ಆ್ಯಪ್ನಗರ

ಮೈಸೂರಿನ ಪ್ರಮುಖ ಮಾರುಕಟ್ಟೆ ಪುನಾರಂಭ

4 ದಿನಗಳ ಕಾಲ ಬಂದ್‌ ಮಾಡಲಾಗಿದ್ದ ಮೈಸೂರು ದೇವರಾಜ ಅರಸು ಮಾರುಕಟ್ಟೆ ಸೇರಿದಂತೆ ನಾಲ್ಕು ಮಾರುಕಟ್ಟೆಗಳು ಸೋಮವಾರದಿಂದ ಪುನಾರಂಭಗೊಂಡವು. ಜೂ.25ರಿಂದ 4 ದಿನಗಳ ಕಾಲ ಮುಚ್ಚಲಾಗಿತು.

Vijaya Karnataka Web 30 Jun 2020, 9:39 am
ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಜನದಟ್ಟಣೆ ಪ್ರದೇಶಗಳನ್ನು ಸ್ಯಾನಿಟೈಸ್‌ ಮಾಡುವ ಉದ್ದೇಶದಿಂದ 4 ದಿನಗಳ ಕಾಲ ಬಂದ್‌ ಮಾಡಲಾಗಿದ್ದ ನಗರದ ದೇವರಾಜ ಅರಸು ಮಾರುಕಟ್ಟೆ ಸೇರಿದಂತೆ ನಾಲ್ಕು ಮಾರುಕಟ್ಟೆಗಳು ಸೋಮವಾರದಿಂದ ಪುನಾರಂಭಗೊಂಡವು. ಜೂ.25ರಿಂದ 4 ದಿನಗಳ ಕಾಲ ಮುಚ್ಚಲಾಗಿತು.
Vijaya Karnataka Web market


ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಹಿತದೃಷ್ಟಿಯಿಂದ ಈ ನಾಲ್ಕು ದಿನವೂ ನಗರ ಪಾಲಿಕೆ ವತಿಯಿಂದ ಆ ಭಾಗದ ಸಂಪೂರ್ಣ ಪ್ರದೇಶಗಳನ್ನು ಸ್ಯಾನಿಟೈಸ್‌ ಮಾಡುವುದರ ಜತೆಗೆ ಸ್ವಚ್ಛಗೊಳಿಸಿ ವ್ಯಾಪಾರಕ್ಕೆ ಮುಕ್ತ ಮಾಡಲಾಗಿದೆ. ಇಲ್ಲಿನ ಎಲ್ಲ ವ್ಯಾಪಾರಿ ಗಳಿಗೂ ನಗರ ಪಾಲಿಕೆ ವತಿಯಿಂದ ಕೆಲ ಮಾರ್ಗಸೂಚಿಗಳನ್ನು ನೀಡಲಾಗಿದೆ.

ವ್ಯಾಪಾರ ಸ್ಥಳದಲ್ಲಿ ವ್ಯಾಪಾರಸ್ಥರು ಸೂಕ್ತ ಮಾರ್ಕಿಂಗ್‌ ಮಾಡುವ ಮೂಲಕ ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕಾಗಿ ವ್ಯವಸ್ಥೆ ಮಾಡಬೇಕು. ಕಡ್ಡಾಯವಾಗಿ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಬೇಕು. ಯಾರಿಗಾದರೂ ಜ್ವರ, ಶೀತ, ಇನ್ನಿತರ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಗ್ರಾಹಕರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ವ್ಯಾಪಾರ ಸ್ಥಳದಲ್ಲಿ ಸ್ಯಾನಿಟೈಸರ್‌ ಇಡುವ ವ್ಯವಸ್ಥೆ ಮಾಡಬೇಕು. ಸುತ್ತಮುತ್ತಲ ಪರಿಸರ ಶುಚಿಯಾಗಿಟ್ಟುಕೊಳ್ಳಬೇಕು, ಕ್ರಿಮಿನಾಶಕ ಸಿಂಪಡಿಸಬೇಕು ಎಂದು ಮಾರ್ಗಸೂಚಿ ಗಳನ್ನು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ