ಆ್ಯಪ್ನಗರ

ಕ್ರೀಡಾ ಸಾಧಕರಿಗೆ ನಂದಿ ಪ್ರಶಸ್ತಿ ಪ್ರದಾನ

ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 9 ಮಂದಿಗೆ ನಂದಿ ಪ್ರಶಸ್ತಿ ಹಾಗೂ ಒಬ್ಬರಿಗೆ ವಿಶೇಷ ಕ್ರೀಡಾ ಪ್ರವರ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Vijaya Karnataka 11 May 2019, 5:00 am
ಮೈಸೂರು: ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 9 ಮಂದಿಗೆ ನಂದಿ ಪ್ರಶಸ್ತಿ ಹಾಗೂ ಒಬ್ಬರಿಗೆ ವಿಶೇಷ ಕ್ರೀಡಾ ಪ್ರವರ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Vijaya Karnataka Web 0905-2-1-MYSPHOTOS-10


ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ವಾಸು, ''ಮೈಸೂರು ಸಾಂಸ್ಕೃತಿಕ, ಶೈಕ್ಷಣಿಕ, ಕೈಗಾರಿಕಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದ್ದು, ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಕ್ರೀಡಾ ವಿವಿಯನ್ನು ಆರಂಭಿಸುವುದು ಅಗತ್ಯವಾಗಿದೆ,'' ಎಂದರು.

''ಅಧಿಕಾರದಲ್ಲಿದ್ದಾಗಲೂ ಮೈಸೂರಿನಲ್ಲಿ ಕ್ರೀಡಾ ವಿವಿ ಸ್ಥಾಪಿಸುವಂತೆ ಆಡಳಿತದಲ್ಲಿದ್ದ ಸರಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದೆ, ಹಾಗಿದ್ದರೂ ಅದು ಭರವಸೆಯಾಗಿ ಉಳಿದಿದೆ. ಕ್ರೀಡಾಪಟುಗಳು ಹಾಗೂ ಪೋಷಕರು ಕ್ರೀಡಾ ವಿವಿಗೆ ಸರಕಾರವನ್ನು ಒತ್ತಾಯಿಸಬೇಕಿದೆ,'' ಎಂದು ಸಲಹೆ ನೀಡಿದರು.

''ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಪ್ರತಿಭಟನಾ ಮನೋಭಾವ, ಹಕ್ಕಿಗಾಗಿ ಒತ್ತಾಯಿಸುವ ಗುಣ ಮರೆಯಾಗಿದೆ. ಆದರೆ ಎಲ್ಲಾ ಕ್ರೀಡಾಪಟುಗಳು ಒಂದಾಗಿ ಕ್ರೀಡಾ ವಿವಿ ಸ್ಥಾಪನೆಗಾಗಿ ಸರಕಾರಕ್ಕೆ ಬೇಡಿಕೆ ಸಲ್ಲಿಸುವುದು ಅಗತ್ಯವಾಗಿದೆ,'' ಎಂದರು.

ಕ್ರೀಡಾ ವರದಿಗಾರ ಮೊಹಮ್ಮದ್‌ ನೂಮನ್‌, ವಿಜಯ ಕರ್ನಾಟಕ ಪತ್ರಿಕಾ ಛಾಯಾಗ್ರಾಹಕ ನಾಗೇಶ್‌ ಪಾಣತ್ತಲೆ, ಕ್ರೀಡಾಪಟುಗಳಾದ ಸುಹಾಸ್‌ ಎಸ್‌.ಗೌಡ, ಅಪ್ಸನಾ ಬೇಗಂ, ಬಿ.ಮನುಷ್‌, ಎಸ್‌.ರಾಹುಲ್‌ ಕಶ್ಯಪ್‌, ಎನ್‌.ರಾಹುಲ್‌ ನಾಯಕ್‌, ಲಿಖಿತಾ ಯೋಗೇಶ್‌, ಎಚ್‌.ಎಸ್‌.ಹರ್ಷಿತಾ ಅವರಿಗೆ ನಂದಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ವಿ.ಆರ್‌.ಬೀಡು, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪ ನಿರ್ದೇಶಕ ಕೆ.ಸುರೇಶ್‌, ಎಂಡಿಎಎ ಉಪಾಧ್ಯಕ್ಷರಾದ ಬಿ.ಎಲ್‌.ಜಗದೀಶ್‌, ಅಭಿಲಾಷ್‌ ನಾಯರ್‌, ಮಹೇಶ್‌ ಬಲ್ಲಾಳ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ