ಆ್ಯಪ್ನಗರ

ನೆರೆ ಹಾನಿ ತಡೆಗೆ ಸುರಕ್ಷಿತ ಪ್ರದೇಶಗಳಲ್ಲಿ ವಸತಿ ನಿರ್ಮಾಣ

ನದಿ ಪ್ರವಾಹದಿಂದ ಹಾನಿಯನ್ನು ತಡೆಗಟ್ಟಲು ಪಕ್ಕದ ವಾಸಿಗಳಿಗೆ ಮುಂದಿನ ದಿನಗಳಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ವಸತಿ ನಿರ್ಮಾಣ ಮಾಡಲಿಕ್ಕೆ ಯೋಜನೆ ರೂಪಿಸಿ, ನಿವೇಶನಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ವಿ.ಶ್ರೀನಿವಾಸ್‌ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Vijaya Karnataka 17 Aug 2019, 5:00 am
ತಿ.ನರಸೀಪುರ : ನದಿ ಪ್ರವಾಹದಿಂದ ಹಾನಿಯನ್ನು ತಡೆಗಟ್ಟಲು ಪಕ್ಕದ ವಾಸಿಗಳಿಗೆ ಮುಂದಿನ ದಿನಗಳಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ವಸತಿ ನಿರ್ಮಾಣ ಮಾಡಲಿಕ್ಕೆ ಯೋಜನೆ ರೂಪಿಸಿ, ನಿವೇಶನಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ವಿ.ಶ್ರೀನಿವಾಸ್‌ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.
Vijaya Karnataka Web MYR-MYS16TNP1


ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಶುಕ್ರವಾರ ನೆರೆ ಹಾನಿಯ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರಿಂದ ಮಾಹಿತಿ ಪಡೆದುಕೊಂಡ ನಂತರ ಮಾತನಾಡಿದರು. '' ಪ್ರತಿ ವರ್ಷ ಕೂಡ ಪ್ರವಾಹ ಬರುವುದರಿಂದ ನದಿ ತೀರದಲ್ಲಿನ ಜನರು ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದಾಗ ಪ್ರತಿ ಬಾರಿಯೂ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಕಲ್ಪಿಸುವ ಬದಲು ಸುರಕ್ಷಿತ ಪ್ರದೇಶದಲ್ಲಿ ಶಾಶ್ವತ ನೆಲೆಯನ್ನು ಕಲ್ಪಿಸಲಿಕ್ಕೆ ಕ್ರಮ ಕೈಗೊಳ್ಳಬೇಕು'' ಎಂದು ಹೇಳಿದರು.

'' ತಾಲೂಕಿನ ತಡಿ ಮಾಲಂಗಿಯಲ್ಲಿ ನಲವತ್ತುಕ್ಕೂ ಹೆಚ್ಚೂ ಕುಟುಂಬಗಳು ಪ್ರವಾಹ ಬಾಧೆಗೆ ಸಿಲುಕುತ್ತಿರುವುದರಿಂದ ಅವರೆಲ್ಲರನ್ನೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ, ಅವರಿಗೆ ನಿವೇಶನ ಮತ್ತು ವಸತಿ ಕಲ್ಪಿಸುವ ಕೆಲಸವನ್ನು ಗಂಭೀರವಾಗಿ ಪರಿಗಣಿಸಬೇಕು. ನೆರೆ ನಿಂತ ಮೇಲೂ ನೀರಿನಲ್ಲಿ ಮುಳುಗಿದ ಮನೆಗಳಲ್ಲಿ ವಾಸ ಮಾಡುವುದು ಸದ್ಯದ ಮಟ್ಟಿಗೆ ತ್ರಾಸದಾಯಕವಾಗುತ್ತದೆ. ಪ್ರವಾಹ್ಕ ಪೀಡಿತ ಜನರಿಗೆ ಸಾಮಾಜಿಕ ಭದ್ರತೆ ಕಾಯಿದೆಯಡಿ ಸಿಗುವ ಎಲ್ಲಾ ಸೌಲಭ್ಯಗಳನ್ನು ತಾಲೂಕು ಆಡಳಿತ ಕಲ್ಪಿಸಬೇಕು. ಸರಕಾರದ ಆದೇಶದಂತೆ ನೆರವನ್ನು ನೀಡಬೇಕು'' ಎಂದರು.

'' ರಾಜ್ಯದಲ್ಲಿ ಭೀಕರ ಪ್ರವಾಹ ತಲೆದೂರಿದ್ದರಿಂದ 20ಕ್ಕೂ ಹೆಚ್ಚು ಜಿಲ್ಲೆಗಳು ನೆರೆಯಿಂದ ಹಾನಿಗೊಳಗಾಗಿವೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಯಾಯ ಜಿಲ್ಲಾಡಳಿತ ಪರಿಹಾರ ಕಾರ್ಯವನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದರಿಂದ ಹೆಚ್ಚಿನ ಅನಾವುತ ತಪ್ಪಿದೆ. ಮೈಸೂರು ಜಿಲ್ಲೆಯಲ್ಲಿ ಎಚ್‌.ಡಿ.ಕೋಟೆ, ನಂಜನಗೂಡು ಹಾಗೂ ತಿ.ನರಸೀಪುರ ಮತ್ತು ಚಾಮರಾನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕುಗಳು ಪ್ರವಾಹದಿಂದ ತುತ್ತಾಗಿದ್ದು, ಅದರಲ್ಲೂ ನಂಜನಗೂಡು ತಾಲೂಕು ತೀವ್ರ ಹಾನಿಯುಂಟಾಗಿದೆ. ನದಿಯಲ್ಲಿ ನೆರೆ ಇಳಿದ್ದರಿಂದ ಸಂತ್ರಸ್ತರೆಲ್ಲರೂ ಬದಕನ್ನು ಕಟ್ಟಿಕೊಡುವ ಕೆಲಸವನ್ನು ತಾಲೂಕು ಆಡಳಿತ ಕಾರ್ಯವನ್ನು ನಡೆಸುತ್ತಿದೆ'' ಎಂದು ತಿಳಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ.ರಮೇಶ್‌ ಸೇರಿದಂತೆ ತಹಸೀಲ್ದಾರ್‌ ನಾಗಪ್ರಶಾಂತ್‌ ಹಾಗೂ ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಎಂ.ಜರಾಲ್ಡ್‌ ರಾಜೇಶ್‌ ಅವರು ಪ್ರವಾಹ ಹಾನಿಯ ಬಗ್ಗೆ ಮಾಹಿತಿ ನೀಡಿದರು.

ಎಂಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿ.ಬಸವೇಗೌಡ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಕ್ಷೇತ್ರಾಧ್ಯಕ್ಷ ಎಚ್‌.ಎಂ.ಪರಶಿವಮೂರ್ತಿ, ಜಿ.ಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್‌, ತಾ.ಪಂ ಸದಸ್ಯ ಎಂ.ಚಂದ್ರಶೇಖರ, ಹಿಂ.ವರ್ಗಗಳ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ, ಸೋಸಲೆ ಪಿಎಸಿಸಿಎಸ್‌ ಅಧ್ಯಕ್ಷ ಎಂ.ಪರಶಿವಮೂರ್ತಿ, ಟೌನ್‌ ಅಧ್ಯಕ್ಷ ರಾದ ಬಿ.ವೀರಭದ್ರಪ್ಪ, ಬಿ.ಎಂ.ವಿಜಯಕುಮಾರ್‌, ಸ್ಲಂ ಮೋರ್ಚಾ ಅಧ್ಯಕ್ಷ ಕೆ.ಗಣೇಶ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ.ಮಿಥುನ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ