ಆ್ಯಪ್ನಗರ

ಮೈಸೂರು: ಎಲ್ಲೆಂದರಲ್ಲಿ ಕಸ ಹಾಕಿದ ಮೊಬೈಲ್ ಶಾಪ್‌ಗಳಿಗೆ ಬಿತ್ತು ದಂಡ..!

ನಿಯಮಗಳನ್ನು ಗಾಳಿಗೆ ತೂರಿ ಸಿಕ್ಕ-ಸಿಕ್ಕ ಜಾಗದಲ್ಲಿ ಕಸ ಹಾಕಿದ ಎರಡು ಮೊಬೈಲ್ ಮಾರಾಟ ಮಳಿಗೆಗಳಿಗೆ ಮೈಸೂರು ಮಹಾನಗರ ಪಾಲಿಕೆಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ. ಸಂಗೀತಾ ಹಾಗೂ ಪೂರ್ವಿಕಾ ಮೊಬೈಲ್‌ ಮಳಿಗೆಗಳಿಗೆ ದಂಡ ವಿಧಿಸಲಾಗಿದೆ.

Vijaya Karnataka Web 18 Jan 2021, 7:21 pm
ಮೈಸೂರು: ಈ ಬಾರಿಯ ಸ್ವಚ್ಛ ಸರ್ವೇಕ್ಷಣ್‌ ನಿಮಿತ್ತ ಮಹಾನಗರ ಪಾಲಿಕೆ ಎಲ್ಲೆಡೆ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಿದೆ. ಈ ಹಿನ್ನೆಲೆ ಸೋಮವಾರ ಮೈಸೂರು ಮಹಾನಗರ ಪಾಲಿಕೆಯ ನಿಯಮಗಳನ್ನು ಗಾಳಿಗೆ ತೂರಿ ಸಿಕ್ಕ-ಸಿಕ್ಕ ಜಾಗದಲ್ಲಿ ಕಸ ಹಾಕಿದ ಎರಡು ಮೊಬೈಲ್ ಮಾರಾಟ ಮಳಿಗೆಗಳಿಗೆ ಪಾಲಿಕೆಯು ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.
Vijaya Karnataka Web mysuru city corporation fines mobile shop for waste
ಮೈಸೂರು: ಎಲ್ಲೆಂದರಲ್ಲಿ ಕಸ ಹಾಕಿದ ಮೊಬೈಲ್ ಶಾಪ್‌ಗಳಿಗೆ ಬಿತ್ತು ದಂಡ..!


ಹೌದು, ಪ್ರಸಕ್ತ ವರ್ಷದ ಸ್ವಚ್ಛ ಸರ್ವೇಕ್ಷಣ್-2021ರ ಸರ್ವೇ ಕಾರ್ಯಕ್ರಮದ ನಿಮಿತ್ತ ಮಹಾನಗರ ಪಾಲಿಕೆಯ ಆಯುಕ್ತರು ಸೇರಿ ಎಲ್ಲ ಅಧಿಕಾರಿಗಳು ಪ್ರತಿದಿನ ಬೆಳಿಗ್ಗೆ 7 ರಿಂದ 9 ಗಂಟೆಯವರಗೆ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆ ಭಾನುವಾರ ಜೋನ್-3ರ ವ್ಯಾಪ್ತಿಗೆ ಒಳಪಡುವ ವಾರ್ಡ್‌- 47ರ ಕುವೆಂಪು ನಗರದ ಅಕ್ಷಯ ಭಂಡಾರ್‌ನಲ್ಲಿರುವ ಸಂಗೀತಾ ಹಾಗೂ ಪೂರ್ವಿಕಾ ಮೊಬೈಲ್ ಮಳಿಗೆಗಳ ಹೆಸರಿನ ಬಿಲ್‌ಗಳು, ಮೊಬೈಲ್ ಬಾಕ್ಸ್ ಸೇರಿ ಇನ್ನಿತರ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ ತಂದು ಸುರಿಯಲಾಗಿತ್ತು. ಇದನ್ನು ಹಲವರು ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು.
ಸಿದ್ದರಾಮಯ್ಯರ ಕಾಲಿಗೆ ಬಿದ್ದ ಮೈಸೂರು ವಿವಿ ರಿಜಿಸ್ಟ್ರಾರ್..! ಚರ್ಚೆಗೆ ಗ್ರಾಸವಾದ ವಿವಿ ಅಧಿಕಾರಿ ನಡೆಈ ವೇಳೆ ಸ್ಥಳಕ್ಕೆ ಆಗಮಿಸಿ ಗಮನಿಸಿದ ಅಧಿಕಾರಿಗಳು ತ್ಯಾಜ್ಯವನ್ನು ವಾಪಸ್‌ ಆಯಾ ಮಳಿಗೆಯ ಮುಂದೆ ಹಾಕಿದ್ದಾರೆ. ನಂತರ ಎರಡೂ ಮಳಿಗೆಗಳಿಗೂ 1 ಸಾವಿರ ರೂ. ದಂಡ ವಿಧಿಸಿ, ಇಂತಹ ಬೇಜವಬ್ದಾರಿತನ ಮರುಕಳಿಸಬಾರದು ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ರಾಜಕಾರಣಿಗಳ ವಿರುದ್ಧ ಸಿ.ಡಿ ಬಾಂಬ್‌ ಸಹಜ..! ಬಿಎಸ್‌ವೈ ಪರ ಬ್ಯಾಟಿಂಗ್‌ ಮಾಡಿದ್ರಾ ತನ್ವೀರ್ ಸೇಠ್..?ಈ ಕುರಿತು ಮಾತನಾಡಿದ ವಲಯ 3ರ ಆಯುಕ್ತ ಟಿ.ಎಸ್.ಸತ್ಯಮೂರ್ತಿ, ಕಸ ಹಾಕಲೆಂದು ಪಾಲಿಕೆಯಿಂದ ನಿಗದಿತ ಸ್ಥಳ ಗುರುತಿಸಲಾಗಿದೆ. ಹಾಗಾಗಿ ಕಸ ವಿಲೇವಾರಿ ಮಾಡಲು ಪೌರ ಕಾರ್ಮಿಕ ಸಿಬ್ಬಂದಿ ಶ್ರಮವಹಿಸುತ್ತಾರೆ. ಅವರಿಗೆ ಎಲ್ಲವನ್ನು ನೀಡಿ ಸ್ವಚ್ಛವಾಗಿಡುವತ್ತ ಗಮನಹರಿಸಬೇಕು. ಹಾಗಾಗಿ, ಇನ್ಮುಂದೆ ಇಂತಹ ಘಟನೆ ನಡೆಯಬಾರದೆಂದು ಎರಡು ಮಳಿಗೆಗಳಿಗೆ ದಂಡ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ