ಆ್ಯಪ್ನಗರ

ನಷ್ಟದಲ್ಲಿ ಇಲಾಖೆ, ಮೈಸೂರು ಕೆಎಸ್‌ಆರ್‌ಟಿಸಿ ವಿಭಾಗ ವಿಲೀನಕ್ಕೆ ಚಿಂತನೆ

ನಷ್ಟದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗವನ್ನು ವಿಲೀನಗೊಳಿಸಲು ಚಿಂತನೆ ನಡೆದಿದೆ. ಇಲಾಖೆಯು 2011ರಿಂದಲೂ ನಷ್ಟದ ಹಾದಿಯಲ್ಲಿಯಲ್ಲಿದೆ.

Vijaya Karnataka Web 13 Oct 2020, 11:24 am
ಮೈಸೂರು: ಕೋವಿಡ್‌ನಿಂದಾಗಿ ನಷ್ಟದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗವನ್ನು ವಿಲೀನಗೊಳಿಸಲು ಚಿಂತಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಹಾಗೂ ಶಾಸಕ ಚಂದ್ರಪ್ಪ ತಿಳಿಸಿದರು.
Vijaya Karnataka Web KSRTC


ಮೈಸೂರು ನಗರದಲ್ಲಿ ಸೋಮವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರರಿಗೆ ಈ ವಿಷಯ ತಿಳಿಸಿದರು. ''ಕೆಎಸ್‌ಆರ್‌ಟಿಸಿಯ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗವು ಕಳೆದ 2011ರಿಂದಲೂ ನಷ್ಟದ ಹಾದಿಯಲ್ಲಿದ್ದು, ಪ್ರತಿ ವರ್ಷ 10ರಿಂದ 20 ಕೋಟಿ ರೂ. ವರೆಗೂ ನಷ್ಟವಾಗುತ್ತಿದೆ. ಅಲ್ಲದೇ ಕೋವಿಡ್‌ನಿಂದಾಗಿ ಈ ವರ್ಷ 70 ಕೋಟಿ ನಷ್ಟವುಂಟಾಗಿದೆ. ಶೇ. 35ರಿಂದ 40ರಷ್ಟು ಕೂಡ ಆದಾಯ ಬರುತ್ತಿಲ್ಲ. ಬರುತ್ತಿರುವ ಹಣ ಡಿಸೇಲ್‌ ವೆಚ್ಚಕ್ಕೂ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣ ತಗ್ಗಿಸಲು ಎರಡು ವಿಭಾಗವನ್ನು ವಿಲೀನಗೊಳಿಸಲಾಗು ವುದು,'' ಎಂದರು.

''ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದ ವಿಲೀನದಿಂದ ಸಿಬ್ಬಂದಿ ಕೊರತೆಯ ಸಮಸ್ಯೆಯೂ ನೀಗಲಿದ್ದು, ಅನಗತ್ಯ ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಈ ಸಂಬಂಧ ನವೆಂಬರ್‌ ಬಳಿಕ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಸಾಧಕ-ಬಾಧಕದ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗು ವುದು,'' ಎಂದು ತಿಳಿಸಿದರು.

ಅಂತಾರಾಜ್ಯ ಸಾರಿಗೆ ಸೇವೆ ಆರಂಭಿಸಿದ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

ನೆರೆ ರಾಜ್ಯಕ್ಕೆ ಬಸ್‌ ಸಂಚಾರ
: ''ಕೋವಿಡ್‌ನಿಂದಾಗಿ ಸದ್ಯಕ್ಕೆ ನೆರೆ ರಾಜ್ಯಗಳಿಗೆ ಸಂಚಾರ ನಡೆಸುತ್ತಿಲ್ಲ. ಅಲ್ಲದೇ ಬಸ್‌ ಸಂಚಾರ ಬೇಕೆಂದು ಪ್ರಯಾಣಿಕರಿಂದಲೂ ಯಾವುದೇ ಬೇಡಿಕೆ ಬಾರದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಬೇರೆ ರಾಜ್ಯದ ಬಸ್‌ಗಳು ಕೂಡ ಬರುತ್ತಿಲ್ಲ,'' ಎಂದರು.

ರಾಮನಗರದಲ್ಲಿ ಚೇತರಿಕೆ ಕಾಣದ ಕೆಎಸ್‌ಆರ್‌ಟಿಸಿ: ಸರಾಸರಿ 50 ಲಕ್ಷದಿಂದ 30 ಲಕ್ಷಕ್ಕೆ ಕುಸಿದ ಆದಾಯ!

1600 ಕೋಟಿ ರೂ. ನಷ್ಟ: ''ಲಾಭವಿಲ್ಲದೇ ಜನ ಸಾಮಾನ್ಯರಿಗೆ ಸೇವೆಯನ್ನು ನೀಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಕಾರ್ಯ ನಿರ್ವಹಿಸುತ್ತಿದ್ದು, 1.26 ಲಕ್ಷ ನೌಕರರಿದ್ದಾರೆ. ಅವರ ತಿಂಗಳ ವೇತನಕ್ಕೆ 160 ಕೋಟಿ ರೂ. ಅಗತ್ಯವಿದೆ. ಈ ಬಾರಿ ನಿಗಮಕ್ಕೆ 1600 ಕೋಟಿ ರೂ. ನಷ್ಟವುಂಟಾಗಿದ್ದು, ಸರಕಾರ 1380 ಕೋಟಿ ರೂ. ಅನುದಾನ ನೀಡುವ ಮೂಲಕ ನಿಗಮಕ್ಕೆ ನೆರವು ನೀಡಿದೆ. ಇದರೊಂದಿಗೆ ಸತತ ಡಿಸೇಲ್‌ ಬೆಲೆ ಏರಿಕೆಯ ನಡುವೆಯೂ ಪ್ರಯಾಣಿಕರ ಹಿತದೃಷ್ಟಿ ಯಿಂದ ಟಿಕೆಟ್‌ ದರವನ್ನು ಹೆಚ್ಚಳ ಮಾಡಿಲ್ಲ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಪ್ರದೇಶಗಳಿಗೂ ನಿರಂತರವಾಗಿ ಬಸ್‌ ವ್ಯವಸ್ಥೆ ಮಾಡುವ ಮೂಲಕ ಜನರ ಹಿತ ಕಾಯುತ್ತಿದೆ,'' ಎಂದು ಹೇಳಿದರು.

ಸರಕಾರಗಳ ವಿರುದ್ಧ ರೈತರ ಆಕ್ರೋಶ: ಕೃಷಿ ಮಸೂದೆಗಳಿಗೆ ಬೆಂಗಳೂರಲ್ಲಿ ಭಾರೀ ವಿರೋಧ

50 ಬಸ್‌ಗಳು ಸೇರ್ಪಡೆ: ಕೆಎಸ್‌ಆರ್‌ಟಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಕ್ಕೆ ಕೇಂದ್ರ ಸರಕಾರದ ಯೋಜನೆ ಯಡಿ 50 ಬಸ್‌ಗಳು ಉಚಿತವಾಗಿ ಸೇರ್ಪಡೆಯಾಗಲಿವೆ ಎಂದರು.

ಸಕಲೇಶಪುರ ಸಮೀಪ ಬಸ್‌, ಗ್ಯಾಸ್‌ ಟ್ಯಾಂಕರ್‌ ಡಿಕ್ಕಿ: ಅಪಾಯದಿಂದ ಪ್ರಯಾಣಿಕರು ಪಾರು

ಬಸ್‌ ರೂಟ್‌ನಲ್ಲಿ ಖಾಸಗಿ ವಾಹನ ಸಂಚಾರ: ಕೆಎಸ್‌ಆರ್‌ಟಿಸಿ ಬಸ್‌ಗಳ ರೂಟ್‌ಗಳಲ್ಲಿ ಖಾಸಗಿ ಬಸ್‌ಗಳು ಮತ್ತು ವಾಹನಗಳ ಸಂಚಾರದಿಂದ ನಿಗಮಕ್ಕೆ ನಷ್ಟವುಂಟಾಗು ತ್ತಿದ್ದು, ಈ ಹಿನ್ನೆಲೆಯಲ್ಲಿಅನುಮತಿ ಪಡೆಯದೇ ಸಂಚಾರ ನಡೆಸುವ ಖಾಸಗಿ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸುವಂತೆ ಪೊಲೀಸ್‌ ಇಲಾಖೆ ಮತ್ತು ಆರ್‌ಟಿಒ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದು ಹೇಳಿದರು.ನಗರ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಗ್ರಾಮಾಂತರ ವಿಭಾಗದ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ಮತ್ತು ಅಧಿಕಾರಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ