ಆ್ಯಪ್ನಗರ

ನಮೋ ದಿವಸ್‌ ನಮಸ್ಕಾರಕ್ಕೆ ಅದ್ಭುತ ಪ್ರತಿಕ್ರಿಯೆ..! ಕೇಂದ್ರದ ಯೋಜನೆಗಳ ಬಗ್ಗೆ ಮೈಸೂರಲ್ಲಿ 2135 ಸಲಹೆ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ನಡೆಯುತ್ತಿರುವ ನಮೋ ದಿವಸ್‌ ನಮಸ್ಕಾರ ಫೆಸ್ಟಿವಲ್‌ ಆಫ್‌ ಡೆವಲಪ್‌ಮೆಂಟ್ಸ್‌ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸುಮಾರು 70 ಲಕ್ಷ ಮಂದಿಗೆ ಕಾರ್ಯಕ್ರಮ ತಲುಪಿದೆ. ಇಲ್ಲಿಯವರೆಗೆ ಯೋಜನೆಗಳಲ್ಲಿನ ಸಮಸ್ಯೆ ಕುರಿತು 2135 ಮಂದಿ ಸಲಹೆ ನೀಡಿದ್ದಾರೆ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದ್ದಾರೆ.

Vijaya Karnataka Web 12 Nov 2020, 3:57 pm
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ನಮೋ ದಿವಸ್‌ ನಮಸ್ಕಾರ ಫೆಸ್ಟಿವಲ್‌ ಆಫ್‌ ಡೆವಲಪ್‌ಮೆಂಟ್ಸ್‌ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಇಲ್ಲಿಯವರೆಗೆ ಯೋಜನೆಗಳಲ್ಲಿನ ಸಮಸ್ಯೆ ಕುರಿತು 2135 ಮಂದಿ ಸಲಹೆ ನೀಡಿದ್ದಾರೆ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದ್ದಾರೆ.
Vijaya Karnataka Web namo diwas namaskar is very successful says mla ramadas
ನಮೋ ದಿವಸ್‌ ನಮಸ್ಕಾರಕ್ಕೆ ಅದ್ಭುತ ಪ್ರತಿಕ್ರಿಯೆ..! ಕೇಂದ್ರದ ಯೋಜನೆಗಳ ಬಗ್ಗೆ ಮೈಸೂರಲ್ಲಿ 2135 ಸಲಹೆ


ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ದಿನದಂದು ಎರಡು ತಿಂಗಳು ಆನ್‌ಲೈನ್‌ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಉದ್ಘಾಟಿಸಿದ್ದರು. ಕೇಂದ್ರ ಸರಕಾರದ 197 ಯೋಜನೆಗಳ ಕುರಿತು ಸಲಹೆ, ಅಭಿಪ್ರಾಯ ಹಂಚಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆನ್‌ಲೈನ್‌ ಹಾಗೂ ಆಫ್‌ಲೈನ್‌ ಮೂಲಕ ಈ ಕಾರ್ಯಕ್ರಮ ಮಾಡಲಾಗಿತ್ತು ಎಂದರು.

ಈ ಕಾರ್ಯಕ್ರಮ ಕುರಿತು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌, ವಾಟ್ಸ್‌ಆಪ್‌, ಟೆಲಿಗ್ರಾಂ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದ ಮೂಲಕ ದೇಶದೆಲ್ಲೆಡೆ ಪ್ರಚಾರ ನಡೆಸಲಾಗಿದ್ದು, ಸುಮಾರು 70 ಲಕ್ಷ ಮಂದಿಗೆ ಕಾರ್ಯಕ್ರಮ ತಲುಪಿದೆ. ನ.15ರೊಳಗೆ ಇದು 1 ಕೋಟಿ ಮಂದಿಗೆ ತಲುಪಲಿದೆ ಎಂದು ತಿಳಿಸಿದರು.

ಯೋಜನೆಗಳ ಸಮಸ್ಯೆ ಹಾಗೂ ಮಾರ್ಪಾಡಿನ ಬಗ್ಗೆ ಅತ್ಯುತ್ತಮ ಸಲಹೆ ನೀಡಿದ ಸಾರ್ವಜನಿಕರಿಗೆ 50 ಸಾವಿರ ರೂ. ಬಹುಮಾನ ಹಾಗೂ 10 ಮಂದಿಗೆ ಆತ್ಮನಿರ್ಭರ ಭಾರತೀಯ ಎಂಬ ಶೀರ್ಷಿಕೆಯಡಿ 2.75 ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ. ಮೊದಲ ಬಹುಮಾನ ಪಡೆದವರಿಗೆ ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿಸುವ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಬೈ ಎಲೆಕ್ಷನ್‌ನಲ್ಲಿ ದಿಗ್ವಿಜಯ ಸಾಧಿಸಿದ ಬಿಜೆಪಿ ನಾಯಕರ ಚಿತ್ತ ಈಗ ಮೈಸೂರಿನತ್ತ..!

ಉತ್ತಮ ಸಲಹೆಗಳನ್ನು ಪೈಲೆಟ್‌ ಪ್ರಾಜೆಕ್ಟ್ ಆಗಿ ಮೈಸೂರಿನಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಇನ್ನು ಐದು ದಿನಗಳಲ್ಲಿ ಮಾತ್ರ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಜನರು ನಮೋ ದಿವಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಗಾಗಿ ಅಮೂಲ್ಯ ಸಲಹೆ ನೀಡುವಂತೆ ರಾಮದಾಸ್‌ ಮನವಿ ಮಾಡಿದರು.

ಜ.1 ರಿಂದ‌ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ..! ಯಾವುದೇ ಪರೀಕ್ಷೆಗೂ ಶುಲ್ಕ ಇಲ್ಲ ಎಂದ ಡಾ.ಸುಧಾಕರ್

ಅನ್ಯ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆಯೋಜನೆಗಳ ಬಗ್ಗೆ ಸಲಹೆ ನೀಡುವುದು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸಲಾಗಿಲ್ಲ. ದೇಶದಾದ್ಯಂತ ಎಲ್ಲ ರಾಜ್ಯಗಳ ಜನರೂ ಸರಕಾರದ ಯೋಜನೆಗಳ ಬಗ್ಗೆ ಆಯಾ ರಾಜ್ಯಗಳ ಭಾಷೆಗಳಲ್ಲಿಯೇ ಸಲಹೆ, ಸೂಚನೆ ನೀಡಬಹುದು ಎಂದು ತಿಳಿಸಿದರು. ಕೆ.ಆರ್‌.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಕೇಬಲ್‌ ನಾಗೇಂದ್ರ, ಉಪಾಧ್ಯಕ್ಷ ಸಂತೋಷ್‌ ಶಂಭು, ಕಾರ್ಯದರ್ಶಿಗಳಾದ ಪ್ರಸಾದ್‌ ಬಾಬು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ