ಆ್ಯಪ್ನಗರ

ಯಡಿಯೂರಪ್ಪ ಟೀಂನಲ್ಲಿ ಮೈಸೂರಿಗೆ ಮತ್ತೆ ನಿರಾಸೆ..! ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ರಾಮದಾಸ್‌

ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗಿ ಸಪ್ತ ಸಚಿವರು ಬಿಎಸ್‌ವೈ ಟೀಂಗೆ ಸೇರಿದ್ದಾರೆ. ಆದರೆ, ಸಂಪುಟ ವಿಸ್ತರಣೆಯಲ್ಲಿ ಮೈಸೂರು ಭಾಗದ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದ್ದು, ಒಬ್ಬರಿಗೂ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ನಿರಾಶರಾಗಿದ್ದಾರೆ.

Vijaya Karnataka Web 13 Jan 2021, 11:17 pm
ಮೈಸೂರು: ಸಂಪುಟ ವಿಸ್ತರಣೆಯಲ್ಲಿ ಮೈಸೂರು ಭಾಗದ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದ್ದು, ಒಬ್ಬರಿಗೂ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ನಿರಾಶರಾಗಿದ್ದಾರೆ. ಶಾಸಕ ರಾಮದಾಸ್‌ ಹಾಗೂ ಅಪ್ಪಚ್ಚು ರಂಜನ್‌ ಬಹಿರಂಗವಾಗಿಯೇ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Vijaya Karnataka Web RAMADAS
ರಾಮದಾಸ್‌, ಶಾಸಕ (ಸಂಗ್ರಹ ಚಿತ್ರ)


ಸಚಿವ ಸಂಪುಟದಲ್ಲಿಈ ಭಾಗಕ್ಕೆ ಅವಕಾಶ ಲಭ್ಯವಾಗದಿರುವುದು ಹಳೆಯ ಮೈಸೂರು ಪ್ರಾಂತ್ಯಕ್ಕೆ ಆದ ಅನ್ಯಾಯ. ಜಿಲ್ಲೆಯ ಬೇರೆಯಾರನ್ನಾದರೂ ಮಂತ್ರಿ ಮಾಡಬಹುದಿತ್ತು ಎಂದು ರಾಮದಾಸ್‌ ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ನಗರದ ಯುವಮೋರ್ಚಾ ಅಧ್ಯಕ್ಷನಾಗಿ ಪಕ್ಷದ ಕೆಲಸ ಪ್ರಾರಂಭ ಮಾಡಿದವನು. ರಾಜ್ಯದ ಬಿಜೆಪಿ ಯುವಮೋರ್ಚಾ ಅಧ್ಯಕ್ಷನಾಗಿ ಸತತ ಎರಡು ಬಾರಿ ಸೇವೆ ಸಲ್ಲಿಸಿದ್ದೇನೆ. 28 ವರ್ಷಗಳಿಂದ ಸಾಕಷ್ಟು ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಈ ಭಾಗದಲ್ಲಿ ಗೆದ್ದ 11 ಬಿಜೆಪಿ ಶಾಸಕರಲ್ಲಿ 10 ಮಂದಿ ಪಕ್ಷಬಿಟ್ಟು ಅನ್ಯಪಕ್ಷಕ್ಕೆ ಹೋಗಿದ್ದಾರೆ ಎಂದಿದ್ದಾರೆ.

ಬಿಎಸ್‌ವೈ ಟೀಂನಲ್ಲಿ ಬೆಂಗಳೂರು, ಬೆಳಗಾವಿಗೆ ರಾಜಾತಿಥ್ಯ..! 13 ಜಿಲ್ಲೆಗಳಿಗಿಲ್ಲ ಮಂತ್ರಿ ಭಾಗ್ಯ

ಪಕ್ಷ ನನ್ನ ತಾಯಿ. ಅದರ ಘನತೆ ಕಾಪಾಡುವುದು ನನ್ನ ಕರ್ತವ್ಯ ಎಂದು ಅರಿತವನು ನಾನು. ನಾನೊಬ್ಬ ನಿಜವಾದ ಸ್ವಯಂಸೇವಕ. ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧವಾದುದು ಎಂದು ಹೇಳಿದ್ದಾರೆ. ಸಂಕ್ರಾಂತಿ ಅತೃಪ್ತಿ ಶಮನಕ್ಕೆ ಯುಗಾದಿ ಅಸ್ತ್ರ..! ಸಂಪುಟ ತಲೆನೋವಿಗೆ ಬಿಜೆಪಿಯಿಂದ 'ಬೈ ಎಲೆಕ್ಷನ್‌' ಪ್ಲಾನ್‌ಮೈಸೂರು ಭಾಗದಲ್ಲಿ ರಾಮದಾಸ್‌ ಅವರಿಗೆ ಅವಕಾಶ ಒಲಿಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಮಂಗಳವಾರ ರಾತ್ರಿ ವೇಳೆಗೆ ಯಾವುದೇ ಕರೆ ಬಾರದಿದ್ದಾಗ ನಿರಾಸೆ ಕವಿಯಿತು. 7 ನೂತನ ಸಚಿವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ