ಆ್ಯಪ್ನಗರ

ಮೈಸೂರು: ನೆರೆ ಮನೆಯಾತನೇ ದರೋಡೆಕೋರ! ಖಾಕಿ ಕೇಸ್ ಭೇದಿಸಿದ್ದು ಹೇಗೆ?

ವೃದ್ಧ ದಂಪತಿಯನ್ನು ಬೆದರಿಸಿ, 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದಾತ ನೆರೆಮನೆಯವನೆಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಸ್ನೇಹಿತರ ಜತೆ ಸೇರಿ ದರೋಡೆ ಮಾಡಿದ್ದ.

Vijaya Karnataka Web 22 Sep 2020, 4:22 pm
ಹರೀಶ ಎಲ್‌. ತಲಕಾಡು
Vijaya Karnataka Web mysuru


ಮೈಸೂರು: ನಗರದ ವಿವೇಕಾನಂದ ನಗರದಲ್ಲಿರುವ ಮನೆಗೆ ಆಗಸ್ಟ್‌ 29 ಬೆಳಗಿನ ಜಾವ ನುಗ್ಗಿದ ಇಬ್ಬರು ಖದೀಮರು, ವೃದ್ಧ ದಂಪತಿಯನ್ನು ಬೆದರಿಸಿ, 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು. ದರೋಡೆಗೆ ಸಂಚು ರೂಪಿಸಿದ್ದು, ನೆರೆ ಮನೆಯಾತನೇ ಎಂಬ ಅಂಶ ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ವೀರಭದ್ರಯ್ಯ ಅವರ ಮನೆಯ ನೆರೆ ಮನೆಯ 52 ವರ್ಷದ ಗಿರೀಶ್‌ ದರೋಡೆಗೆ ಸಂಚು ರೂಪಿಸಿದ್ದ. ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಈತನ ಸಂಚನ್ನು ಕಾರ್ಯಗತಗೊಳಿಸಿದ ನಾಲ್ವರು ಕೂಡ ಜೈಲು ಪಾಲಾಗಿದ್ದಾರೆ. ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ ಗಿರೀಶ್‌ಗೆ ಲಾಕ್‌ಡೌನ್‌ ಎಫೆಕ್ಟ್ ನಿಂದ ವ್ಯವಹಾರ ಸ್ಥಗಿತಗೊಂಡು ಜೀವನ ನಿರ್ವಹಣೆ ಕಷ್ಟವಾಗಿತ್ತು. ಈ ಬಗ್ಗೆ ಸ್ನೇಹಿತ ಸಾತಗಳ್ಳಿ ನಿವಾಸಿ, ಆಟೋ ರಿಕ್ಷಾ ಚಾಲಕ ಜಬೀವುಲ್ಲಾ ಷರೀಫ್‌ನೊಂದಿಗೆ ಚರ್ಚಿಸಿದ ಗಿರೀಶ್‌, ವಯಸ್ಸಾದವರು ಒಂಟಿಯಾಗಿರುವ ಮನೆಗಳಿಗೆ ನುಗ್ಗಿ ದರೋಡೆ ನಡೆಸಿದರೆ ಹೇಗೆ ಎಂಬ ಆಲೋಚನೆ ಹಂಚಿಕೊಂಡ. ಕಾರ್ಯ ಪ್ರವೃತ್ತನಾದ ಜಬೀವುಲ್ಲಾ, ತನ್ನ ಸ್ನೇಹಿತರಾದ ಉದಯಗಿರಿಯ ಬಟ್ಟೆ ವ್ಯಾಪಾರಿ ಇಬ್ರಾಹಿಂ ಅಹಮ್ಮದ್‌(24)ನೊಂದಿಗೆ ದರೋಡೆ ಪ್ಲಾನ್‌ ಹಂಚಿಕೊಂಡು ಟೀಂ ಸಿದ್ಧಪಡಿಸಲು ಸೂಚಿಸಿದ. ಇಬ್ರಾಹಿಂ ತನ್ನೊಂದಿಗೆ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಖಾಸಿಫ್‌(22) ನನ್ನು ಸೇರಿಸಿಕೊಂಡ. ಈ ನಾಲ್ವರೊಂದಿಗೆ ಹಳೆಯ ಅಪರಾಧಿ ಗಿರಿಯಾಭೋವಿ ಪಾಳ್ಯದ ಗವಿಗೌಡ ಸೇರಿಕೊಂಡಿದ್ದಾನೆ.

ವೃದ್ಧ ದಂಪತಿ ಮೇಲೆ ನಿಗಾ: ವೀರಭದ್ರಯ್ಯ ಮತ್ತು ಅವರ ಪತ್ನಿಯ ದೈನಂದಿನ ಚಟುಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದ ನೆರೆ ಮನೆಯ ಗಿರೀಶ್‌, ದರೋಡೆ ನಡೆಸಲು ಪ್ಲಾನ್‌ ರೂಪಿಸಿದ್ದಾನೆ. ಬೆಳಗ್ಗೆ 6 ಗಂಟೆಯ ಹೊತ್ತಿಗೆ ದಾಳಿ ನಡೆಸುವಂತೆ ಮಾಹಿತಿ ನೀಡಿದ್ದಾನೆ. ತಕ್ಷಣ ಕಾರ್ಯ ಪ್ರವೃತ್ತರಾದ ಜಬೀವುಲ್ಲಾ, ಇಬ್ರಾಹಿಂ ಮತ್ತು ಖಾಸಿಫ್‌ ಆಟೋ ರಿಕ್ಷಾದಲ್ಲಿ ವಿವೇಕಾನಂದ ಸರ್ಕಲ್‌ ಬಳಿ ಬಂದಿಳಿದ್ದಾರೆ. ನಂತರ ಜಬೀವುಲ್ಲಾಮತ್ತು ಇಬ್ರಾಹಿಂ, ವೀರಭದ್ರಯ್ಯ ಅವರ ಮನೆಯ ಕಾಂಪೌಂಡ್‌ ಹಾರಿ ಹಿಂಬಾಗಿಲಿನ ಮೂಲಕ ಮನೆಯೊಳಗೆ ನುಗ್ಗಿದ್ದಾರೆ.

ಮೈಸೂರಿನಲ್ಲಿ ತಡರಾತ್ರಿ ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ

ವೃದ್ಧ ದಂಪತಿಯನ್ನು ಹೆದರಿಸಿ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು. ವೀರಭದ್ರಯ್ಯ, ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಕುವೆಂಪು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ಮಧ್ಯೆ ಗಿರೀಶ್‌ ಮನೆಯಲ್ಲಿಯೇ ಇದ್ದುಕೊಂಡು ಯಾರಿಗೂ ಅನುಮಾನ ಬರದಂತೆ ನಡೆದುಕೊಂಡಿದ್ದಲ್ಲದೇ ಪೊಲೀಸರ ತನಿಖಾ ಕಾರ್ಯದ ಮೇಲೂ ನಿಗಾ ವಹಿಸಿದ್ದ.

ಮೈಸೂರು ವಿವಿ ಮಾಹಿತಿಗೆ ಕ್ಯಾಂಪಸ್‌ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್‌ ಅಳವಡಿಕೆ

ಕದ್ದ ಚಿನ್ನಾಭರಣಗಳನ್ನು ಗಿರೀಶ್‌ ಸೇರಿದಂತೆ ಐವರು ಹಂಚಿಕೊಂಡಿದ್ದರು. ಚಿನ್ನಾಭರಣ ಮಾರಿದ ಹಣದಿಂದ ಜಬೀವುಲ್ಲಾ, ಮನೆಗೆ ಬೇಕಾದ ಟಿವಿ, ಫ್ರಿಡ್ಜ್‌, ಸೋಫಾ, ಮಂಚ, ವಾಷಿಂಗ್‌ ಮಷಿನ್‌ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ. ಸೆ. 17ರಂದು ಜಬೀವುಲ್ಲಾ ತನ್ನ ಬಳಿ ಇದ್ದ ಚಿನ್ನದ ಮಾಂಗಲ್ಯ ಸರವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದ. ಅನುಮಾನಗೊಂಡ ದೇವರಾಜ ಠಾಣೆ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ನೇಹಿತರೊಂದಿಗೆ ಸೇರಿ ವೀರಭದ್ರಯ್ಯ ಅವರ ಮನೆಯಲ್ಲಿ ದರೋಡೆ ಮಾಡಿರುವುದನ್ನು ಒಪ್ಪಿಕೊಂಡ.

ಮೈಸೂರಿನಲ್ಲಿ ವ್ಯಕ್ತಿಯ ಚೇಸಿಂಗ್ ವೇಳೆ ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಪೊಲೀಸರ ‘ಗರುಡ’ ವಾಹನ

ಹಣಕ್ಕಾಗಿ ದರೋಡೆಗೆ ಸಂಚು ರೂಪಿಸಿದ ಗಿರೀಶ್‌ ಸೇರಿದಂತೆ ಐವರನ್ನು ಬಂಧಿಸಿರುವ ದೇವರಾಜ ಠಾಣೆ ಪೊಲೀಸರು, ಬಂಧಿತರಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಡಾ.ಎ.ಎನ್‌. ಪ್ರಕಾಶ್‌ ಗೌಡ ಮಾಹಿತಿ ನೀಡಿದರು.

ದರೋಡೆ ಪ್ರಕರಣದಲ್ಲಿ ಬಂಧಿತ ಐವರು ನಾನಾ ವೃತ್ತಿ ನಡೆಸುತ್ತಿದ್ದು, ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿದ್ದರು. ಯಾವುದಾದರೂ ಮೂಲದಿಂದ ಹಣ ಮಾಡಬೇಕೆಂದು ದುರಾಲೋಚನೆಯಿಂದ ದರೋಡೆಗೆ ನಡೆಸಿ, ಕದ್ದ ಮಾಲನ್ನು ಮಾರಾಟ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದಾರೆ.
- ಡಾ.ಎ.ಎನ್‌. ಪ್ರಕಾಶ್‌ ಗೌಡ, ಡಿಸಿಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ