ಆ್ಯಪ್ನಗರ

ಪೈ.ಶಶಿರಾಜ್ ಗೆ ಸಿದ್ದರಾಜು ಕಪ್

ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದ ಮೈದಾನದಲ್ಲಿ ಆಯೋಜಿಸಿದ್ದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ನಂಜನಗೂಡು ನಗರದ ಶಂಕರಪುರ ಗರಡಿಯ ಪೈ.ಶಶಿರಾಜ್ ಬೂಲಾ ತಮ್ಮ ಎದುರಾಳಿ ಶ್ರೀರಂಗಪಟ್ಟಣದ ಮಧು ಅವರನ್ನು ಸೋಲಿಸಿ ಹಿರಿಯ ಕುಸ್ತಿಪಟು ಪೈ. ಸಿದ್ದರಾಜು ಕಪ್ ತನ್ನದಾಗಿಸಿಕೊಂಡರು.

ವಿಕ ಸುದ್ದಿಲೋಕ 2 Mar 2016, 3:59 am
ನಂಜನಗೂಡು: ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದ ಮೈದಾನದಲ್ಲಿ ಆಯೋಜಿಸಿದ್ದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ನಂಜನಗೂಡು ನಗರದ ಶಂಕರಪುರ ಗರಡಿಯ ಪೈ.ಶಶಿರಾಜ್ ಬೂಲಾ ತಮ್ಮ ಎದುರಾಳಿ ಶ್ರೀರಂಗಪಟ್ಟಣದ ಮಧು ಅವರನ್ನು ಸೋಲಿಸಿ ಹಿರಿಯ ಕುಸ್ತಿಪಟು ಪೈ. ಸಿದ್ದರಾಜು ಕಪ್ ತನ್ನದಾಗಿಸಿಕೊಂಡರು.
Vijaya Karnataka Web nanjangud nada wrestling tournament
ಪೈ.ಶಶಿರಾಜ್ ಗೆ ಸಿದ್ದರಾಜು ಕಪ್


ಪಂದ್ಯಾವಳಿಯಲ್ಲಿ 25ಕ್ಕೂ ಹೆಚ್ಚು ಕಾಟಾ ಕುಸ್ತಿಗಳು ಜರುಗಿದವು. ಸಾವಿರಕ್ಕೂ ಹೆಚ್ಚು ಸಂಖ್ಯೆಯ ಜನರು ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿ ಪೈಲ್ವಾನರಿಗೆ ಪ್ರೋತ್ಸಾಹ ನೀಡಿದರು. ಇನ್ನು ಪಂದ್ಯಾವಳಿಯಲ್ಲಿ ಜರುಗಿದ ಉದ್ಬೂರು ಪೈ.ಶಿವನಾಯಕ ಹಾಗೂ ಹಳ್ಳದ ಕೇರಿಯ ಪೈ. ಭರತ್ ಸಿಂಗ್ ನಡುವಿನ ಕುಸ್ತಿ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿ ಯಾಯಿತು. ಇಬ್ಬರ ನಡುವೆ ಜರುಗಿದ ರೋಚಕ ಹಣಾಹಣಿಯಲ್ಲಿ ಅಂತಿಮವಾಗಿ ಪೈ.ಭರತ್ ಸಿಂಗ್ ಜಯಶಾಲಿಯಾದರು.

ಉಳಿದಂತೆ ಪಂದ್ಯಾವಳಿಯಲ್ಲಿ ಸ್ಥಳೀಯ ಕುಸ್ತಿಪಟುಗಳಾದ ಪೈ.ಭರತ್, ನಟೇಶ್, ಮಹದೇವಸ್ವಾಮಿ, ಅವಿನಾಶ್,ರವಿ, ಶ್ರೀನಿವಾಸ್ ಪ್ರದರ್ಶನ ನೀಡಿದರು.

ಇದಕ್ಕೂ ಮೊದಲು ಕುಸ್ತಿ ಪಂಧ್ಯಾವಳಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರ್ನಾಟಕ ಕಾವಲು ಪಡೆ ತಾಲೂಕು ಘಟಕದ ಅಧ್ಯಕ್ಷ ಧರ್ಮೇಂದ್ರ ಮಾತನಾಡಿ, ಅಳಿವಿನಂಚಿನತ್ತ ಸಾಗುತ್ತಿರುವ ಜನಪ್ರಿಯ ಕುಸ್ತಿ ಕಲೆಯ ಉಳಿವಿಗೆ ಯುವಜನರನ್ನು ಕುಸ್ತಿಯತ್ತ ಆಕರ್ಷಿಸುವ ಅವಶ್ಯಕತೆ ಇದೆ. ಈ ಹಿಂದಿನಿಂದಲೂ ನಂಜನಗೂಡು ಕುಸ್ತಿ ಪಟುಗಳ ತವರೂರು. ಅದೇ ಹಿರಿಮೆಯನ್ನು ಮುಂದುವರೆಸುವ ಸಲುವಾಗಿ ಸಂಘಸಂಸ್ಥೆಗಳು ಕುಸ್ತಿಪಟುಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಪಂದ್ಯಾವಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರುಗಳಾದ ಮಹದೇವ ಪ್ರಸಾದ್, ರವಿಕುಮಾರ್, ಪೊಲೀಸ್ ಕಷ್ಣಮೂರ್ತಿ, ನಾಗೇಶ್, ಬಸವಣ್ಣ, ವಿನಯ್,ಶ್ರೇಯಸ್ ಗೌಡ, ಸಾಗರ್ ಗೌಡ, ಕುಸ್ತಿ ಪಂದ್ಯಾವಳಿ ವ್ಯವಸ್ಥಾಪಕ ಪೈ.ಧನರಾಜ್ ಬೂಲಾ, ಪಂದ್ಯಾವಳಿಯ ತೀರ್ಪುಗಾರರುಗಳಾದ ಬನ್ನೂರು ರವಿ, ಅಮತ್, ಕೆಎಸ್‌ಆರ್‌ಟಿಸಿ ಪೈ.ಕೆಂಪೇಗೌಡ, ಮಹದೇವ್, ಪೈ.ತಿಮ್ಮಣ್ಣ, ಶ್ರೀಕಂಠು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ