ಆ್ಯಪ್ನಗರ

ನವಜಾತ ಶಿಶು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ವಿಕ ಸುದ್ದಿಲೋಕ ಪಿರಿಯಾಪಟ್ಟಣ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಿಸಿದ 3 ದಿನದ ನವಜಾತ ಶಿಶು ಮೃತಪಟ್ಟಿದ್ದು , ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಪೋಷಕರು ...

Vijaya Karnataka 10 Feb 2019, 5:00 am
ಪಿರಿಯಾಪಟ್ಟಣ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಿಸಿದ 3 ದಿನದ ನವಜಾತ ಶಿಶು ಮೃತಪಟ್ಟಿದ್ದು , ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
Vijaya Karnataka Web newborn infant death neglected charges of the doctor
ನವಜಾತ ಶಿಶು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ


ಕೊಡಗು ಜಿಲ್ಲೆಯ ಪೊನ್ನಂಪೇಟೆ ನಿವಾಸಿ ಪಿ.ಎಸ್‌. ಕಾವ್ಯ - ಯತೀಶ್‌ ದಂಪತಿ ಗಂಡು ಮಗು ಮೃತಪಟ್ಟಿರುವುದು. ಪಿ.ಎಸ್‌.ಕಾವ್ಯ ಪಿರಿಯಾಪಟ್ಟಣದ ಮೂಲದವರಾಗಿದ್ದು , ಪೊನ್ನಂಪೇಟೆಯ ಯತೀಶ್‌ಗೆ ಅವರನ್ನು ಮದುವೆಯಾಗಿದ್ದರು. ತಾಯಿ ಮನೆಯಲ್ಲಿ ಆರೈಕೆ ಪಡೆದಿದ್ದ ಕಾವ್ಯಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಫೆ.7ರ ಗುರುವಾರ ರಾತ್ರಿ ಗಂಡು ಮಗು ಜನಿಸಿದೆ. ಶುಕ್ರವಾರ ರಾತ್ರಿವರೆಗೂ ಮಗು ಹಾಲು ಕುಡಿಯದೆ ಇರುವಾಗ ನರ್ಸ್‌ಗಳಿಗೆ ತಿಳಿಸಿದರೂ ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ಶನಿವಾರ ಬೆಳಗ್ಗೆ ವೇಳೆಗೆ ಕಣ್ಣಿನಲ್ಲಿ ಹಳದಿ ರೂಪದ ದ್ರವಿಸಿದ್ದು , ಆಸ್ಪತ್ರೆಯ ವೈದ್ಯರಿಗೆ ತೋರಿಸಿದಾಗ ತಕ್ಷ ಣ ಮಗುವನ್ನು ಮೈಸೂರಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಮಗುವನ್ನು ಮೈಸೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದೆ.

ಹೆರಿಗೆಯಾಗಿ ಎರಡು ದಿನವಾದರೂ ಮಗುವಿನ ಆರೋಗ್ಯದ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಪ್ರಸೂತಿ ತಜ್ಞ ವೈದ್ಯ ಡಾ.ವೀಣಾಸಿಂಗ್‌ ಅವರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಯತೀಶ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಡಿವೈಎಸ್‌ಪಿ ಭೇಟಿ : ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಭಾಸ್ಕರ್‌ ರೈ, ಸರ್ಕಲ್‌ ಇನ್ಸ್‌ಪೆಕ್ಟರ್‌ ಪ್ರದೀಪ್‌, ಎಸ್‌ಐ ಗಣೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಟ್ಟರು. ನಾವು ನೀಡದಿರುವ ಕಾರಣ ನಮಗೆ ಸರಿಯಾದ ಚಿಕಿತ್ಸೆ ನೀಡಲಿಲ್ಲ. ಅಲ್ಲದೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಕಾವ್ಯ ಮತ್ತು ಸಂಬಂಧಿಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮಗುವಿನ ಸಾವಿನ ಕುರಿತು ಪೋಷಕರು ದೂರು ನೀಡಿದ್ದು , ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರು ವಾಪಸ್‌ ಬಂದ ನಂತರ ಅವರ ಹೇಳಿಕೆ ಆಧರಿಸಿ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.
- ಡಾ.ಶ್ರೀನಿವಾಸ್‌, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ.

ಜನಿಸಿದ ಬಹುತೇಕ ಮಕ್ಕಳಲ್ಲಿ ಜಾಂಡೀಸ್‌ ಸಾಮಾನ್ಯವಾಗಿರುತ್ತದೆ. ಇದರಿಂದ ಸಾವಿಗೀಡಾಗುವುದು ಬಹಳ ಕಡಿಮೆ. ಹುಟ್ಟಿದ ಮಕ್ಕಳನ್ನು ತಾಯಿಯ ಪಕ್ಕ ಬಟ್ಟೆಯಿಂದ ಶಾಖ ಬರುವಂತೆ ಬೆಚ್ಚಗೆ ಇಡಬೇಕು. ರಾತ್ರಿ, ಹಗಲು ಆಗಾಗ ಹಾಲು ಕುಡಿಸುತ್ತಲೇ ಇರಬೇಕು. ಸರಿಯಾಗಿ ಹಾಲು ಕುಡಿಸದೆ ಡೀಹೈಡ್ರೇಷನ್‌ನಿಂದಾಗಿ ಮಗು ಸಾವನಪ್ಪಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
-ಡಾ.ಶಿವಪ್ರಕಾಶ್‌, ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ