ಆ್ಯಪ್ನಗರ

ಪ್ರಸಿದ್ಧ ಮೈಸೂರು ಜಂಬೂ ಸವಾರಿಗೆ ಕ್ಷಣಗಣನೆ..! ಅರಮನೆಗೆ ಆಗಮಿಸಿದ ನಾಡದೇವತೆ ಚಾಮುಂಡೇಶ್ವರಿ

ಕೊರೊನಾ ವೈರಸ್ ಆತಂಕದ ನಡುವಯೂ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ದಸರಾ ಸರಳವಾಗಿ ನಡೆಯುತ್ತಿದ್ದು, ವಿಶ್ವವಿಖ್ಯಾತ ಜಂಬೂ ಸವಾರಿಯ ಮೇಲೆ ಪ್ರತಿಷ್ಠಾಪಿಸುವ ನಾಡದೇವತೆ ಚಾಮುಂಡೇಶ್ವರಿ ವಿಗ್ರಹವನ್ನು ಸಾಂಪ್ರದಾಯಿಕವಾಗಿ ಅರಮನೆಗೆ ತರಲಾಯಿತು.

Vijaya Karnataka Web 26 Oct 2020, 11:49 am
ಮೈಸೂರು: ಕೊರೊನಾ ವೈರಸ್‌ ಹಿನ್ನೆಲೆ ಈ ಬಾರಿಯ ಮೈಸೂರು ದಸರಾ ಸರಳವಾಗಿ ನಡೆಯುತ್ತಿದ್ದರೂ ಸಾಂಸ್ಕೃತಿಕ ನಗರಿಯಲ್ಲಿ ಹಬ್ಬದ ವಾತಾವಾರಣ ಕಳೆಗಟ್ಟಿದೆ. ವಿಶ್ವವಿಖ್ಯಾತ ಜಂಬೂ ಸವಾರಿಯ ಮೇಲೆ ಪ್ರತಿಷ್ಠಾಪಿಸುವ ನಾಡದೇವತೆ ಚಾಮುಂಡೇಶ್ವರಿ ವಿಗ್ರಹವನ್ನು ಸಾಂಪ್ರದಾಯಿಕವಾಗಿ ಅರಮನೆಗೆ ತರಲಾಯಿತು.
Vijaya Karnataka Web mysuru dasara chamundeshwari idol comes to palace
ಪ್ರಸಿದ್ಧ ಮೈಸೂರು ಜಂಬೂ ಸವಾರಿಗೆ ಕ್ಷಣಗಣನೆ..! ಅರಮನೆಗೆ ಆಗಮಿಸಿದ ನಾಡದೇವತೆ ಚಾಮುಂಡೇಶ್ವರಿ


ಅಭಿಮನ್ಯುವಿನ ಮೇಲೆ ವಿರಾಜಮಾನಳಾಗಲಿರುವ ದೇವಿಯ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ಅರಮನೆಗೆ ಕರೆತರಲಾಯಿತು. ಈ ವೇಳೆ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಡಾ.ಶಶಿಶೇಖರ್‌ ದೀಕ್ಷಿತ್‌ ದೇವಿಗೆ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಟ್ರ್ಯಾಕ್ಟರ್‌ನಲ್ಲಿ ಉತ್ಸವ ಮೂರ್ತಿಯನ್ನು ತರಲಾಯಿತು.

ಅರಮನೆಯಲ್ಲಿ ದೇವಿ ವಿಗ್ರಹಕ್ಕೆ ವಿಶೇಷ ಪೂಜೆ ಬಳಿಕ ಚಿನ್ನದ ಅಂಬಾರಿಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಗಜಪಡೆಯ ಮೆರವಣಿಗೆ ನಡೆಸಲಾಗುತ್ತದೆ. ಈ ಬಾರಿ ಸರಳ ದಸರಾ ಹಿನ್ನೆಲೆ ಯಾವುದೇ ಆಡಂಭರಗಳಿಲ್ಲದೇ ಅರಮನೆಯಲ್ಲಿ ಹಾಗೂ ರಾಜವಂಶಸ್ಥರಿಂದ ದಸರಾ ಆಚರಿಸಲಾಗುತ್ತಿದೆ.

ಈ ಬಾರಿ ಜಂಬೂ ಸವಾರಿಗೆ ಕೇವಲ 300 ಮಂದಿಗಷ್ಟೇ ಅವಕಾಶ..! ಅರಮನೆ ಆವರಣದಲ್ಲಿ ಖಾಕಿ ಸರ್ಪಗಾವಲು..!

ಮಧ್ಯಾಹ್ನ ಮಧ್ಯಾಹ್ನ 2:59 ರಿಂದ 3:20 ರೊಳಗಿನ ಶುಭ ಮಕರ ಲಗ್ನದಲ್ಲಿ ಜಂಬೂ ಸವಾರಿ ನಡೆಯಲಿದೆ. ವಿಜಯದಶಮಿಯ ಜಂಬೂಸವಾರಿ ಮೆರವಣಿಗೆ ಅಂಬಾವಿಲಾಸ ಅರಮನೆಯೊಳಗೆ ಆರಂಭವಾಗುತ್ತಿದ್ದಂತೆ ಸುಮಾರು 5 ಕಿಲೋ‌ ಮೀಟರ್‌ವರೆಗೂ ಸಾಗಿ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಕೊನೆಯಾಗುತ್ತಿತ್ತು. ಆದರೆ ಈ ಬಾರಿ ಅದು ಕೇವಲ 450 ಮೀಟರ್‌ಗೆ ಮಾತ್ರ ಸೀಮಿತವಾಗಿದೆ. ಕೊರೊನಾ ಹಿನ್ನೆಲೆ ಭಾರೀ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಂಬೂ ಸವಾರಿಯ ಗಜಪಡೆಗೆ ಕಲಾವಿದರಿಂದ ಸಿಂಗಾರ; ನಾಡದೇವತೆಯನ್ನು ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ..!

ಮಹಿಳಾ ಸಿಬ್ಬಂದಿ ಸೇರಿ ಜಂಬೂ ಸವಾರಿಯ ಭದ್ರತೆ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಜೊತೆಗೆ ಮೈಸೂರು ಅರಮನೆಯ ಸುತ್ತ 144 ಸೆಕ್ಷನ್ ಸಹ ಜಾರಿ ಮಾಡಲಾಗಿದೆ. ಅರಮನೆಯ ಸುತ್ತಲಿನ ಕನಿಷ್ಠ 200 ಮೀಟರ್‌ ದೂರದಲ್ಲಿ ಯಾರು ನಿಲ್ಲುವಂತಿಲ್ಲ ಹಾಗೂ ಕಟ್ಟಡಗಳನ್ನ ಹತ್ತಿ ದಸರಾ ವೀಕ್ಷಿಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಡಹಬ್ಬ ಮೈಸೂರು ದಸರಾಗೆ ಭರದ ಸಿದ್ಧತೆ; ಐತಿಹಾಸಿಕ ಜಂಬೂ ಸವಾರಿಗೆ ಕೌಂಟ್‌ಡೌನ್‌ ಶುರು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ