ಮೈಸೂರು ಭಾಗದ ಹುಲಿಯಂತಿದ್ದ ಸಿದ್ದರಾಮಯ್ಯರನ್ನು ಎಚ್ಡಿಕೆ ಕಟ್ಟಿ ಹಾಕಿದ್ದಾರೆ: ಪ್ರತಾಪ್ ಸಿಂಹ
'ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಮೇಯರ್ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರು. ಅವರದ್ದೇ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸಲಿಲ್ಲ. ಕೈ ಎತ್ತದಂತೆ ಕಟ್ಟಿಹಾಕಿದವರು ಯಾರು? ಇದು ಅವರ ಅಭ್ಯರ್ಥಿಗೆ ಅವರೇ ಅಪಮಾನ ಮಾಡಿದ್ದಾರೆ' - ಪ್ರತಾಪ್ ಸಿಂಹ
Lipi 24 Feb 2021, 6:20 pm
ಹೈಲೈಟ್ಸ್:
- ಮೈಸೂರು ಭಾಗದ ಹುಲಿಯಂತೆ ಸಿದ್ದರಾಮಯ್ಯ ಅಬ್ಬರಿಸುತ್ತಿದ್ದರು
- ಆ ಹುಲಿಯನ್ನು ಕುಮಾರಸ್ವಾಮಿ ಬೋನಿಗೆ ಹಾಕಿಬಿಟ್ಟಿದ್ಧಾರೆ
- ಈಗ ಸಿದ್ದರಾಮಯ್ಯ ಬೋನಿನಲ್ಲಿ ಇರುವ ಹುಲಿ
ಮೈಸೂರು: ಮೈಸೂರು ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ಕೊನೆ ಕ್ಷಣದ ಬದಲಾವಣೆ ಕುರಿತಾದ ಕೈ ಪಾಳಯದ ನಿಲುವಿಗೆ ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಳಿಕ ಮಾತನಾಡಿದ ಅವರು, ನಮಗೆಲ್ಲಾ ತಿಳಿದ ಹಾಗೆ ಸಿದ್ದರಾಮಯ್ಯ ಅವರು ಮೈಸೂರು ಭಾಗದ ಹುಲಿಯಂತೆ ಅಬ್ಬರಿಸುತ್ತಿದ್ದರು. ಆ ಹುಲಿಯನ್ನು ಕುಮಾರಸ್ವಾಮಿ ಅವರು ಬೋನಿಗೆ ಹಾಕಿ ಬಿಟ್ಟಿದ್ದಾರೆ. ಈಗ ಸಿದ್ದರಾಮಯ್ಯ ಬೋನಿನಲ್ಲಿರುವ ಹುಲಿಯಂತಾಗಿದ್ದಾರೆ ಎಂದು ಲೇವಡಿ ಮಾಡಿದರು.
ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಮೇಯರ್ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರು. ಅವರದ್ದೇ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸಲಿಲ್ಲ. ಕೈ ಎತ್ತದಂತೆ ಕಟ್ಟಿಹಾಕಿದವರು ಯಾರು? ಇದು ಅವರ ಅಭ್ಯರ್ಥಿಗೆ ಅವರೇ ಅಪಮಾನ ಮಾಡಿದ್ದಾರೆ ಎಂದರು.
ಬಿಜೆಪಿಯಿಂದ ಎಲ್ಲಾ ತರದಲ್ಲೂ ಪ್ರಯತ್ನಪಟ್ಟೆವು. ಆದರೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಿಯೂ ಸೋತಿದ್ದೇವೆ. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ಏನು ಎಂಬುದು ಎಲ್ಲರಿಗೂ ಈಗ ವಾಸ್ಥವ ತಿಳಿದುಬಂದಿದೆ. ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆಂಬುದು ಗೊತ್ತಾಗಿದೆ ಎಂದರು.
ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಮೇಯರ್ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರು. ಅವರದ್ದೇ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸಲಿಲ್ಲ. ಕೈ ಎತ್ತದಂತೆ ಕಟ್ಟಿಹಾಕಿದವರು ಯಾರು? ಇದು ಅವರ ಅಭ್ಯರ್ಥಿಗೆ ಅವರೇ ಅಪಮಾನ ಮಾಡಿದ್ದಾರೆ ಎಂದರು.
ಬಿಜೆಪಿಯಿಂದ ಎಲ್ಲಾ ತರದಲ್ಲೂ ಪ್ರಯತ್ನಪಟ್ಟೆವು. ಆದರೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಿಯೂ ಸೋತಿದ್ದೇವೆ. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ಏನು ಎಂಬುದು ಎಲ್ಲರಿಗೂ ಈಗ ವಾಸ್ಥವ ತಿಳಿದುಬಂದಿದೆ. ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆಂಬುದು ಗೊತ್ತಾಗಿದೆ ಎಂದರು.