ಆ್ಯಪ್ನಗರ

ನಾವೀಗ ಬಾಂಬೆ ಟೀಂ ಅಲ್ಲ, ಬಿಜೆಪಿ ಟೀಂ; ಅಗತ್ಯ ಬಿದ್ರೆ 17 ಜನರಿಂದ ಮತ್ತೊಮ್ಮೆ ಸಭೆ: ಆರ್‌ ಶಂಕರ್‌

ಸಂಪುಟ ವಿಸ್ತರಣೆಯಿಂದ ಉಂಟಾದ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ನೂತನ ಸಚಿವ ಆರ್‌ ಶಂಕರ್‌, ವಿಶ್ವನಾಥ್‌, ಮುನಿರತ್ನಗೆ ಮುಂದೆ ಸಚಿವ ಸ್ಥಾನ ಸಿಗುವ ವಿಶ್ವಾಸ್‌ ಇದೆ. ಅಗತ್ಯಬಿದ್ದರೆ ಮತ್ತೆ 17 ಜನ ಮತ್ತೊಮ್ಮೆ ಸಭೆ ಸೇರಲಿದ್ದೇವೆ ಎಂದು ಅವರು ಹೇಳಿದರು.

Vijaya Karnataka Web 14 Jan 2021, 4:01 pm
ಮೈಸೂರು: ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ. ಮುಂದಿನ ದಿನಗಳಲ್ಲಿ ಎಚ್‌ ವಿಶ್ವನಾಥ್‌, ಮುನಿರತ್ನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಅಗತ್ಯ ಬಿದ್ದರೆ 17 ಜನ ಮತ್ತೊಮ್ಮೆ ಸಭೆ ಸೇರಲಿದ್ದೇವೆ. ಆದರೆ, ಅದು ಪಕ್ಷ ವಿರೋಧಿ ಚಟುವಟಿಕೆ ಆಗಲ್ಲ ಎಂದು ನೂತನ ಸಚಿವ ಆರ್‌ ಶಂಕರ್‌ ಹೇಳಿದ್ದಾರೆ.
Vijaya Karnataka Web R Shankar
ಆರ್‌ ಶಂಕರ್‌, ಸಚಿವ (ಸಂಗ್ರಹ ಚಿತ್ರ)


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಮ್ಮ ಗುರು ಎಚ್ ವಿಶ್ವನಾಥ್, ಮುನಿರತ್ನಗೆ‌ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಪಕ್ಷದ ಚೌಕಟ್ಟಿನಲ್ಲಿದ್ದಾಗ ಇತಿಮಿತಿಯೊಳಗೆ ಇರಬೇಕಾಗುತ್ತೆ. ನನಗೆ ಯಾವುದೇ ಖಾತೆ ನೀಡಿದರೂ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಚ್‌ ನಾಗೇಶ್‌ಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಿರುವುದು ಸ್ವಲ್ಪ ಸಮಾಧಾನ ತಂದಿದೆ‌. ಉಳಿದ ಇಬ್ಬರಿಗೆ ಸಿಎಂ ಬಿಎಸ್‌ ಯಡಿಯೂರಪ್ಪ ಕೈ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.
ಯಡಿಯೂರಪ್ಪ ಟೀಂನಲ್ಲಿ ಮೈಸೂರಿಗೆ ಮತ್ತೆ ನಿರಾಸೆ..! ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ರಾಮದಾಸ್‌ಇನ್ನು, ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್‌ ಶಂಕರ್‌, ಅಳದಿದ್ದರೆ ತಾಯಿ ಕೂಡ ಮಗುವಿಗೆ ಹಾಲು ನೀಡಲ್ಲ. ಈ ಕುರಿತು ಸರಕಾರದ ಗಮನ ಸೆಳೆಯಬೇಕು. ಇದು ಯಾರ ವಿರುದ್ಧವೂ ಹೋರಾಟವಲ್ಲ. ಕೆಎಸ್‌ ಈಶ್ವರಪ್ಪ ಹೋರಾಟದ ನೇತೃತ್ವ ವಹಿಸಿದ್ದಾರೆ. ನಾನು ಕುರುಬ ಸಮಾಜದ ಸಾಮಾನ್ಯ ವ್ಯಕ್ತಿಯಾಗಿ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.

ಬಿಎಸ್‌ವೈ ಟೀಂನಲ್ಲಿ ಬೆಂಗಳೂರು, ಬೆಳಗಾವಿಗೆ ರಾಜಾತಿಥ್ಯ..! 13 ಜಿಲ್ಲೆಗಳಿಗಿಲ್ಲ ಮಂತ್ರಿ ಭಾಗ್ಯ

ಈ ಬಗ್ಗೆ ಮೊದಲು ರಾಜ್ಯ ಸರಕಾರ ನಿಲುವು ಸ್ಪಷ್ಟಪಡಿಸಲಿ ಎಂಬ ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯಿಸಿ, ಈಗ ಸಂಪುಟದಲ್ಲಿ ನಾವು ಕುರುಬ ಸಮುದಾಯದ ನಾಲ್ಕು ಜನ ಮಂತ್ರಿಗಳು ಇದ್ದೇವೆ. ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಆರ್‌ ಶಂಕರ್‌ ತಿಳಿಸಿದರು.

ಮುಂದಿನ ಲೇಖನ