ಆ್ಯಪ್ನಗರ

ಮೈಸೂರಿನ ಸಂಗೀತ ಕಲಾವಿದನಿಗೆ ರಾಷ್ಟ್ರಪ್ರಶಸ್ತಿ

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೈಸೂರಿನ ಗಣೇಶ್‌ ಈಶ್ವರ್‌ ಭಟ್‌ ಅವರು ಭಾರತ ಸರಕಾರದ ವಿಶೇಷಚೇತನರ ಸಬಲೀಕರಣ ಇಲಾಖೆಯ ಆದರ್ಶ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Vijaya Karnataka 30 Nov 2019, 5:00 am
ಮೈಸೂರು: ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೈಸೂರಿನ ಗಣೇಶ್‌ ಈಶ್ವರ್‌ ಭಟ್‌ ಅವರು ಭಾರತ ಸರಕಾರದ ವಿಶೇಷಚೇತನರ ಸಬಲೀಕರಣ ಇಲಾಖೆಯ ಆದರ್ಶ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Vijaya Karnataka Web MYS29NAN1083624


ಡಿ.3ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿಪ್ರಶಸ್ತಿ ಸ್ವೀಕರಿಸಲಿದ್ದಾರೆ. ನಗರದ ಗಂಗೋತ್ರಿ ಬಡಾವಣೆ ನಿವಾಸಿಯಾಗಿರುವ ವಿಶೇಷಚೇತನ ಗಣೇಶ್‌ ಈಶ್ವರ್‌ ಭಟ್‌ ಅವರು, 15 ವರ್ಷಗಳಿಂದ 2 ಬೆರಳುಗಳಲ್ಲೇ ಕೀ ಬೋರ್ಡ್‌ ನುಡಿಸಿ ಹೆಸರು ಮಾಡಿದ್ದಾರೆ. ಗಾಯಕರಾದ ಸಂಗೀತ ಕಟ್ಟಿ, ಅಶ್ವಥ್‌, ಶಂಕರ್‌ ಶಾನುಭೋಗ್‌, ಬಿ.ಕೆ.ಸುಮಿತ್ರ ಮುಂತಾದವರ ಸಂಗೀತ ಕಾರ್ಯಕ್ರಮದಲ್ಲಿ ಕೀ ಬೋರ್ಡ್‌ನಲ್ಲಿಸಾಥ್‌ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಆಕಾಶವಾಣಿ, ದೂರದರ್ಶನ ವಾಹಿನಿಯಲ್ಲಿ200ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ.

ಈಶ್ವರ್‌ ಭಟ್‌ ಅವರ ಪ್ರತಿಭೆಯನ್ನು ಗುರುತಿಸಿ ಈಗಾಗಲೇ ರಾಜ್ಯ ಸರಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಹಾಗೂ ಪ್ರತಿಭಾ ಪಾಟೀಲ್‌ ಅವರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿನಗರದ ಪತ್ರಕರ್ತರ ಭವನದಲ್ಲಿಶುಕ್ರವಾರ ಪುನಶ್ಚೇತನ ಟ್ರಸ್ಟ್‌ ವಿಶೇಷಚೇತನರಿಗಾಗಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಗಣೇಶ್‌ ಈಶ್ವರ್‌ ಭಟ್‌ ಅವರನ್ನು ಸನ್ಮಾನಿಸಿ ಮಾತನಾಡಿದ ಅಂತಾರಾಷ್ಟ್ರೀಯ ಕ್ರೀಡಾಪಟು ಆರ್‌. ಮಂಜುನಾಥ್‌, ಟ್ರಸ್ಟ್‌ನ ಅಧ್ಯಕ್ಷ ಸದಸ್ಯ ರಾಮಚಂದ್ರ, ಜಯಲಕ್ಷ್ಮಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ