ಆ್ಯಪ್ನಗರ

ಮೈಸೂರು: ಮದ್ಯದ ಅಮಲಿನಲ್ಲಿ ಸ್ನೇಹಿತನ ಕೊಲೆ

ಮದ್ಯದ ಅಮಲಿನಲ್ಲಿದ್ದ ಗೆಳೆಯರು ತಮ್ಮ ಸ್ನೇಹಿತನನ್ನೇ ಇರಿದು ಕೊಲೆ ಮಾಡಿದ ಘಟನೆ ಮೈಸೂರಿನಿಂದ ವರದಿಯಾಗಿದೆ. ಪ್ರೇಯಸಿಯ ವಿಚಾರಕ್ಕೆ ಮಾತು ಬೆಳೆದು, ಕೊಲೆಯಲ್ಲಿ ಅಂತ್ಯವಾಗಿದೆ.

Vijaya Karnataka Web 5 May 2020, 12:06 pm
ಮೈಸೂರು: ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಗೆಳೆಯರು ತಮ್ಮ ಸ್ನೇಹಿತನನ್ನೇ ಇರಿದು ಕೊಲೆ ಮಾಡಿರುವ ಘಟನೆ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.
Vijaya Karnataka Web mysuru murder


ಇಲ್ಲಿನ ದಲಿತ ಕಾಲೋನಿಯ ಸತೀಶ್ (24)ಕೊಲೆಯಾದ ಯುವಕ. ನಿನ್ನೆ ಬೆಳಗ್ಗೆ ಗೆಳೆಯರ ಜೊತೆ ತೆರಳಿದ್ದ ಸತೀಶ್ ಬಿಯರ್ ಬಾಟಲಿಗಳನ್ನು ಖರೀದಿಸಿದ್ದಾರೆ.‌ ಸಂಜೆ ಊರಿನ ಹೊರವಲಯದಲ್ಲಿ ಕಂಠ ಪೂರ್ತಿ ಕುಡಿದಿದ್ದಾರೆ. ಈ ವೇಳೆ ಸತೀಶನ ಪ್ರೇಯಸಿಯ ವಿಚಾರಕ್ಕೆ ಮಾತಿನ ಚಕಮಕಿ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ನೇಹಿತನಿಗೆ ಚಾಕುವಿನಿಂದ ಗೆಳೆಯರು ಇರಿದಿದ್ದಾರೆ.

ಅಮಲು ಇಳಿದ ಮೇಲೆ ಸತೀಶ್ ಸಾಕಷ್ಟು ಬೇಡಿಕೊಂಡರು ಸ್ನೇಹಿತನನ್ನು ಸ್ಥಳದಲ್ಲೇ ಬಿಟ್ಟು ಗೆಳೆಯರು ಪರಾರಿಯಾದ್ದಾರೆ. ತೀವ್ರ ರಕ್ತಸ್ರಾವದಿಂದ ಸತೀಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಸ್ಥಳಕ್ಕೆ ಉದಯಗಿರಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ