ರಾಜಕೀಯವಾಗಿ ಜಿ.ಟಿ ದೇವೇಗೌಡರ ಕುಟುಂಬವನ್ನು ಮುಗಿಸಲು ಯಾರಿಗೂ ಸಾಧ್ಯವಿಲ್ಲ; ಹರೀಶ್ ಗೌಡ
ಕಾರ್ಯಕರ್ತರು ಹಾಗೂ ಜನರು ದೇವೇಗೌಡರ ಕುಟುಂಬದೊಂದಿಗೆ ಇದ್ದಾರೆ. ಅವರನ್ನು ನಮ್ಮಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ಪಕ್ಷದ ಬಗ್ಗೆ ಅಸಮಾಧಾನ ಇರುವುದು ಸಹಜ. ಆದರೆ, ನಾವು ಪಕ್ಷದಿಂದ ಹೊರಹೋಗಿಲ್ಲ. ಇನ್ನೂ ಜೆಡಿಎಸ್ನಲ್ಲಿಯೇ ಇದ್ದೇವೆ. ನನ್ನ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ನೇಹ ಗಟ್ಟಿಯಾಗಿದೆ ಎಂದುಹರೀಶ್ಗೌಡ ಹೇಳಿದ್ದಾರೆ.
Vijaya Karnataka Web 23 Jan 2021, 8:39 am
ಮೈಸೂರು: ರಾಜಕೀಯವಾಗಿ ಜಿ.ಟಿ.ದೇವೇಗೌಡರ ಕುಟುಂಬವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದು ಅವರ ಪುತ್ರ ಹರೀಶ್ಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರು ಹಾಗೂ ಜನರು ದೇವೇಗೌಡರ ಕುಟುಂಬದೊಂದಿಗೆ ಇದ್ದಾರೆ. ಅವರನ್ನು ನಮ್ಮಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ಪಕ್ಷದ ಬಗ್ಗೆ ಅಸಮಾಧಾನ ಇರುವುದು ಸಹಜ. ಆದರೆ, ನಾವು ಪಕ್ಷದಿಂದ ಹೊರಹೋಗಿಲ್ಲ. ಇನ್ನೂ ಜೆಡಿಎಸ್ನಲ್ಲಿಯೇ ಇದ್ದೇವೆ. ನನ್ನ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ನೇಹ ಗಟ್ಟಿಯಾಗಿದೆ ಎಂದು ಹೇಳಿದರು.
ಜೆಡಿಎಸ್ ತಯಾರಿಸಿದ ವೀಕ್ಷಕರ ಪಟ್ಟಿಯಲ್ಲಿ ಜಿಟಿ ದೇವೇಗೌಡರ ಹೆಸರು ಇಲ್ಲ ಎನ್ನುವುದು ನಿಜ. ಏಕೆ ಬಿಟ್ಟಿದ್ದಾರೆ ಎನ್ನುವುದು ನಮಗೆ ತಿಳಿದಿಲ್ಲ. ಪಟ್ಟಿ ತಯಾರಿಸಿದವರನ್ನೇ ಕೇಳಬೇಕು. ನಾನು ಯಾವುದೇ ಅಸಮಾಧಾನ ಹೊಂದಿಲ್ಲ. ನಮ್ಮೊಂದಿಗೆ ಕಾರ್ಯಕರ್ತರು ಗಟ್ಟಿಯಾಗಿ ಇದ್ದಾರೆ ಎಂದು ತಿಳಿಸಿದರು.
ಇನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ. ಈ ಕುರಿತು ಚಿಂತಿಸುವುದಕ್ಕೆ ಕಾಲ ಪಕ್ವವಾಗಿಲ್ಲ. ಜಿ.ಟಿ.ದೇವೇಗೌಡರು ಜೆಡಿಎಸ್ ಶಾಸಕರಾಗಿಯೇ ಈ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ನಾನೂ ಜೆಡಿಎಸ್ನಲ್ಲಿಯೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರು ಹಾಗೂ ಜನರು ದೇವೇಗೌಡರ ಕುಟುಂಬದೊಂದಿಗೆ ಇದ್ದಾರೆ. ಅವರನ್ನು ನಮ್ಮಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ಪಕ್ಷದ ಬಗ್ಗೆ ಅಸಮಾಧಾನ ಇರುವುದು ಸಹಜ. ಆದರೆ, ನಾವು ಪಕ್ಷದಿಂದ ಹೊರಹೋಗಿಲ್ಲ. ಇನ್ನೂ ಜೆಡಿಎಸ್ನಲ್ಲಿಯೇ ಇದ್ದೇವೆ. ನನ್ನ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ನೇಹ ಗಟ್ಟಿಯಾಗಿದೆ ಎಂದು ಹೇಳಿದರು.
ಜೆಡಿಎಸ್ ತಯಾರಿಸಿದ ವೀಕ್ಷಕರ ಪಟ್ಟಿಯಲ್ಲಿ ಜಿಟಿ ದೇವೇಗೌಡರ ಹೆಸರು ಇಲ್ಲ ಎನ್ನುವುದು ನಿಜ. ಏಕೆ ಬಿಟ್ಟಿದ್ದಾರೆ ಎನ್ನುವುದು ನಮಗೆ ತಿಳಿದಿಲ್ಲ. ಪಟ್ಟಿ ತಯಾರಿಸಿದವರನ್ನೇ ಕೇಳಬೇಕು. ನಾನು ಯಾವುದೇ ಅಸಮಾಧಾನ ಹೊಂದಿಲ್ಲ. ನಮ್ಮೊಂದಿಗೆ ಕಾರ್ಯಕರ್ತರು ಗಟ್ಟಿಯಾಗಿ ಇದ್ದಾರೆ ಎಂದು ತಿಳಿಸಿದರು.
ಇನ್ನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ. ಈ ಕುರಿತು ಚಿಂತಿಸುವುದಕ್ಕೆ ಕಾಲ ಪಕ್ವವಾಗಿಲ್ಲ. ಜಿ.ಟಿ.ದೇವೇಗೌಡರು ಜೆಡಿಎಸ್ ಶಾಸಕರಾಗಿಯೇ ಈ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ನಾನೂ ಜೆಡಿಎಸ್ನಲ್ಲಿಯೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.