ಆ್ಯಪ್ನಗರ

ನಂಜನಗೂಡು ಪರಶುರಾಮ ದೇಗುಲ ಜಲಾವೃತ

ಕಪಿಲಾ ನದಿಯಲ್ಲಿ ನೀರಿನ ಹೊರ ಹರಿವು ಹೆಚ್ಚಾಗಿದ್ದರಿಂದ ಶನಿವಾರ ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನಲ್ಲಿ ಕಪಿಲಾ ನದಿ ತೀರದಲ್ಲಿರುವ ಪರಶುರಾಮ ದೇವಾಲಯ ಜಲಾವೃತವಾಗಿದ್ದು ಇದರೊಂದಿಗೆ ಶ್ರೀ ಕಂಠೇಶ್ವರಸ್ವಾಮಿ ದೇವಾಲಯದ ಸ್ನಾನಘಟ್ಟ, ಮುಡಿಕಟ್ಟೆ ಸಹಾ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.

Vijaya Karnataka Web 17 Jun 2018, 5:00 am
ನಂಜನಗೂಡು: ಕಪಿಲಾ ನದಿಯಲ್ಲಿ ನೀರಿನ ಹೊರ ಹರಿವು ಹೆಚ್ಚಾಗಿದ್ದರಿಂದ ಶನಿವಾರ ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನಲ್ಲಿ ಕಪಿಲಾ ನದಿ ತೀರದಲ್ಲಿರುವ ಪರಶುರಾಮ ದೇವಾಲಯ ಜಲಾವೃತವಾಗಿದ್ದು ಇದರೊಂದಿಗೆ ಶ್ರೀ ಕಂಠೇಶ್ವರಸ್ವಾಮಿ ದೇವಾಲಯದ ಸ್ನಾನಘಟ್ಟ, ಮುಡಿಕಟ್ಟೆ ಸಹಾ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.
Vijaya Karnataka Web MYR-MYS16NGD7


ಮೈದುಂಬಿ ಹರಿಯುತ್ತಿರುವ ಕಪಿಲಾ ನದಿಯನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯ ಜನರು ಶ್ರೀಕಂಠೇಶ್ವರಸ್ವಾಮಿ ಸ್ನಾನಘಟ್ಟದ ಬಳಿ ಆಗಮಿಸುತ್ತಿದ್ದು , ನದಿ ಬಳಿಗೆ ಜನರು ತೆರಳದಂತೆ ಪೊಲೀಸರು ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದ್ದರೂ ಎಡೆ ಬಿಡದೆ ಆಗಮಿಸುತ್ತಿರುವ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗುತ್ತಿದೆ. ಹೀಗಾಗಿ ನದಿ ದಡದಲ್ಲಿ ಹಗ್ಗ ಕಟ್ಟಿ ಅಪಾಯದ ಕುರಿತು ಸಂದೇಶ ನೀಡುವ ಮೂಲಕ ಜನರು ನದಿ ನೀರಿನಲ್ಲಿ ಮುಂದೆ ಸಾಗÜದಂತೆ ನೋಡಿಕೊಂಡಿದ್ದರು. ಯಾವುದೇ ಕ್ಷ ಣದಲ್ಲಿ ನೀರಿನ ಹೊರ ಹರಿವು ಹೆಚ್ಚಳವಾಗುವ ಸಾಧ್ಯತೆಯಿರುವುದರಿಂದ ನಗರದ ಹಳ್ಳದಕೇರಿ ನಿವಾಸಿಗಳಿಗೆ ನಗರಸಭೆಯಿಂದ ಮುನ್ನೆಚ್ಚರಿಕೆ ನೀಡಲಾಗಿದ್ದು , ಜೊತೆಗೆ ತಾತ್ಕಾಲಿಕ ಗಂಜಿ ಕೇಂದ್ರವನ್ನು ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ಮಲ್ಲನಮೂಲೆ ವೇದಿಕೆ ಜಲಾವೃತ: ತಾಲೂಕಿನ ಮಲ್ಲನಮೂಲೆ ಶ್ರೀ ಗುರುಕಂಬಳೀಶ್ವರ ಮಠಾಧ್ಯಕ್ಷ ರಾದ ಶ್ರೀ ಚೆನ್ನಬಸವಸ್ವಾಮೀಜಿಯವರು ದೀಕ್ಷೆ ಪಡೆದು 60 ವರ್ಷಗಳು ಪೂರ್ಣಗೊಂಡಿರುವ ಹಿನ್ನ್ನೆಲೆಯಲ್ಲಿ ಜೂ.17ರ ಭಾನುವಾರ ವಜ್ರಮಹೋತ್ಸವ ಆಚರಣೆಗಾಗಿ ಮಠದ ಭಕ್ತಾಧಿಗಳಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿತ್ತು. ನಾಡಿನ ವಿವಿಧ ಮಠಾಧೀಶರು ಹಾಗೂ 20 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಜನರ ಆಗಮನ ನಿರೀಕ್ಷೆಯೊಂದಿಗೆ ಬೃಹತ್‌ ವೇದಿಕೆಯನ್ನು ಮಠದ ಸಮೀಪದಲ್ಲಿ ಸಿದ್ಧಪಡಿಸಲಾಗಿತ್ತು . ಆದರೆ ಕಪಿಲಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ್ದರಿಂದ ಶನಿವಾರ ಕಾರ‍್ಯಕ್ರಮ ಆಯೋಜಿಸಲುದ್ದೇಶಿಸಲಾಗಿದ್ದ ವೇದಿಕೆಗೆ ನೀರು ನುಗ್ಗಿ ಇಡೀ ಸಭಾಂಗಣ ಜಲಾವೃತಗೊಂಡಿದೆ. ಹೀಗಾಗಿ ಮೈಸೂರು ರಸ್ತೆಯ ಇನ್ನೊಂದು ಬದಿಯಲ್ಲಿರುವ ಖಾಸಗಿ ನಿವೇಶನದಲ್ಲಿ ಕಾರ‍್ಯಕ್ರಮವನ್ನು ಆಯೋಜಿಸುವ ಸಲುವಾಗಿ ಸಂಘಟಕರು ತರಾತುರಿಯಲ್ಲಿ ಸಿದ್ಧತೆ ನಡೆಸಿದ್ದಾರೆ.

ನೂರಾರು ಎಕರೆ ಭತ್ತದ ಬೆಳೆ ನಾಶ: ಕಪಿಲಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಸುತ್ತೂರು, ಕುಪ್ಪರವಳ್ಳಿ, ನಗರ್ಲೆ, ಸರಗೂರು, ಬೊಕ್ಕಹಳ್ಳಿ, ಆಲತ್ತೂರು, ಹೊಸಕೋಟೆ, ಬಿಳುಗಲಿ ಹಾಗೂ ತಾಯೂರು ಗ್ರಾಮದಲ್ಲಿ ಪ್ರವಾಹ ಉಂಟಾಗಿ ಹುಲ್ಲಹಳ್ಳಿ ನಾಲೆಯಲ್ಲಿ ರೈತರು ಬೆಳೆದಿರುವ ನೂರಾರು ಎಕರೆ ಪ್ರದೇಶದ ಭತ್ತದ ಬೆಳೆ ಜಲಾವೃತಗೊಂಡಿದೆ. ಬಹುತೇಕ ಹೆಚ್ಚಿನ ಬೆಳೆ ಕಟಾವಿಗೆ ಸಿದ್ಧಗೊಂಡಿದ್ದು ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಭತ್ತದ ಕಟಾವನ್ನು ಮುಂದೂಡಿದ್ದರು. ಇದೀಗ ಉಕ್ಕಿ ಹರಿಯುತ್ತಿರುವ ಕಪಿಲಾ ನದಿ ನೀರಿನಲ್ಲಿ ಭತ್ತದ ಬೆಳೆ ಕೊಚ್ಚಿ ಹೋಗುವ ಭೀತಿ ರೈತರಿಗೆ ಕಾಡುತ್ತಿದೆ.

ಕೆಲ ರೈತರ ಜಮೀನಿನಲ್ಲಿ ಬೆಳೆದಿರುವ ಕಬ್ಬು, ಬಾಳೆ, ತರಕಾರಿ ಸೇರಿದಂತೆ ಹೂತೋಟಗಳೂ ನೀರಿನಲ್ಲಿ ಮುಳುಗಡೆಯಾಗಿದ್ದು ,ನದಿಯಲ್ಲಿ ನೀರಿನ ಹರಿವು ಹೆಚ್ಚಾದಂತೆ ರೈತರಲ್ಲಿ ಆತಂಕವೂ ಹೆಚ್ಚುತ್ತಿದೆ ಎಂದು ಸುತ್ತೂರು ಗ್ರಾಮದ ರೈತ ಮಹದೇವನಾಯಕ ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸುತ್ತೂರು ಗ್ರಾಮದ ಕಪಿಲಾ ನದಿ ಸೇತುವೆವರೆಗೆ ಕಪಿಲಾ ನೀರು ತುಂಬಿ ಹರಿಯುತ್ತಿದ್ದು , ನದಿಯಲ್ಲಿ ಐದಾರು ಸಾವಿರ ಕ್ಯೂಸೆಕ್‌ ಪ್ರಮಾಣದ ನೀರು ಹರಿಯುವಿಕೆ ಹೆಚ್ಚಾದಲ್ಲಿ ಸುತ್ತೂರು ಸೇತುವೆ ಮುಳುಗÜಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತುಂಬಿ ತುಳುಕುತ್ತಿರುವ ಕಪಿಲಾ ನದಿಯ ರುದ್ರ ರಮಣೀಯ ನೋಟವನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖæ್ಯಯ ಜನರು ನಗರದ ಪ್ರವೇಶ ದ್ವಾರದಲ್ಲಿರುವ ದಳವಾಯಿ ಸೇತುವೆ ಹಾಗೂ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಬಳಿ ಇರುವ ಹೆಜ್ಜಿಗೆ ಸೇತುವೆಗೆ ಭೇಟಿ ನೀಡುತ್ತಿದ್ದಾರೆ. ಮೈದುಂಬಿ ಹರಿಯುತ್ತಿರುವ ಕಪಿಲಾ ನದಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ