ಆ್ಯಪ್ನಗರ

ರೂಪಾಂತರಿ ಕೊರೊನಾ ಆತಂಕ ಮತ್ತೆ ಶುರು! ಗಡಿ ಭಾಗದ ಚೆಕ್‌ಪೋಸ್ಟ್‌ನಲ್ಲಿ ಹೈ ಅಲರ್ಟ್..!

ಗಡಿ ಮೂಲಕ ಕರ್ನಾಟಕ ಪ್ರವೇಶಿಸುವವರ ಮೇಲ್ವಿಚಾರಣೆಗಾಗಿ ಹೆಚ್.ಡಿ.ಕೋಟೆಯ ಬಾವಲಿ ಚೆಕ್ ಪೋಸ್ಟ್ ನಲ್ಲಿ ಟೈಟ್ ಚೆಕ್ಕಿಂಗ್ ಮಾಡಲಾಗುತ್ತಿದೆ. ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯೂರೋ ವೈರಸ್ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇನ್ನು ಈ ವೈರಸ್ ನಿಂದ ವಾಂತಿ-ಬೇಧಿ, ಕಾಣಿಸಿಕೊಳ್ಳುವ ಭೀತಿಯಲ್ಲಿ ತನಿಖೆ ಆರಂಭಿಸಿದ್ದು, ಗಡಿ ಭಾಗದ 28 ಹಳ್ಳಿಗಳಲ್ಲಿ ಆರೋಗ್ಯ ಸಿಬ್ಬಂದಿ ಸಂಚಾರ ಆರಂಭಿಸಿದ್ದಾರೆ.

guest Srinidhi-H-S | Lipi 27 Nov 2021, 2:17 pm
ಮೈಸೂರು: ಜಗತ್ತಿನಾದ್ಯಂತ ಕೊರೊನಾ ಹೊಸ ತಳಿ ಆತಂಕ ಸೃಷ್ಟಿಯಾದ ಹಿನ್ನೆಲೆ ಕೇರಳ ಮತ್ತು ಕರ್ನಾಟಕ ಗಡಿಭಾಗದಲ್ಲಿ ಆರೋಗ್ಯಾಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
Vijaya Karnataka Web checkpoint


ಭಾರತಕ್ಕೆ ಕೋವಿಡ್ ಹೊಸ ತಳಿಯ ಆತಂಕ ದಿನದಿಂದ ದಿನಕ್ಕಕೆ ಹೆಚ್ಚಾಗಿದ್ದು , ಕರ್ನಾಟಕದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಕೇರಳದಲ್ಲಿ ಇತ್ತೀಚೆಗೆ ನ್ಯೂರೋ ವೈರಸ್ ವರದಿ ಹಿನ್ನೆಲೆ ಗಡಿ ಮೂಲಕ ಕರ್ನಾಟಕ ಪ್ರವೇಶಿಸುವವರ ಮೇಲ್ವಿಚಾರಣೆಗಾಗಿ ಹೆಚ್.ಡಿ.ಕೋಟೆಯ ಬಾವಲಿ ಚೆಕ್ ಪೋಸ್ಟ್ ನಲ್ಲಿ ಟೈಟ್ ಚೆಕ್ಕಿಂಗ್ ಮಾಡಲಾಗುತ್ತಿದೆ. ಅಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯೂರೋ ವೈರಸ್ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇನ್ನು ಈ ವೈರಸ್ ನಿಂದ ವಾಂತಿ-ಬೇಧಿ, ಕಾಣಿಸಿಕೊಳ್ಳುವ ಭೀತಿಯಲ್ಲಿ ತನಿಖೆ ಆರಂಭಿಸಿದ್ದು, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ನೇತೃತ್ವದಲ್ಲಿ, ಗಡಿ ಭಾಗದ 28 ಹಳ್ಳಿಗಳಲ್ಲಿ ಆರೋಗ್ಯ ಸಿಬ್ಬಂದಿ ಸಂಚಾರ ಆರಂಭಿಸಿದ್ದಾರೆ.
ರೂಪಾಂತರಿ ಕೊವಿಡ್ ವೈರಸ್ ಬಹಳ ವೇಗವಾಗಿ ಹರಡುತ್ತಿದೆ, ಎಚ್ಚರವಾಗಿರಿ; ಡಾ ಕೆ ಸುಧಾಕರ್ ಸೂಚನೆ
ಸಿಬ್ಬಂದಿಗೆ ಟ್ರೈನಿಂಗ್
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ನೊರೋ ವೈರಸ್ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ನೂರೋ ವೈರಸ್‌ನಿಂದ ವಾಂತಿ, ಬೇದಿ, ಕಾಣಿಸಿಕೊಳ್ಳುವ ಭೀತಿಯಲ್ಲಿ ಸಕಲ ಮುನ್ನೆಚ್ಚರಿಕೆ ವಹಿಸಲಾಗ್ತಿದೆ . ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕೊಂಚವೂ ನಿರ್ಲಕ್ಷ್ಯ ವಹಿಸದೇ ತಪಾಸಣೆ ಮಾಡಲಾಗ್ತಿದೆ.

ನಿರ್ಲಕ್ಷ್ಯ ವಹಿಸಿದ್ರೆ ಡೇಂಜರ್!
ಕೊರೊನಾ ಬಂದಾಗಿನಿಂದಲೂ ಜನರ ಬದುಕು ನಿರ್ವಹಣೆ ಕಷ್ಟ ಆಗಿದೆ. ಒಂದು ಮತ್ತು ಎರಡನೇ ಅಲೆ ನಿಯಂತ್ರಣಕ್ಕೆ ಲಾಕ್‌ಡೌನ್ ಮಾಡಿದ ಪರಿಣಾಮ ಜನರು ಸಂಕಷ್ಟ ಅನುಭವಿಸಿದ್ರು . ಈಗ ಒಂದು ವೇಳೆ ಮೂರನೇ ಅಲೆ ಹೆಚ್ಚಾದ್ರೆ ಮತ್ತೆ ಸಂಕಷ್ಟದ ಸ್ಥಿತಿ ನಿರ್ಮಾಣವಾಗುತ್ತೆ. ಲಾಕ್‌ಡೌನ್‌ನಂತಹ ಪರಿಸ್ಥಿತಿ ಎದುರಾದ್ರೆ ಬದುಕು ಮೂರಾಬಟ್ಟೆ ಆಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸದೇ ಈಗಿನಿಂದಲೇ ಅಗತ್ಯ ಕ್ರಮಗಳನ್ನ ಜರುಗಿಸಬೇಕಾಗಿದೆ. ಈ ಹಿಂದೆ ಸೋಂಕು ಹೆಚ್ಚಾದ ಬಳಿಕ ಕ್ರಮಕ್ಕೆ ಮುಂದಾಗಿದ್ದ ಸರ್ಕಾರ ಇದೀಗ ಆರಂಭಿಕ ಹಂತದಲ್ಲಿ ಮುನ್ನೆಚ್ಚರಿಕೆ ವಹಿಸಿದೆ. ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಹೆಚ್ಚು ನಿಗಾ ವಹಿಸಲಾಗುತ್ತಿದೆ .ನಿರ್ಲಕ್ಷ್ಯ ವಹಿಸದಂತೆ ಸಿಬ್ಬಂದಿಗೂ ಎಚ್ಚರಿಕೆ ನೀಡಲಾಗಿದೆ.
ಹೊಸ ಕೋವಿಡ್ ತಳಿಗೆ 'ಒಮಿಕ್ರಾನ್' ಎಂದು ನಾಮಕರಣ: ಇದು ಆತಂಕಕಾರಿ ಸೋಂಕು ಎಂದ WHO
ವ್ಯಾಕ್ಸಿನೇಷನ್‌ಗೆ ಪ್ರಾಮುಖ್ಯತೆ ಸಿಗಲಿ
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ವ್ಯಾಕ್ಸಿನೇಷನ್ ಸದ್ಯ ಎಲ್ಲೆಡೆ ಮಾಡಲಾಗುತ್ತಿದೆ . ಕೆಲ ಜನರು ವ್ಯಾಕ್ಸಿನೇಷನ್ ಪಡೆಯದೇ ಹಾಗೇಯೇ ನಿರ್ಲಕ್ಷ್ಯ ವಹಿಸಿದ್ದಾರೆ . ಅಂಥವರನ್ನ ಗುರುತಿಸಿ ಲಸಿಕೆ ನೀಡಬೇಕಾಗುತ್ತದೆ ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ