ಆ್ಯಪ್ನಗರ

ಮೈಸೂರು ನಿಲ್ದಾಣದಲ್ಲಿ ಮೊದಲ ದಿನವೇ ಜನ ಬಾರದೇ ವಿಮಾನ ಹಾರಾಟ ರದ್ದು!

ಮೈಸೂರಿನ ವಿಮಾನ ನಿಲ್ದಾಣದಿಂದ ಬೆಂಗಳೂರು ಹಾಗೂ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ವಿಮಾನ ಸೇವೆಯನ್ನು ಆರಂಭ ಮಾಡಲಾಗಿದೆ. ಆದರೆ ಆರಂಭವಾದ ಮೊದಲ ದಿನವೇ ಬೆಳಗಾವಿ ವಿಮಾನ ಸಂಚಾರ ರದ್ದು ಮಾಡಲಾಗಿದೆ.

Vijaya Karnataka Web 25 May 2020, 3:30 pm
ಮೈಸೂರು: ಕಳೆದ 2 ತಿಂಗಳಿನಿಂದ ಇದ್ದ ಲಾಕ್‌ಡೌನ್‌ ಪರಿಣಾಮ ಸೋಮವಾರದಿಂದ ವಿಮಾನ ಸಂಚಾರ ಪುನರಾರಂಭವಾಗಿದೆ. ಹಾಗಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರು ಹಾಗೂ ಬೆಳಗಾವಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಈ ಮಧ್ಯೆ ಮೊದಲ ದಿನವೇ ಪ್ರಯಾಣಿಕರಿಲ್ಲದೇ ಬೆಳಗಾವಿಗೆ ಪ್ರಯಾಣ ರದ್ದು ಮಾಡಲಾಯಿತು.
Vijaya Karnataka Web mysuru


ಸಂಜೆ ಅಲಯನ್ಸ್‌ ಏರ್‌ ಸಂಸ್ಥೆಯ ವಿಮಾನವು ಮೈಸೂರಿನಿಂದ ಸಂಜೆ 6.15ಕ್ಕೆ ಹೊರಟು 7.15ಕ್ಕೆ ಬೆಂಗಳೂರು ತಲುಪಲಿದೆ. ಇದಕ್ಕೂ ಮೊದಲು ಈ ವಿಮಾನವು ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು 5.30ಕ್ಕೆ ಮೈಸೂರಿಗೆ ಬರಲಿದೆ. ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಟು 4.30ಕ್ಕೆ ಮೈಸೂರು ಸೇರಲಿದೆ. ಅಂದು ರಾತ್ರಿ 9.45ಕ್ಕೆ ಮೈಸೂರಿನಿಂದ ಹೊರಟು 10.45ಕ್ಕೆ ಬೆಂಗಳೂರು ಸೇರಲಿದೆ.

ಲಾಕ್‌ಡೌನ್‌ಗೆ ಮುನ್ನ ಮೈಸೂರಿನ ಈ ನಿಲ್ದಾಣದಿಂದ ನಿತ್ಯ ಎಂಟು ವಿಮಾನಗಳು, 16 ಟ್ರಿಪ್‌ಗಳಲ್ಲಿ ಹಾರಾಟ ನಡೆಸುತ್ತಿದ್ದವು. ಆದರೆ ಸೋಂಕು ಹರಡಬಹುದಾದ ಪರಿಣಾಮ ರಾಜ್ಯದೊಳಗಣ ವಿಮಾನ ಯಾನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೂ ಜನ ಬಾರದೇ ವಿಮಾನ ಯಾನವೇ ರದ್ದಾಗಿದೆ. ಸದ್ಯ ಬೆಂಗಳೂರು ಸಂಚಾರ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ