ಆ್ಯಪ್ನಗರ

ನಾಗರಹೊಳೆ-ಕುಟ್ಟ ರಸ್ತೆ ಸಂಚಾರಕ್ಕೆ ಮುಕ್ತ

ನಾಗರಹೊಳೆ ಉದ್ಯಾನದೊಳಗಿನ ಕಲ್ಲಹಳ್ಳ ಕೆರೆಯ ಔಟ್‌ಲೆಟ್‌ ಒಡೆದು ಹಾನಿಯಾಗಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗಿದ್ದು, ಇದೀಗ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

Vijaya Karnataka 22 Sep 2019, 5:00 am
ಹುಣಸೂರು : ನಾಗರಹೊಳೆ ಉದ್ಯಾನದೊಳಗಿನ ಕಲ್ಲಹಳ್ಳ ಕೆರೆಯ ಔಟ್‌ಲೆಟ್‌ ಒಡೆದು ಹಾನಿಯಾಗಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗಿದ್ದು, ಇದೀಗ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
Vijaya Karnataka Web MYS21HUN4_45


ಕಳೆದ ಆಗಸ್ಟ್‌ ಮಾಹೆಯಲ್ಲಿನಾಗರಹೊಳೆ ಉದ್ಯಾನದಲ್ಲಿಬಿದ್ದ ಮಹಾ ಮಳೆಗೆ ರಸ್ತೆ ಬದಿಯ ಕಲ್ಲಹಳ್ಳ ಕೆರೆ ನೀರು ಭಾರೀ ಪ್ರಮಾಣದಲ್ಲಿಹರಿದು ಕುಟ್ಟ ಹಾಗೂ ಕೊಡಗಿನ ಭಾಗಕ್ಕೆ ತೆರಳುವ ರಸ್ತೆಯನ್ನೇ ಕೊಚ್ಚಿ ಹಾಕಿ, ಸೇತುವೆಯನ್ನು ಹಾನಿ ಮಾಡಿತ್ತು. ಇದರಿಂದಾಗಿ ಕಳೆದ 40 ದಿನಗಳಿಂದ ಈ ಭಾಗದ ರಸ್ತೆಯಲ್ಲಿವಾಹನ ಸಂಚಾರ ಬಂದ್‌ ಆಗಿತ್ತು.

ಇದೀಗ ಕೊಡಗಿನ ವಿರಾಜಪೇಟೆ ತಾಲೂಕಿನ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಭಾಗಕ್ಕೆ ಮರಳಿನ ಮೂಟೆಗಳನ್ನು ಜೋಡಿಸಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದು, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಮಳೆಗಾಲದ ನಂತರ ಡಿಸೆಂಬರ್‌-ಜನವರಿಯಲ್ಲಿಪೂರ್ಣ ಕಾಮಗಾರಿ ನಡೆಸುವುದಾಗಿ ಲೋಕೋಪಯೋಗಿ ಎಂಜಿನಿಯರ್‌ಗಳು ತಿಳಿಸಿದ್ದಾರೆ ಎಂದು ನಾಗರಹೊಳೆ ಎ.ಸಿ.ಎಫ್‌. ಪೌಲ್‌ ಆಂಟೋನಿ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

ಬಸ್‌ ಸಂಚಾರಕ್ಕೆ ಮನವಿ: ಮೈಸೂರು-ಹುಣಸೂರು ಮಾರ್ಗ ನಾಗರಹೊಳೆ-ಕುಟ್ಟ ಹಾಗೂ ಬಿರುನಾಣಿ ಮಾರ್ಗದಲ್ಲಿಕಳೆದ ಒಂದೂವರೆ ತಿಂಗಳಿನಿಂದ ಬಸ್‌ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಅರಣ್ಯ ಸಿಬ್ಬಂದಿಗಳ ಓಡಾಟಕ್ಕೂ ತೊಂದರೆಯಾಗಿತ್ತು. ಹುಣಸೂರು, ವೀರನಹೊಸಹಳ್ಳಿ ಮತ್ತಿತರ ಕಡೆಗಳಿಂದ ತರಕಾರಿ ಸಾಗಣೆ ಸ್ಥಗಿತಗೊಂಡು ಕೂಲಿ ಕಾರ್ಮಿಕರು ತೆರಳದಂತಾಗಿತ್ತು. ಇದೀಗ ರಸ್ತೆ ದುರಸ್ತಿಗೊಂಡಿದ್ದು ಮತ್ತೆ ಬಸ್‌ ಸಂಚಾರ ಆರಂಭಿಸುವಂತೆ ಸಾರಿಗೆ ಸಂಸ್ಥೆಯನ್ನು ನಾಗರಹೊಳೆ, ಕುಟ್ಟ ಭಾಗದ ಮಂದಿ ಹಾಗೂ ಕೂಲಿ ಕಾರ್ಮಿಕರು ಸಾರಿಗೆ ಸಂಸ್ಥೆಯ ಅಧಿಕಾರಿಗಳಲ್ಲಿಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ