ಆ್ಯಪ್ನಗರ

ಹುಲಿ ಕಾಡಲ್ಲಿ ಆನೆಗಳು ಅಧಿಕ

ಉದ್ಯಾನದಲ್ಲೀಗ ಹುಲಿ ಮತ್ತು ಆನೆಗಳ ಸಂತತಿ ಹೆಚ್ಚಿರುವುದರಿಂದ ಕಾಡಿನಿಂದ ಹೊರಬಂದು ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ವನ್ಯಪ್ರಾಣಿಗಳಿಗೂ, ಮಾನವನಿಗೂ ಸಂಘರ್ಷವನ್ನು ಸಂಪೂರ್ಣ ನಿಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ

Vijaya Karnataka Web 13 Aug 2020, 12:28 am
ಹುಣಸೂರು: ದೇಶದ 50 ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ನಾಗರಹೊಳೆ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಉದ್ಯಾನ ಎಂದು ನಾಗರಹೊಳೆ ಹುಲಿ ಯೋಜನೆ ಮುಖ್ಯಸ್ಥ ಡಿ.ಮಹೇಶ್‌ಕುಮಾರ್‌ ತಿಳಿಸಿದರು.
Vijaya Karnataka Web ಆನೆ
ಆನೆ


ವಿಶ್ವ ಆನೆಗಳ ದಿನಾಚರಣೆ ಅಂಗವಾಗಿ ಉದ್ಯಾನದ ಮತ್ತಿಗೋಡು ಹಾಗೂ ದೊಡ್ಡ ಹರವೆ ಕಾವೇರಿ ಸಾಕಾನೆ ಶಿಬಿರಗಳಲ್ಲಿ ಸಾಕಾನೆಗಳ ಅತ್ಯುತ್ತಮ ಪಾಲನೆಗಾಗಿ ಸಿಬ್ಬಂದಿಯನ್ನು ಸನ್ಮಾನಿಸಿ, ಬಹುಮಾನ ವಿತರಿಸಿ ಮಾತನಾಡಿದರು.

''2017ರ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6049 ಆನೆಗಳಿದ್ದು, ಆನೆಗಳ ಸಾಂದ್ರತೆ ರಾಜ್ಯದಲ್ಲಿ ಪ್ರತಿ ಚ.ಕಿ.ಮೀಗೆ 0.6 ಆನೆಗಳಿದ್ದರೆ, ನಾಗರಹೊಳೆ ಉದ್ಯಾನದಲ್ಲಿ 1.5ರಷ್ಟಿದೆ. ಇಲ್ಲಿ 1500-2000 ಆನೆಗಳಿವೆ ಎಂದು ಅಂದಾಜಿಸಲಾಗಿದೆ. ಆನೆಗಳ ಸ್ವಚ್ಛಂದ ಬದುಕಿಗೆ ನಾಗರಹೊಳೆ ಪ್ರಶಸ್ತ ಸ್ಥಳವಾಗಿದೆ. ಮಾಂಸಾಹಾರಿ ಮತ್ತು ಸಸ್ಯಾಹಾರಿ ಪ್ರಾಣಿಗಳ ಸಮತೋಲನ ಇಲ್ಲಿದೆ. ಹುಲಿ ಹಾಗೂ ಆನೆ ಸಾಂದ್ರತೆಯಲ್ಲಿರಾಜ್ಯ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ'' ಎಂದರು.

''ಉದ್ಯಾನದಲ್ಲೀಗ ಹುಲಿ ಮತ್ತು ಆನೆಗಳ ಸಂತತಿ ಹೆಚ್ಚಿರುವುದರಿಂದ ಕಾಡಿನಿಂದ ಹೊರಬಂದು ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ವನ್ಯಪ್ರಾಣಿಗಳಿಗೂ, ಮಾನವನಿಗೂ ಸಂಘರ್ಷವನ್ನು ಸಂಪೂರ್ಣ ನಿಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ'' ಎಂದು ಹೇಳಿದರು.

ಎಸಿಎಫ್‌ ಸತೀಶ್‌.ಎ.ವಿ, ಆರ್‌ಎಫ್‌ಓಗಳಾದ ವೈ.ಕಿರಣ್‌ಕುಮಾರ್‌, ಎಸ್‌. ಹನುಮಂತರಾಜು, ಪಶುವೈದ್ಯ ಡಾ.ಮುಜೀಬ್‌ ರೆಹಮಾನ್‌ ಹಾಗೂ ಆನೆಚೌಕೂರು ವಲಯ ಹಾಗೂ ದೊಡ್ಡ ಹರವೆ ಶಿಬಿರದ ಸಿಬ್ಬಂದಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ