ಆ್ಯಪ್ನಗರ

ಪಾಲಿಕೆ ಚುನಾವಣೆ: ಮುಂದುವರಿದ ಮನಸ್ತಾಪ

ಪಾಲಿಕೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿ 5 ದಿನ ಕಳೆದರೂ ಚುನಾವಣೆಗೆ ಸಂಬಂಧಿಸಿದ ಮನಸ್ತಪಾಗಳು ಮುಂದುವರಿದಿದ್ದು , ಶನಿವಾರ ಕಾಂಗ್ರೆಸ್‌ ಕಚೇರಿಯಲ್ಲಿ ಪಾಲಿಕೆ 26 ನೇ ವಾರ್ಡ್‌ನ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

Vijaya Karnataka 9 Sep 2018, 5:00 am
ಮೈಸೂರು: ಪಾಲಿಕೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿ 5 ದಿನ ಕಳೆದರೂ ಚುನಾವಣೆಗೆ ಸಂಬಂಧಿಸಿದ ಮನಸ್ತಪಾಗಳು ಮುಂದುವರಿದಿದ್ದು , ಶನಿವಾರ ಕಾಂಗ್ರೆಸ್‌ ಕಚೇರಿಯಲ್ಲಿ ಪಾಲಿಕೆ 26 ನೇ ವಾರ್ಡ್‌ನ ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
Vijaya Karnataka Web palike election continued impact
ಪಾಲಿಕೆ ಚುನಾವಣೆ: ಮುಂದುವರಿದ ಮನಸ್ತಾಪ


ಪಾಲಿಕೆ ಚುನಾವಣೆ ಸೋಲಿನಿಂದ ಅಭ್ಯರ್ಥಿಗಳು ಇನ್ನೂ ಹೊರ ಬಂದಿಲ್ಲ. ಮೈಸೂರಿನ 26ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋತಿರುವ ಹಿನ್ನೆಲೆ ನಗರ ಕಾಂಗ್ರೆಸ್‌ ಕಚೇರಿಯಲ್ಲಿ ಮುಖಂಡರ ಸಮ್ಮುಖದಲ್ಲೇ ಕಾರ್ಯಕರ್ತರು ಪರಸ್ಪರ ಕಿತ್ತಾಡಿದ್ದು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಆರೋಪ ಎದುರಾಗಿದೆ. ಪಾಲಿಕೆ ಮಾಜಿ ಸದಸ್ಯ ಸುನಂದಕುಮಾರ್‌ ಅವರನ್ನು ಏಕ ವಚನದಲ್ಲೇ ರೆಹಮತ್‌ ಉಲ್ಲಾ ಟಿಪ್ಪು ನಿಂದಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆಂದು ಕಾಂಗ್ರೆಸ್‌ ನಾಯಕರ ಮುಂದೆ ಕೂಗಾಡಿದ್ದಾರೆ.

ಸುನಂದ್‌ಕುಮಾರ್‌ ಜತೆಗೆ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ರಿಹಾನಾ ಭಾನು ಸಹ ಜೆಡಿಎಸ್‌ಗೆ ಬೆಂಬಲ ನೀಡಿದ್ದಾರೆಂದು ಗಂಭೀರ ಆರೋಪ ಮಾಡಿದ ರೆಹಮತ್‌ ಕೆಲ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಉಳಿದವರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ