ಆ್ಯಪ್ನಗರ

ಚಾಮುಂಡೇಶ್ವರಿ ರಥವೆಳೆದು ಹರಕೆ ತೀರಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ತಮ್ಮ ಅಧಿಕಾರಾವಧಿಯಲ್ಲಿ ನಾಡಹಬ್ಬ ಮೈಸೂರು ದಸರಾ ಸುಸೂತ್ರವಾಗಿ ನೆರವೇರಲಿ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಚಾಮುಂಡೇಶ್ವರಿ ದೇವಿಗೆ ರಥ ಎಳೆಯುವ ಹರಕೆ ಹೊತ್ತಿದ್ದರು ಎನ್ನಲಾಗಿದೆ.

Vijaya Karnataka Web 27 Oct 2020, 4:53 pm

ಹೈಲೈಟ್ಸ್‌:

  • ತಾಯಿ ಚಾಮುಂಡೇಶ್ವರಿ ಹರಕೆ ತೀರಿಸಿದ ಮೈಸೂರು ಜಿಲ್ಲಾಧಿಕಾರಿ
  • ದಸರಾ ಸುಸೂತ್ರವಾಗಿ ನಡೆಯಲಿ ಎಂದು ಹರಕೆ ಹೊತ್ತಿದ್ದ ರೋಹಿಣಿ ಸಿಂಧೂರಿ
  • ಕುಟುಂಬ ಸದಸ್ಯರ ಜೊತೆಗೆ ರಥ ಎಳೆದ ಜಿಲ್ಲಾಧಿಕಾರಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಮೈಸೂರು: ದಸರೆಯ ಎಲ್ಲಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಿದ್ದಕ್ಕಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ರಥ ಎಳೆದು ಹರಕೆಯನ್ನು ತೀರಿಸಿದ್ದಾರೆ. ಈ ವೇಳೆ ರೋಹಿಣಿ ಸಿಂಧೂರಿ ಜೊತೆಗೆ ಅವರ ತಂದೆ-ತಾಯಿ, ಪತಿ ಹಾಗೂ ಅವರ ಮಗು ಕೂಡಾ ರಥ ಎಳೆದರು.
ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿಣಿ ಸಿಂಧೂರಿ ಅವರನ್ನು ಇಲ್ಲಿಗೆ ವರ್ಗಾವಣೆ ಮಾಡಿರುವುದು ಸರ್ಕಾರದ ನೀತಿ ನಿಯಮಗಳಿಗೆ ವಿರುದ್ಧ ಎಂದು ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶರತ್ ಸಿಎಟಿ ಮೆಟ್ಟಿಲೇರಿದ್ದರು. ಈ ಕುರಿತ ವಿಚಾರಣೆಯನ್ನು ಸಿಎಟಿ ಇನ್ನೂ ನಡೆಸುತ್ತಿರುವ ಕಾರಣ ತೀರ್ಪು ನೀಡಿಲ್ಲ. ಇದರಿಂದ ರೋಹಿಣಿ ಸಿಂಧೂರಿ ಅವರ ಜಿಲ್ಲಾಧಿಕಾರಿ ಹುದ್ದೆಯ ಮುಂದುವರಿಕೆ ಬಗ್ಗೆ ಸಮರ್ಪಕವಾದ ತೀರ್ಪು ಹೊರಬಂದಿಲ್ಲ.

ಮೈಸೂರು ದಸರಾ ವೈಭವ..! ಆನೆಯ ಮೇಲೆ ಅಂಬಾರಿ.. ನೋಡಿ ಜಂಬೂ ಸವಾರಿ..!

ಈ ನಡುವೆ ತಮ್ಮ ಅಧಿಕಾರಾವಧಿಯಲ್ಲಿ ನಾಡಹಬ್ಬ ದಸರಾ ಸುಸೂತ್ರವಾಗಿ ನೆರವೇರಲಿ ಎಂದು ರೋಹಿಣಿ ಸಿಂಧೂರಿ ಅವರು ಚಾಮುಂಡೇಶ್ವರಿ ದೇವಿಗೆ ರಥ ಎಳೆಯುವ ಹರಕೆ ಹೊತ್ತಿದ್ದರು ಎನ್ನಲಾಗಿದೆ. ಅಲ್ಲದೆ ದಸರಾ ಆರಂಭವಾದ ದಿನದಿಂದ ಸೋಮವಾರದ ಜಂಬೂ ಸವಾರಿವರೆಗೆ 10 ದಿನಗಳ ಅವಧಿಯಲ್ಲಿ ಪ್ರತಿ ದಿನ ರೋಹಿಣಿ ಸಿಂಧೂರಿ ಅವರು ರಥ ಎಳೆದಿದ್ದರು.

ಸಂಸದ ಪ್ರತಾಪ್‌ ಸಿಂಹ ಹಾಗೂ ಜಿಲ್ಲಾಧಿಕಾರಿ ನಿರ್ಧಾರಗಳ ವಿರುದ್ಧ ಮೇಯರ್‌ ಆಕ್ರೋಶ..!

ವಿಜಯ ದಶಮಿ ಜಂಬೂ ಸವಾರಿ ನಡೆದ ಸೋಮವಾರ ಕೂಡ ರೋಹಿಣಿ ಸಿಂಧೂರಿ ಅವರು ಧನ್ಯತಾ ಭಾವದೊಂದಿಗೆ ಚಾಮುಂಡೇಶ್ವರಿ ದೇವಿಯ ರಥ ಎಳೆದು ಶಕ್ತಿ ದೇವತೆಯ ಹರಕೆಯನ್ನು ತೀರಿಸಿದ್ದಾರೆ ಎನ್ನಲಾಗಿದೆ.

ದಿಢೀರ್‌ ವರ್ಗಾವಣೆಯಿಂದ ಖಿನ್ನತೆ, ಮೈಸೂರು ಡಿಸಿಯಾಗಿದ್ದ ಬಿ.ಶರತ್‌ ಆರೋಗ್ಯದಲ್ಲಿ ಏರುಪೇರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ