ಆ್ಯಪ್ನಗರ

ರಂಗಾಯಣದ ಮಹತ್ವಾಕಾಂಕ್ಷೆ: ಕಾರಂತರ ಜನ್ಮ ದಿನವಿನ್ನು ಭಾರತೀಯ ರಂಗ ಸಂಗೀತ ದಿನ

ಸೆಪ್ಟೆಂಬರ್ 19ರಂದು ರಂಗತಜ್ಞ ಪದ್ಮಶ್ರೀ ಬಿ.ವಿ.ಕಾರಂತರ ಜನ್ಮ ದಿನ. ಈ ದಿನವನ್ನು ಮೈಸೂರಿನ ರಂಗಾಯಣದಲ್ಲಿ ಭಾರತೀಯ ರಂಗ ಸಂಗೀತದ ದಿನ ಎಂದು ಆಚರಿಸಲಾಗುತ್ತಿದ್ದು, ರಂಗಾಯಣದ ಮಹತ್ವಾಕಾಂಕ್ಷೆಯಾಗಿದೆ.

Vijaya Karnataka Web 17 Sep 2020, 12:31 pm
ಮೈಸೂರು: ರಂಗ ಸಂಗೀತಕ್ಕೆ ಹೊಸ ಭಾಷ್ಯ ಬರೆದ ರಂಗಭೀಷ್ಮ ಬಿ.ವಿ.ಕಾರಂತರ ಜನ್ಮ ದಿನವನ್ನು ಮೈಸೂರಿನ ರಂಗಾಯಣದಲ್ಲಿ ಭಾರತೀಯ ರಂಗ ಸಂಗೀತ ದಿನ ಎಂದು ಆಚರಿಸುತ್ತಿದೆ.
Vijaya Karnataka Web bv karanatah


ಜವಾಹರಲಾಲ್‌ ನೆಹರು ಜನ್ಮ ದಿನವನ್ನು ಮಕ್ಕಳ ದಿನ, ಡಾ.ಎಸ್‌.ರಾಧಾಕೃಷ್ಣರ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸುವ ರೀತಿಯಲ್ಲಿ ರಂಗತಜ್ಞ ಪದ್ಮಶ್ರೀ ಬಿ.ವಿ.ಕಾರಂತರು ಜನಿಸಿದ ದಿನವನ್ನು ಭಾರತೀಯ ರಂಗಸಂಗೀತದ ದಿನವೆಂದು ದೇಶದಾದ್ಯಂತ ಆಚರಿಸಬೇಕೆಂಬುದು ರಂಗಾಯಣದ ಮಹತ್ವಾಕಾಂಕ್ಷೆಯಾಗಿದೆ. ಇದಕ್ಕಾಗಿ ಕಾರಂತರು ಜನಿಸಿದ ಸೆ.19ರಂದು ಸಂಜೆ 4ಕ್ಕೆ ರಂಗಾಯಣ ಆವರಣದಲ್ಲಿ ನಡೆಯುವ ಕಾರ‍್ಯಕ್ರಮದಲ್ಲಿ ಗುಬ್ಬಿ ಕಂಪನಿಯ ಖ್ಯಾತ ಸಂಗೀತ ನಿರ್ದೇಶಕ ಪರಮಶಿವನ್‌ ಈ ದಿನವನ್ನು ಭಾರತೀಯ ರಂಗಸಂಗೀತ ದಿನ ಎಂದು ಘೋಷಿಸಲಿದ್ದಾರೆ. ಇದೇ ದಿನ ರಂಗ ಗೀತೆ ಗಾಯನ ಹಮ್ಮಿಕೊಳ್ಳಲಾಗಿದೆ. ಇದು ರಂಗಾಯಣದ ಫೇಸ್‌ಬುಕ್‌ ಪೇಜ್‌ನಲ್ಲಿಲೈವ್‌ ಪ್ರಸಾರವಾಗಲಿದೆ.

ಆನ್‌ಲೈನ್‌ನಲ್ಲಿರಂಗ ಸಂಗೀತ:
19ರಿಂದ ನಾಲ್ಕು ದಿನಗಳ ಕಾಲ ಆನ್‌ಲೈನ್‌ನಲ್ಲಿಬಿ.ವಿ.ಕಾರಂತರು ರಚಿಸಿರುವ ರಂಗಗೀತೆಗಳ ಗಾಯನ ನಡೆಯಲಿದೆ. ಕುಸುಮಬಾಲೆ ಮತ್ತು ಕಿಂದರಿಜೋಗಿ ಕಾರ‍್ಯಕ್ರಮದಂತೆ ಆನ್‌ಲೈನ್‌ ರಂಗಗೀತೆ ಗಾಯನ ಏರ್ಪಡಿಸಲಾಗಿದೆ. ಈಗಾಗಲೇ ರಂಗಾಯಣ ಕಲಾವಿದರಿಂದ ರಂಗಗೀತೆಗಳನ್ನು ಹಾಡಿಸಿ ಚಿತ್ರೀಕರಿಸಿರುವುದನ್ನು ನಾಲ್ಕು ದಿನ ಸಂಜೆ 6.30ಕ್ಕೆ ರಂಗಾಯಣ ವೆಬ್‌ಸೈಟ್‌ನಲ್ಲಿಪ್ರಸಾರ ಮಾಡಲಾಗುತ್ತದೆ. 20 ನಿಮಿಷ ಕಾರಂತರು ನಾಟಕಗಳಿಗೆ ನಿರ್ದೇಶಿಸಿದ ಹಾಡುಗಳನ್ನು 40-50 ಹಾಡುಗಳನ್ನು ನಿತ್ಯ ಆಲಿಸಬಹುದಾಗಿದೆ.

ಸೆ.19ಅನ್ನು ಭಾರತೀಯ ರಂಗಸಂಗೀತ ದಿನ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿಗೆ ಭೇಟಿಯಾಗಿ ಮನವಿ ಸಲ್ಲಿಸುವೆ. ಅಲ್ಲದೆ ಕೇಂದ್ರ ಸರಕಾರ ಸಾಂಸ್ಕೃತಿಕ ಸಚಿವಾಲಯಕ್ಕೂ ಪತ್ರ ಬರೆದು ಒತ್ತಾಯಿಸಲಾಗುವುದು.
-ಅಡ್ಡಂಡ ಕಾರ್ಯಪ್ಪ, ನಿರ್ದೇಶಕ, ರಂಗಾಯಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ