ಮೈಸೂರು ಮೂಲದ ಶ್ರೀದೇವಿ ಜತೆ ಉಂಗುರ ಬದಲಾಯಿಕೊಂಡ ಯುವರಾಜ್ ಕುಮಾರ್
ಮೈಸೂರು: ವರನಟ ಡಾ.ರಾಜ್ಕುಮಾರ್ ಕುಟುಂಬದ ಕುಡಿ, ನಟ ರಾಘವೇಂದ್ರ ರಾಜಕುಮಾರ್ ಕಿರಿಯ ಪುತ್ರ ಯುವರಾಜಕುಮಾರ್ ವಿವಾಹ ನಿಶ್ಚಿತಾರ್ಥ ನಗರದಲ್ಲಿ ನಡೆಯಿತು.
ನಗರದ ಖಾಸಗಿ ಹೋಟೆಲ್ನಲ್ಲಿ ಮೈಸೂರು ಮೂಲದ ಶ್ರೀದೇವಿ ಜತೆ ಉಂಗುರ ಬದಲಾಯಿಕೊಂಡರು.
ಯುವರಾಜ್ ಕುಮಾರ್- ಶ್ರೀದೇವಿ ಭೈರಪ್ಪ ನಿಶ್ಚಿತಾರ್ಥಕ್ಕೆ ನಟರಾದ ಶಿವರಾಜ್ಕುಮಾರ್, ಪುನೀತ್ರಾಜ್ಕುಮಾರ್ ಸೇರಿದಂತೆ ರಾಜ್ ಕುಟುಂಬ ಸದಸ್ಯರು ಹಾಜರಾಗಿದ್ದು, ಕುಟುಂಬಸ್ಥರು ನವ ಜೋಡಿಗೆ ಶುಭ ಹಾರೈಸಿದರು.
ಬೆಳಗ್ಗೆ 11ಕ್ಕೆ ಸಂಪ್ರದಾಯದ ಪ್ರಕಾರ ಕಾರ್ಯಕ್ರಮ ನೇರವೇರಿತು. ಈ ಕಾರ್ಯಕ್ರಮಕ್ಕೆ ರಾಜ್ ಕುಟುಂಬದ ಆಪ್ತರಿಗಷ್ಟೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಮಹಮ್ಮದ್ ನಲಪಾಡ್ ದಾಳಿಯಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಕೂಡ ಕಾಣಿಸಿಕೊಂಡಿದ್ದರು. ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ತನ್ನ ಬಾಲ್ಯ ಸ್ನೇಹಿತನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಿವರಾಜ್ಕುಮಾರ ಮಾತನಾಡಿ, ''ಕುಟುಂಬದಲ್ಲಿ ಕಾರ್ಯಕ್ರಮ ನೆರವೇರಿದರೆ ಯಾವಾಗಲೂ ಸಂತೋಷವೇ ಆಗುತ್ತದೆ. ಮೈಸೂರಿನ ಮಗಳು ನಮ್ಮ ಮನೆ ಸೇರಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಶ್ರೀದೇವಿ ಹಾಗೂ ಯುವರಾಜ್ಗೆ ಒಳ್ಳೆಯದಾಗಲಿ,'' ಎಂದು ಹೇಳಿದ್ದಾರೆ.
ಬಜೆಟ್ನಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಯೋಗ ಕೇಂದ್ರ ನಿರ್ಮಾಣದ ಪ್ರತಿಕ್ರಿಯಿಸಿದ ಅವರು ''ನಾನು ನಮ್ಮ ಮನೆಯ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದೆ. ಈ ಘೋಷಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದುಕೊಳ್ಳದೆ ಮಾತನಾಡಬಾರದು. ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ. ಯಾವುದೇ ಸರಕಾರ ಇರಲಿ ಒಳ್ಳೆದು ಮಾಡಿದ್ರೆ ಸಾಕು. ರೈತರ ಸಮಸ್ಯೆಗಳು ಏನಿದೆ ಅದನ್ನ ಬಗೆಹರಿಸಿದ್ರೆ ಸಾಕು. ಎಲ್ಲರಿಗೂ ಒಳ್ಳೆದು ಆದ್ರೆ ನಮಗೆ ಖುಷಿ,'' ಎಂದರು.
ಮೈಸೂರು: ವರನಟ ಡಾ.ರಾಜ್ಕುಮಾರ್ ಕುಟುಂಬದ ಕುಡಿ, ನಟ ರಾಘವೇಂದ್ರ ರಾಜಕುಮಾರ್ ಕಿರಿಯ ಪುತ್ರ ಯುವರಾಜಕುಮಾರ್ ವಿವಾಹ ನಿಶ್ಚಿತಾರ್ಥ ನಗರದಲ್ಲಿ ನಡೆಯಿತು.
ನಗರದ ಖಾಸಗಿ ಹೋಟೆಲ್ನಲ್ಲಿ ಮೈಸೂರು ಮೂಲದ ಶ್ರೀದೇವಿ ಜತೆ ಉಂಗುರ ಬದಲಾಯಿಕೊಂಡರು.
ಯುವರಾಜ್ ಕುಮಾರ್- ಶ್ರೀದೇವಿ ಭೈರಪ್ಪ ನಿಶ್ಚಿತಾರ್ಥಕ್ಕೆ ನಟರಾದ ಶಿವರಾಜ್ಕುಮಾರ್, ಪುನೀತ್ರಾಜ್ಕುಮಾರ್ ಸೇರಿದಂತೆ ರಾಜ್ ಕುಟುಂಬ ಸದಸ್ಯರು ಹಾಜರಾಗಿದ್ದು, ಕುಟುಂಬಸ್ಥರು ನವ ಜೋಡಿಗೆ ಶುಭ ಹಾರೈಸಿದರು.
ಬೆಳಗ್ಗೆ 11ಕ್ಕೆ ಸಂಪ್ರದಾಯದ ಪ್ರಕಾರ ಕಾರ್ಯಕ್ರಮ ನೇರವೇರಿತು. ಈ ಕಾರ್ಯಕ್ರಮಕ್ಕೆ ರಾಜ್ ಕುಟುಂಬದ ಆಪ್ತರಿಗಷ್ಟೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಮಹಮ್ಮದ್ ನಲಪಾಡ್ ದಾಳಿಯಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಕೂಡ ಕಾಣಿಸಿಕೊಂಡಿದ್ದರು. ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ತನ್ನ ಬಾಲ್ಯ ಸ್ನೇಹಿತನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಿವರಾಜ್ಕುಮಾರ ಮಾತನಾಡಿ, ''ಕುಟುಂಬದಲ್ಲಿ ಕಾರ್ಯಕ್ರಮ ನೆರವೇರಿದರೆ ಯಾವಾಗಲೂ ಸಂತೋಷವೇ ಆಗುತ್ತದೆ. ಮೈಸೂರಿನ ಮಗಳು ನಮ್ಮ ಮನೆ ಸೇರಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಶ್ರೀದೇವಿ ಹಾಗೂ ಯುವರಾಜ್ಗೆ ಒಳ್ಳೆಯದಾಗಲಿ,'' ಎಂದು ಹೇಳಿದ್ದಾರೆ.
ಬಜೆಟ್ನಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಯೋಗ ಕೇಂದ್ರ ನಿರ್ಮಾಣದ ಪ್ರತಿಕ್ರಿಯಿಸಿದ ಅವರು ''ನಾನು ನಮ್ಮ ಮನೆಯ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದೆ. ಈ ಘೋಷಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದುಕೊಳ್ಳದೆ ಮಾತನಾಡಬಾರದು. ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ. ಯಾವುದೇ ಸರಕಾರ ಇರಲಿ ಒಳ್ಳೆದು ಮಾಡಿದ್ರೆ ಸಾಕು. ರೈತರ ಸಮಸ್ಯೆಗಳು ಏನಿದೆ ಅದನ್ನ ಬಗೆಹರಿಸಿದ್ರೆ ಸಾಕು. ಎಲ್ಲರಿಗೂ ಒಳ್ಳೆದು ಆದ್ರೆ ನಮಗೆ ಖುಷಿ,'' ಎಂದರು.