ಆ್ಯಪ್ನಗರ

ನ್ಯಾಕ್‌ ಗ್ರೇಡ್‌ ಪಡೆಯಲು ವಿವಿ ಸಿದ್ಧತೆ

ಮಾನ್ಯತಾ ಪ್ರಕ್ರಿಯೆ ಕಾರ್ಯಾಗಾರಕ್ಕೆ ಕುಲಪತಿ ಚಾಲನೆ ವಿಕ ಸುದ್ದಿಲೋಕ ಮೈಸೂರು ನ್ಯಾಕ್‌ನ ಅತ್ಯುನ್ನತ ಗ್ರೇಡ್‌ ಪಡೆಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ...

Vijaya Karnataka 26 May 2019, 5:00 am
ಮಾನ್ಯತಾ ಪ್ರಕ್ರಿಯೆ ಕಾರ್ಯಾಗಾರಕ್ಕೆ ಕುಲಪತಿ ಚಾಲನೆ
Vijaya Karnataka Web mysore university is preparing for get nak grade
ನ್ಯಾಕ್‌ ಗ್ರೇಡ್‌ ಪಡೆಯಲು ವಿವಿ ಸಿದ್ಧತೆ

ಮೈಸೂರು: ನ್ಯಾಕ್‌ನ ಅತ್ಯುನ್ನತ ಗ್ರೇಡ್‌ ಪಡೆಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ. ನ್ಯಾಕ್‌ ಗ್ರೇಡ್‌ ಪಡೆಯಲು ವಿಸಿ, ರಿಜಿಸ್ಟಾರ್‌ ಮಾತ್ರವಲ್ಲ ಬೋಧಕ, ಬೋಧಕೇತರ ವರ್ಗದವರು ಶ್ರಮಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದಿಂದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ 'ನ್ಯಾಕ್‌ ಮಾನ್ಯತಾ ಪ್ರಕ್ರಿಯೆ' ಶನಿವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

''ಪ್ರೊ.ಎನ್‌.ಎಸ್‌.ಹೆಗ್ಡೆ, ಡಾ.ಶಶಿಧರ್‌ ಪ್ರಸಾದ್‌ ಹಾಗೂ ಪ್ರೊ.ತಳವಾರ್‌ ಅವರ ಮೈಸೂರು ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿದ್ದ ಸಂದರ್ಭ ನ್ಯಾಕ್‌ನಿಂದ ಫೈವ್‌ ಸ್ಟಾರ್‌ ಮಾನ್ಯತೆ ನೀಡಲಾಗಿತ್ತು. ನಂತರ ವಿಶ್ವವಿದ್ಯಾಲಯಕ್ಕೆ ನ್ಯಾಕ್‌ನ ಗ್ರೇಡ್‌ ಇಳಿಮುಖವಾಯಿತು. ಅವರ ಕಾಲದಲ್ಲಿ ಎಲ್ಲಾ ವಿಭಾಗಕ್ಕೂ ಸಾಕಷ್ಟು ಬೋಧಕ ವರ್ಗ ಇತ್ತು. ಅದರಿಂದ ಈಚಿಗೆ ಶೇ.49ರಷ್ಟು ಮಾತ್ರ ಬೋಧಕ ವರ್ಗಕ್ಕಿದೆ. ಶೇ.51 ರಷ್ಟು ಬೋಧಕ ವರ್ಗದ ಕೊರತೆ ಎದುರಿಸುದ್ದೇವೆ,'' ಎಂದು ವಿಷಾದಿಸಿದರು.

''ಈ ಬಾರಿಯಿಂದ ನ್ಯಾಕ್‌ ಹೊಸ ಮಾದರಿ ಅಳವಡಿಸಿಕೊಂಡಿದೆ. ವಿಶ್ವವಿದ್ಯಾಲಯವು ಶೇ.70ರಷ್ಟು ಸ್ವಯಂ ಮೌಲ್ಯಮಾಪನ ಮಾಡಿಕೊಂಡು ನ್ಯಾಕ್‌ ವೆಬ್‌ಸೈಟ್‌ ದತ್ತಾಂಶ ಅಪ್‌ಲೋಡ್‌ ಮಾಡಬೇಕು. ಉಳಿದ ಶೇ.30ರಷ್ಟರಲ್ಲಿ ನ್ಯಾಕ್‌ ಸಮಿತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ನಮ್ಮ ವಿಶ್ವವಿದ್ಯಾಲಯ ಬೋಧಕ ವರ್ಗ ಉತ್ತಮವಾಗಿ ಶಿಕ್ಷಣ ನೀಡುತ್ತಿದೆ. ಆದರೆ, ಅವರು ಮಾಡಿದ ಕಾರ‍್ಯಗಳು ಹಾಗೂ ಕೆಲಸವನ್ನು ಹೊರ ಜಗತ್ತಿಗೆ ಹೇಗೆ ಪ್ರಸ್ತುತಪಡಿಸಬೇಕೆಂಬುದರಲ್ಲಿ ಎಡವುತ್ತಿದ್ದಾರೆ. ತಮ್ಮ ಸ್ಯಾಮರ್ಥ್ಯ‌ವನ್ನು ಪ್ರದರ್ಶಿಸುವ ಕೌಶಲ್ಯ, ತಂತ್ರಗಾರಿಕೆ ಇಲ್ಲ. ಆದ್ದರಿಂದ ಎಲ್ಲಾ ಪ್ರಾಧ್ಯಾಪಕ ಕೌಶಲ್ಯ ತಂತ್ರಗಾರಿಕೆ ಮೈಗೂಡಿಸಿಕೊಳ್ಳಬೇಕೆಂದು,'' ಎಂದು ಸಲಹೆ ನೀಡಿದರು.

ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ''ಗುಣಮಟ್ಟ ಮತ್ತು ಸಮಾನ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಗುಣಮಟ್ಟದ ಕಡೆ ಕೇಂದ್ರೀಕರಿಸಿದರೆ ಎಲ್ಲರಿಗೂ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಆದರೂ ಎಲ್ಲರಿಗೂ ಸಮಾನ ಶಿಕ್ಷಣ ನೀಡಲೇಬೇಕು,'' ಎಂದು ಹೇಳಿದರು.

''ನಮ್ಮ ವಿಶ್ವವಿದ್ಯಾಲಯ ದೊಡ್ಡ ಪರಂಪರೆ ಹೊಂದಿದೆ. ಜತೆಗೆ ಅನುಭವಿ ವಿಶ್ವವಿದ್ಯಾಲಯ ಇದರ ಜತೆಯಾಗಿ ಶಿಕ್ಷಣ ತಜ್ಞರ ಸಲಹೆಯೊಂದಿಗೆ ನ್ಯಾಕ್‌ ಅಗ್ರಮಾನ್ಯ ಗ್ರೇಡ್‌ ಪಡೆಯಲು ತಯಾರಿ ನಡೆಸುತ್ತಿದ್ದೇವೆ,'' ಎಂದು ತಿಳಿಸಿದರು.

ನ್ಯಾಕ್‌ನ ಮಾಜಿ ಸಲಹೆಗಾರ ಪ್ರೊ.ವಿಷ್ಣನಾಥ್‌ಚಟ್ಪಲ್ಲಿ , ವಿಶ್ವವಿದ್ಯಾಲಯ ಯೋಜನೆ, ನಿರ್ವಾಹಣೆ ಮತ್ತು ಮೌಲ್ಯಮಾಪಲ ಮಂಡಳಿಯ ನಿರ್ದೇಶಕ ಪ್ರೊ.ಯಶ್ವಂತ್‌ ಡೊಂಗ್ರೆ, ಆಂತರಿಕ ಗುಣಮಟ್ಟದ ಕೇಂದ್ರದ ನಿರ್ದೇಶಕ ಪ್ರೊ.ಗುರು ಸೇರಿದಂತೆ ಮತ್ತಿತರಿದ್ದರು.

ಕಾರ್ಯಾಗಾರದಲ್ಲಿ ಮೈಸೂರು ವಿಶ್ವವಿದ್ಯಾಲಯದ ಎಲ್ಲಾ ಶಾಖೆ ಹಾಗೂ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು. ನ್ಯಾಕ್‌ ಮ್ಯಾನತೆ ಪಡೆಯಲು ವಿಶ್ವವಿದ್ಯಾಲಯ ಹಾಗೂ ಬೋದಕ ವರ್ಗದ ಜವಾಬ್ದಾರಿ ಕುರಿತು ತಾಂತ್ರಿಕ ಗೋಷ್ಠಿಗಳು ನಡೆದವು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲಾರಿಗೂ ಸಾವಿರ ಅಂಕದ ಪರೀಕ್ಷೆ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ