ತಡ, ಸಮಸ್ಯೆ ಮತ್ತು ಸವಾಲಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ಸೆಲೆಬ್ರಿಟಿಗಳು ಆತ್ಮಹತ್ಯೆ ಮೊರೆ ಹೋಗುತ್ತಿದ್ದಾರೆ' ಎಂದು ಕಳವಳ ವ್ಯಕ್ತಪಡಿಸಿದರು.

ಮುಂಗಾರು ಮಳೆ ಅಬ್ಬರ: ಈ ಬಾರಿ ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ