ಆ್ಯಪ್ನಗರ

ಮೈಸೂರು-ಜೈಪುರ ರೈಲು ಮಾರ್ಗ ಬದಲಾವಣೆ

ಸೌತ್‌ವೆಸ್ಟ್ರನ್‌ ರೈಲ್ವೆ ಬೆಂಗಳೂರು ವಿಭಾಗದ ಮಕಾಲಿದುರ್ಗ ಮತ್ತು ದೇವಾರಪಲ್ಲಿ ನಿಲ್ದಾಣದವರೆಗೆ ನಾನ್‌ ಇಂಟರ್‌ಲಾಕಿಂಗ್‌ ಕಾಮಗಾರಿ ಇರುವ ಕಾರಣ ಕೆಲವು ರೈಲುಗಾಡಿಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

Vijaya Karnataka 27 Mar 2019, 5:00 am
Vijaya Karnataka Web mysore jaipur railway line change
ಮೈಸೂರು-ಜೈಪುರ ರೈಲು ಮಾರ್ಗ ಬದಲಾವಣೆ
ಮೈಸೂರು: ಸೌತ್‌ವೆಸ್ಟ್ರನ್‌ ರೈಲ್ವೆ ಬೆಂಗಳೂರು ವಿಭಾಗದ ಮಕಾಲಿದುರ್ಗ ಮತ್ತು ದೇವಾರಪಲ್ಲಿ ನಿಲ್ದಾಣದವರೆಗೆ ನಾನ್‌ ಇಂಟರ್‌ಲಾಕಿಂಗ್‌ ಕಾಮಗಾರಿ ಇರುವ ಕಾರಣ ಕೆಲವು ರೈಲುಗಾಡಿಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಸೌತ್‌ವೆಸ್ಟ್ರನ್‌ ರೈಲ್ವೆ ಬೆಂಗಳೂರು ವಿಭಾಗದ ಯಲಹಂಕದಿಂದ ಧರ್ಮವರಂ ವರೆಗಿನ ಜೋಡಿ ಹಳಿ ಸೇವೆಯನ್ನು ಆರಂಭಿಸುವ ಹಿನ್ನೆಲೆಯಲ್ಲಿ ಮಾ.28ರಿಂದ ಏ.5ರವರೆಗೆ ಮಕಾಲಿದುರ್ಗ ಮತ್ತು ದೇವಾರಪಲ್ಲಿ ನಿಲ್ದಾಣದವರೆಗೆ ನಾನ್‌ ಇಂಟರ್‌ಲಾಕಿಂಗ್‌ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಕೆಲವು ರೈಲುಗಾಡಿಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು, ಮಂಡ್ಯ, ಕೆಎಸ್‌ಆರ್‌ ಬೆಂಗಳೂರು, ಹುಂದೂಪುರ, ಧರ್ಮಾವರಂ, ಅನಂತಪುರಂ ಮಾರ್ಗವಾಗಿ ಸಂಚರಿಸುತ್ತಿದ್ದ ಮೈಸೂರು-ಜೈಪುರ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಗಾಡಿಯು ಮಾ. 28, 30, ಏ.4 ರಂದು ಹಾಸನ, ಅರಸೀಕೆರೆ, ರಾಯದುರ್ಗ ಮಾರ್ಗವಾಗಿ ಸಂಚರಿಸಲಿದೆ. ಹಾಗೆಯೆ ಜೈಪುರದಿಂದ ಮೈಸೂರಿಗೆ ಬರುವ ಸೂಪರ್‌ ಫಾಸ್ಟ್‌ ರೈಲು ಮಾ. 27, ಏ.1,3 ರಂದು ಅನಂತಪುರ, ಧರ್ಮಾವರಂ, ಹಿಂದೂಪುರ, ಬೆಂಗಳೂರು, ಮಂಡ್ಯ ಮಾರ್ಗಕ್ಕೆ ಬದಲಾಗಿ, ಗುಂತಕಲ್‌, ರಾಯದುರ್ಗ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ.

ಮೈಸೂರು, ಮಂಡ್ಯ, ಕೆಂಗೇರಿ, ಕೆಎಸ್‌ಆರ್‌ ಬೆಂಗಳೂರು, ಯಲಹಂಕ, ಹಿಂದೂಪುರ, ಧರ್ಮಾವರ, ಅನಂತಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಮೈಸೂರು-ಸಾಯಿನಗರ್‌ ಶಿರಡಿ ಎಕ್ಸ್‌ಪ್ರೆಸ್‌ ರೈಲುಗಾಡಿ ಏ. 1 ರಂದು ಅರಸಿಕೆರೆ, ರಾಯದುರ್ಗ,ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದೆ. ಹಾಗೆಯೆ ಸಾಯಿನಗರ ಶಿರಡಿಯಿಂದ ಮೈಸೂರಿಗೆ ಆಗಮಿಸುವ ರೈಲು ಏ.2ರಂದು ಬಳ್ಳಾರಿ, ರಾಯದುರ್ಗ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ