ಆ್ಯಪ್ನಗರ

ಕೊರೊನಾ ನಡುವೆಯೂ ಅರಮನೆಯಲ್ಲಿ ದಸರಾ ಸಂಭ್ರಮ..! ಪಟ್ಟದ ಕತ್ತಿ, ಬನ್ನಿ ಮರಕ್ಕೆ ಯದುವೀರ್ ಪೂಜೆ

ಕೊರೊನಾ ನಡುವೆಯೂ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆಯಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳು ನಡೆಯುತ್ತಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿ ಹಾಗೂ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

Vijaya Karnataka Web 26 Oct 2020, 12:12 pm
ಮೈಸೂರು: ಒಂದೆಡೆ ಸರ್ಕಾರದ ವತಿಯಿಂದ ನಡೆಯುವ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾದರೆ, ಮತ್ತೊಂದೆಡೆ ರಾಜಮನೆತನದ ವಿಜಯದಶಮಿ ಮೆರವಣಿಗೆ ಹಿನ್ನೆಲೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿಯನ್ನು ಹಿಡಿದು ಪೂಜೆ ಸಲ್ಲಿಸಿದರು.
Vijaya Karnataka Web mysuru dasara yaduveer performs special pooja at mysuru palace
ಕೊರೊನಾ ನಡುವೆಯೂ ಅರಮನೆಯಲ್ಲಿ ದಸರಾ ಸಂಭ್ರಮ..! ಪಟ್ಟದ ಕತ್ತಿ, ಬನ್ನಿ ಮರಕ್ಕೆ ಯದುವೀರ್ ಪೂಜೆ


ಕತ್ತಿಯನ್ನು ಹಿಡಿದು ಅವರು ಅರಮನೆಯಿಂದ ಭುವನೇಶ್ವರಿ ದೇಗುಲದವರೆಗೆ ಮೆರವಣಿಗೆ ಹೊರಟು ಅಲ್ಲಿರುವ ಬನ್ನಿಮರಕ್ಕೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಬನ್ನಿಮರದ ಸುತ್ತ ಪೆಂಡಾಲ್ ಹಾಕಿ, ಕೆಂಪು ಬಣ್ಣದ ರತ್ನಗಂಬಳಿ ಹಾಕಲಾಗಿತ್ತು. ಬನ್ನಿ ಮುಡಿದ ಬಳಿಕ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆ ಸಿಬ್ಬಂದಿಗೆ ಇನಾಂ ನೀಡಿದರು.

ಅರಮನೆಯಲ್ಲಿ ಬೆಳಗ್ಗಿನಿಂದಲೂ ಧಾರ್ಮಿಕ ವಿಧಿ-ವಿಧಾನಗಳು ಸಂಪನ್ನಗೊಂಡವು. ಬೆಳಗ್ಗೆ 9.30ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸು ಆನೆಬಾಗಿಲಿಗೆ ಆಗಮನದ ಬಳಿಕ, ಬೆಳಿಗ್ಗೆ 9.45ಕ್ಕೆ ಖಾಸ ಆಯುಧಗಳಿಗೆ ಉತ್ತರ ಪೂಜೆ ನೆರವೇರಿಸಿದರು. ನಂತರ ಆನೆಬಾಗಿಲಿಗೆ ಈ ಆಯುಧಗಳು ರವಾನೆಗೊಂಡ ಬಳಿಕ ಬೆಳಿಗ್ಗೆ 10.20ರಿಂದ 10.40ರ ಖಾಸ ಆಯುಧಗಳನ್ನ ಬೆಳ್ಳಿ ರಥದಲ್ಲಿ ಭುವನೇಶ್ವರಿ ದೇವಾಲಯಕ್ಕೆ ರವಾನೆ ಮಾಡಲಾಯಿತು.

ಪ್ರಸಿದ್ಧ ಮೈಸೂರು ಜಂಬೂ ಸವಾರಿಗೆ ಕ್ಷಣಗಣನೆ..! ಅರಮನೆಗೆ ಆಗಮಿಸಿದ ನಾಡದೇವತೆ ಚಾಮುಂಡೇಶ್ವರಿ

ಬಳಿಕ ಭುವನೇಶ್ವರಿ ದೇವಾಲಯದಲ್ಲಿ ಮಹಾರಾಜರಿಂದ ಬನ್ನಿಪೂಜೆ ನೆರವೇರಿಸಲಾಯಿತು.ವಿಜಯಯಾತ್ರೆ ಮುಗಿದ ತಕ್ಷಣ ಚಾಮುಂಡೇಶ್ವರಿ ಅಮ್ಮವನವರನ್ನ ಕನ್ನಡಿ ತೊಟ್ಟಿಯಿಂದ ಚಾಮುಂಡಿತೊಟ್ಟಿಗೆ ರವಾನೆ ಮಾಡುವ ಕೈಂಕರ್ಯ ಸಹ ನಡೆಯಲಿದೆ. ಈ ಬಾರಿ ಕೊರೊನಾ ಕಾರಣಕ್ಕೆ ವಜ್ರಮುಷ್ಠಿ ಕಾಳಗ ರದ್ದು ಮಾಡಲಾಗಿದೆ.

ಈ ಬಾರಿ ಜಂಬೂ ಸವಾರಿಗೆ ಕೇವಲ 300 ಮಂದಿಗಷ್ಟೇ ಅವಕಾಶ..! ಅರಮನೆ ಆವರಣದಲ್ಲಿ ಖಾಕಿ ಸರ್ಪಗಾವಲು..!

ಮಧ್ಯಾಹ್ನ ಮಧ್ಯಾಹ್ನ 2:59 ರಿಂದ 3:20 ರೊಳಗಿನ ಶುಭ ಮಕರ ಲಗ್ನದಲ್ಲಿ ಜಂಬೂ ಸವಾರಿ ನಡೆಯಲಿದೆ. ಈ ಬಾರಿ ಅದು ಕೇವಲ 450 ಮೀಟರ್‌ಗೆ ಮಾತ್ರ ಸೀಮಿತವಾಗಿದೆ. ವಿಜಯದಶಮಿಯ ಜಂಬೂಸವಾರಿ ಮೆರವಣಿಗೆ ಸುಮಾರು 5 ಕಿಲೋ‌ ಮೀಟರ್‌ವರೆಗೂ ಸಾಗುತ್ತಿತ್ತು. ಕೊರೊನಾ ಹಿನ್ನೆಲೆ ಭಾರೀ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಂಬೂ ಸವಾರಿಯ ಗಜಪಡೆಗೆ ಕಲಾವಿದರಿಂದ ಸಿಂಗಾರ; ನಾಡದೇವತೆಯನ್ನು ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ