ಆ್ಯಪ್ನಗರ

ರಿಲ್ಯಾಕ್ಸ್ ಮೂಡ್‌ನಲ್ಲಿ ಜಂಬೂ ಸವಾರಿ ಗಜಪಡೆ: ಮೈಸೂರು ಅರಮನೆ ಆವರಣದಲ್ಲಿ ವಿಶ್ರಾಂತಿ

ಅಭಿಮನ್ಯು ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತಾಗ ನನಗೂ ಆತಂಕ ಇತ್ತು. ಆದ್ರೆ, ಅಭಿಮನ್ಯು ಯಶಸ್ವಿಯಾಗಿ ಜಂಬೂ ಸವಾರಿ ನಡೆಸಿಕೊಟ್ಟಿದ್ದಾನೆ. ಇದು ಖುಷಿಯಿದೆ ಎಂದು ಆನೆಯ ಮಾವುತ ವಸಂತ ಸಂತಸ ಹಂಚಿಕೊಂಡಿದ್ದಾರೆ.

Vijaya Karnataka Web 27 Oct 2020, 6:36 pm

ಹೈಲೈಟ್ಸ್‌:

  • ಯಶಸ್ವಿಯಾಗಿ ಜಂಬೂ ಸವಾರಿ ಮುಗಿಸಿದ ಸಂಭ್ರಮ
  • ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಗಜಪಡೆ
  • ಅರಮನೆ ಆವರಣದಲ್ಲಿ ಸ್ನಾನ, ಹೊಟ್ಟೆ ತುಂಬಾ ಊಟ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಂಡ ಆನೆಗಳು ಇದೀಗ ರಿಲ್ಯಾಕ್ಸ್‌ ಮೂಡ್‌ನಲ್ಲಿವೆ. ಸೋಮವಾರ ದಸರಾ ಜಂಬೂ ಸವಾರಿ ಮೆರವಣಿಗೆ ವೇಳೆ ಪಾಲ್ಗೊಂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆ ಇದೀಗ ಅರಮನೆ ಆವರಣದಲ್ಲಿ ದಣಿವಾರಿಸಿಕೊಳ್ಳುತ್ತಿವೆ.
ಅಭಿಮನ್ಯು ಆನೆ ಇದೇ ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿರುವ ಕಾರಣ, ಯುದ್ಧ ಗೆದ್ದ ಸಂಭ್ರಮದಲ್ಲಿದ್ದಾನೆ. ಆನೆಗಳಿಗೆ ಮೀಸಲಾದ ಅರಮನೆ ಆವರಣದಲ್ಲಿ ನಿರ್ಮಿಸಿರುವ ವೃತ್ತಾಕಾರದ ಜಾಗದಲ್ಲಿ ದಸರಾ ಗಜಪಡೆಗೆ ಸ್ನಾನ ಮಾಡಿಸಲಾಯಿತು.

ಮಾವುತರು ಆನೆಗಳನ್ನು ತೊಳೆಯುತ್ತಿದ್ದರೆ, ನೀರಿನಲ್ಲಿ ಆಡವಾಡುತ್ತಾ ಆನೆಗಳು ರಿಲ್ಯಾಕ್ಸ್‌ ಆದವು. ಈ ಬಾರಿ ಸರಳ ದಸರಾ ನಡೆದ ಕಾರಣ, ಅಭಿಮನ್ಯು, ವಿಕ್ರಮ, ಗೋಪಿ, ವಿಜಯ, ಕಾವೇರಿ ಆನೆಗಳು ಮಾತ್ರ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದವು.

ಚಾಮುಂಡೇಶ್ವರಿ ರಥವೆಳೆದು ಹರಕೆ ತೀರಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಅಭಿಮನ್ಯು ಯಶಸ್ಸಿನ ಬಗ್ಗೆ ಮಾವುತ ವಸಂತ ಫುಲ್ ಖುಷ್ ಆಗಿದ್ದಾರೆ. ಪ್ರಾರಂಭದಲ್ಲಿ ಹೆದರಿಕೆ ಇತ್ತು, ಬಳಿಕ ಅಧಿಕಾರಿಗಳು ಧೈರ್ಯ ತುಂಬಿದರು ಎಂದು ಮಾವುತ ವಸಂತ ಹೇಳಿದ್ದಾರೆ. ಈ ಹಿಂದೆ ಅಭಿಮನ್ಯು ಮರದ ಅಂಬಾರಿ ಹೊತ್ತಿತ್ತು. ಆದ್ರೆ, ಚಿನ್ನದ ಅಂಬಾರಿ ಹೊತ್ತಿರಲಿಲ್ಲ. ಇದೇ ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿದ್ದಾನೆ.

ಅಭಿಮನ್ಯು ಕಾರ್ಯದ ಬಗ್ಗೆ ಖುಷಿಯಾಗಿದೆ ಎಂದು ಮಾವುತ ವಸಂತ ಹೇಳಿದ್ದು, ಈ ಹಿಂದೆ ಶ್ರೀರಂಗಪಟ್ಟಣದಲ್ಲಿ ಪುಷ್ಪಾರ್ಚನೆಯಲ್ಲಿ ಭಾಗಿಯಾದ ಅನುಭವ ಅಭಿಮನ್ಯುವಿಗೆ ಇತ್ತು ಎಂದರು. ಅಭಿಮನ್ಯು ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತಾಗ ನನಗೂ ಆತಂಕ ಇತ್ತು. ಆದ್ರೆ, ಅಭಿಮನ್ಯು ಯಶಸ್ವಿಯಾಗಿ ಜಂಬೂ ಸವಾರಿ ನಡೆಸಿಕೊಟ್ಟಿದ್ದಾನೆ. ಇದು ಖುಷಿಯಿದೆ ಎಂದು ವಸಂತ ಸಂತಸ ಹಂಚಿಕೊಂಡರು.

ಮೈಸೂರು ದಸರಾ ವೈಭವ..! ಆನೆಯ ಮೇಲೆ ಅಂಬಾರಿ.. ನೋಡಿ ಜಂಬೂ ಸವಾರಿ..!

ಮಾವುತರು, ಕಾವಾಡಿಗರಿಗೆ ಪ್ರೋತ್ಸಾಹ ಧನ ವಿತರಣೆ: ದಸರೆ ಯಶಸ್ವಿಯಾಗಿ ನಡೆಸಿಕೊಟ್ಟ ಗಜಪಡೆಯ ಮಾವುತರು ಹಾಗೂ ಕಾವಾಡಿಗರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅರಮನೆ ಆವರಣದಲ್ಲಿ ಪ್ರೋತ್ಸಾಹ ಧನ ವಿತರಣೆ ಮಾಡಿದರು. ಈ ವೇಳೆ ದಸರಾ ಆನೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಮಾವುತರಿಗೆ 10,000 ಗೌರವ ಧನ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪಾಲಿಕೆ ಸದಸ್ಯ ಮಾ.ವಿ.ರಾಂ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಸಂಸದ ಪ್ರತಾಪ್‌ ಸಿಂಹ ಹಾಗೂ ಜಿಲ್ಲಾಧಿಕಾರಿ ನಿರ್ಧಾರಗಳ ವಿರುದ್ಧ ಮೇಯರ್‌ ಆಕ್ರೋಶ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ