ಆ್ಯಪ್ನಗರ

ಸುಪ್ರೀಂ ಮೊರೆಗೆ ಮುಕ್ತ ವಿವಿ ವಿದ್ಯಾರ್ಥಿಗಳ ಸಿದ್ಧತೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯಕ್ಕೆ ಯುಜಿಸಿಯಿಂದ ಇನ್ನೂ ಮಾನ್ಯತೆ ಸಿಗದ ಕಾರಣ ಕಂಗೆಟ್ಟಿರುವ ಮುಕ್ತ ವಿವಿಯ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

Vijaya Karnataka 10 Jun 2018, 5:00 am
Vijaya Karnataka Web mysuru open university ugc accredited students prepared
ಸುಪ್ರೀಂ ಮೊರೆಗೆ ಮುಕ್ತ ವಿವಿ ವಿದ್ಯಾರ್ಥಿಗಳ ಸಿದ್ಧತೆ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯಕ್ಕೆ ಯುಜಿಸಿಯಿಂದ ಇನ್ನೂ ಮಾನ್ಯತೆ ಸಿಗದ ಕಾರಣ ಕಂಗೆಟ್ಟಿರುವ ಮುಕ್ತ ವಿವಿಯ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕೋರ್ಸ್‌ಗಳಿಗೆ 2013-14ನೇ ಸಾಲಿನಿಂದ ಯುಜಿಸಿಯಿಂದ ಮಾನ್ಯತೆ ನವೀಕರಣ ಸಂಬಂಧ ಬಿಕ್ಕಟ್ಟು ಎದುರಾಗಿದೆ. ಇದುವರೆಗೆ ಮುಕ್ತ ವಿಶ್ವವಿದ್ಯಾಲಯದ ಅಧಿಕಾರಿಗಳು ಯುಜಿಸಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ, ಈವರೆಗೆ ಮಾನ್ಯತೆ ಸಿಗದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಇದರ ಜೊತೆಗೆ ಮುಕ್ತ ವಿವಿಯ ವಿದ್ಯಾರ್ಥಿಗಳು ಮಾನ್ಯತೆ ಪಡೆಯುವ ಸಂಬಂಧ ಟ್ವೀಟ್‌, ಪ್ರತಿಭಟನೆ ಮೂಲಕ ಕೇಂದ್ರ, ರಾಜ್ಯ ಸರಕಾರದ ಮೇಲೆ ಒತ್ತಡ ತರುವ ಯತ್ನ ಮಾಡಿದರೂ ಯಾವುದೂ ಇದುವರೆಗೆ ಫಲ ನೀಡಿಲ್ಲ. ಇದರಿಂದ ಹತಾಶರಾಗಿರುವ ವಿದ್ಯಾರ್ಥಿಗಳು ಕೊನೆಯ ಅಸ್ತ್ರ ಎನ್ನುವಂತೆ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ.

''2013ರಿಂದ ಯುಜಿಸಿ ಮಾನ್ಯತೆ ಸಿಗದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕರ್ನಾಟಕ ಸರಕಾರ ತಾಂತ್ರಿಕೇತರ ಕೋರ್ಸ್‌ಗಳಿಗೆ ಶೈಕ್ಷಣಿಕ ವ್ಯಾಸಂಗ, ನೇಮಕ, ಮುಂಬಡ್ತಿಗೆ ಪರಿಗಣಿಸಲು ಆದೇಶಿಸಿದೆ. ಆದರೆ ಯುಜಿಸಿಯಿಂದ ಮಾನ್ಯತೆ ಸಿಕ್ಕರೆ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದ ಹುದ್ದೆಗಳಲ್ಲಿ ನೇಮಕಕ್ಕೆ ಅವಕಾಶ ಲಭಿಸಲಿದೆ'' ಎಂದು ವಿದ್ಯಾರ್ಥಿಗಳು ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಮುಕ್ತ ವಿವಿಯ ವಿದ್ಯಾರ್ಥಿಗಳು ಜೂ.15ರೊಳಗೆ ತಮ್ಮ ವಿವರಗಳನ್ನು ಈ-ಮೇಲ್‌ಗೆ ಹಂಚಿಕೊಳ್ಳುವಂತೆ ಸೂಚಿಸಲಾಗಿದೆ. ಈ ಮೂಲಕ ಟ್ವೀಟರ್‌ನಲ್ಲಿ ಮುಕ್ತ ವಿವಿಯ ವಿದ್ಯಾರ್ಥಿಗಳ ವಿವರ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಸರಕಾರ ಈ ವರ್ಷದ ಮಾರ್ಚ್‌ನಲ್ಲಿ 2013-14, 2014-15ನೇ ಶೈಕ್ಷಣಿಕ ಪ್ರವೇಶ ಪಡೆದು ಸ್ನಾತಕ/ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ತೇರ್ಗಡೆಯಾದವರಿಗೆ ಮುಂದಿನ ಶೈಕ್ಷಣಿಕ ವ್ಯಾಸಂಗ, ನೇಮಕ, ಮುಂಬಡ್ತಿಗೆ ಪರಿಗಣಿಸಲು ಆದೇಶಿಸಿತ್ತು. ಆದರೆ, ಈ ಆದೇಶದಿಂದ ರಾಜ್ಯದ ತಾಂತ್ರಿಕ ವಿದ್ಯಾರ್ಥಿಗಳನ್ನು ಹೊರಗಿಡಲಾಗಿತ್ತು. ಯುಜಿಸಿ ಮಾನ್ಯತೆಗೆ ಸಾಕಷ್ಟು ಕಸರತ್ತು ಮಾಡಿರುವ ಮುಕ್ತ ವಿವಿಯ ವಿದ್ಯಾರ್ಥಿಗಳು ಕೊನೆಯ ಅಸ್ತ್ರವೆಂಬಂತೆ ಸುಪ್ರಿಂ ಕೋರ್ಟ್‌ನ ಮೆಟ್ಟಿಲೇರಲು ತಯಾರಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ